ಈಗಲೇ ಎಚ್ಚೆತ್ತುಕೊಳ್ಳದಿರೆ ಮುಂದೆ ತಡವಾಗಿ ಬಿಡಬಹುದು!

ಈಗಲೇ ಎಚ್ಚೆತ್ತುಕೊಳ್ಳದಿರೆ ಮುಂದೆ ತಡವಾಗಿ ಬಿಡಬಹುದು!

ಬರಹ

ಉಗ್ರರ ಅಟ್ಟಹಾಸಕ್ಕೆ ಬಲಿಯಾಗಲು ಮುಗ್ಧ ಜೀವಗಳು
ಸಾಂತ್ವನ ನೀಡಲು ಬರುವರು ನಮ್ಮ ನಾಯಕರುಗಳು

ಈ ನಾಯಕರುಗಳಿಗೆ ಸದಾ ಕಾವಲು ಪಡೆಯ ಸುರಕ್ಷೆ
ದೇಶದ ಜನರಿಗೆ ಯಾರು ನೀಡುವರಿಲ್ಲಿ ಅಭಯ ಭಿಕ್ಷೆ

ಪ್ರತೀ ದಾಳಿಯ ನಂತರ ಬಿಗಿಗೊಂಡರೂ ದೇಶದ ಭದ್ರತೆ
ಪ್ರತೀ ದಾಳಿಯಲೂ ಕಾಣಬಹುದು ಹೆಚ್ಚಿರುವ ಉಗ್ರತೆ

ದೇಶೀ ನಾಯಕರುಗಳು ಇಲ್ಲಿ ಬಲಿಪಶುಗಳಾಗುತ್ತಿದ್ದಾರೆ
ವಿದೇಶೀಯರಿಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ

ವಿದೇಶಿ ಬಂದು ಸೇರಿದ ಮನೆಯಲ್ಲಿ ಇನ್ನಾರೂ ಉಳಿದಿಲ್ಲ
ದೇಶಕಂತ್ಯ ಕಾಣಿಸದೇ ಬಹುಷಃ ಇಲ್ಲಿಂದ ಮರಳುವುದಿಲ್ಲ

ವಿದೇಶಿ ಆಡುತಿರುವ ಆಟ ಅರಿಯದವರು ಯಾರೂ ಇಲ್ಲಿಲ್ಲ
ಅರಿತೂ ಭೀಷ್ಮ ಪಿತಾಮಹನಂತೆಲ್ಲಾ ಮೌನಿಯಾಗಿರುವರಲ್ಲ

ಜ್ಞಾನಿಗಳ ಈ ಮೌನ ನಮ್ಮೀ ದೇಶಕ್ಕೇ ಮುಳುವಾಗಬಹುದು
ಈಗಲೇ ಎಚ್ಚೆತ್ತುಕೊಳ್ಳದಿರೆ ಮುಂದೆ ತಡವಾಗಿ ಬಿಡಬಹುದು