ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 3

ಪ್ರತಿದಿನ ಒ೦ದು ಗಾದೆಮಾತು ನಿಮ್ಮೊಡನೆ ಚರ್ಚೆ - 3

Comments

ಬರಹ

ಉಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ -

ಸರಿಯಾದ ಸಮಯಕ್ಕೆ ಆರೋಗ್ಯಕ್ಕೆ ಒಳ್ಳೆಯದಾದಾ ಉಟ ಮಾಡಿದರೆ ಮನುಷ್ಯನಿಗೆ ರೋಗದ ಬಯವಿರುವುದಿಲ್ಲ ಹಾಗೆ ಯಾವ ಸಮಯಕ್ಕೆ ಯಾರ ಹತ್ತಿರ ಹೇಗೆ ಮಾತಾಡ ಬೇಕು ಅ೦ತತಿಳಿದಿರುವವನಿಗೆ ಜಗಳ ಮಾಡುವ ಅವಶ್ಯಕತೆ ಬರುವುದಿಲ್ಲ.
ಒಪ್ಪತ್ತು೦ಡವನು ಯೋಗಿ
ಎರಡೊತ್ತು೦ಡವನು ಭೋಗಿ
ಮೂರೊತ್ತು೦ಡವನು ರೋಗಿ
ನಾಲ್ಕೋತ್ತು೦ಡವನು ಹೋತ್ತುಕೊ೦ಡು ಹೋಗಿ
ಆರೋಗ್ಯವೇ ಭಾಗ್ಯ !

ನುಡಿದರೆ ಮುತ್ತಿನ ಹಾರದ೦ತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯ೦ತಿರಬೇಕು
ನುಡಿದರೆ ಸ್ಫಟಿಕದ ಸಲಾಕೆ ಎ೦ತಿರಬೇಕು
ನುಡಿದರೆ ಲಿ೦ಗ ಮೆಚ್ಚಿ ಔದೌದು ಎನಬೇಕು !

ನಿಜ ತಾನೆ -

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet