ಗುರು-ಶಿಷ್ಯ

ಗುರು-ಶಿಷ್ಯ

ಶಂಕರಾಚಾರ್ಯರ ಒಬ್ಬ ಶಿಷ್ಯ. ನಿತ್ಯವೂ ಉಳಿದ ಶಿಷ್ಯಯರೊಡನೆ ಮೌನವಾಗಿ ಕುಳಿತುಕೊಳ್ಳುತ್ತಿದ್ದ.ಮಾತೇ ಇಲ್ಲ. ಉಳಿದ ಶಿಷ್ಯರೆಲ್ಲರಿಗೆ ಇವನ ಬಗ್ಗೆ ಅಸಡ್ಡೆ. ಇವನೊಬ್ಬ ಪೆದ್ದನೆಂಬ ಪಟ್ಟ. ಈ ಶಿಷ್ಯನಾದರೋ ಗುರುವಿನ ಮುಂದೆ ಕುಳಿತರೆ ಗುರುಗಳನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದ. ನಿತ್ಯವೂ ನೋಡುತ್ತಾ, ನೋಡುತ್ತಾ, ಗುರುಗಳನ್ನೇ ಇವನಲ್ಲಿ ತುಂಬಿಕೊಂಡಿದ್ದ.
ಒಂದುದಿನ ನದಿಯ ಆಚೆ ಬದಿಯಲ್ಲಿ ಶಂಕರರು. ಈಚೇ ಬದಿಯಲ್ಲಿ ಶಿಷ್ಯರು ಇದ್ದಾರೆ. ಶಂಕರರು ಈ ಶಿಷ್ಯನನ್ನು ಕೂಗುತ್ತಾರೆ. ಕೂಡಲೇ ಮುಂದಿರುವ ನದಿಯಲ್ಲಿ ಹೊರಟೇ ಬಿಟ್ಟ. ಉಳಿದ ಶಿಷ್ಯರೆಲ್ಲರಿಗೆ ಆಶ್ಚರ್ಯ. ನೋಡುತ್ತಾರೆ. ಈ ಶಿಷ್ಯ ಒಂದೊಂದು ಹೆಜ್ಜೆ ನದಿಯಲ್ಲಿ ಇಟ್ಟಾಗಲೂ ಒಂದೊಂದು ಕಮಲದ ಎಲೆ ನದಿಯಮೇಲೆ ಕಾಣುತ್ತಿದೆ. ಅದರ ಮೇಲೆ ಈ ಶಿಷ್ಯ ನಡೆದು ಹೋಗುವ ಅದ್ಭುತ ದೃಶ್ಯವನ್ನು ಕಂಡ ಉಳಿದ ಶಿಷ್ಯರಿಗೆ ಏನಾಗಿರಬೇಕು?

Rating
No votes yet

Comments