ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !

ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !

ಬರಹ

ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ ! ಮುಂಬೈ,12, ಏಪ್ರಿಲ್, ೨೦೦೬

ಅವರ ಹಲವಾರು ಚಿತ್ರಗಳನ್ನು ನಾನು ನೊಡಿದ್ದೇನೆ. 'ಗಂಧದ ಗುಡಿ' ನನ್ನ ಪ್ರಿಯವಾದ ಚಿತ್ರಗಳಲ್ಲೊಂದು ! ಅವರು ಹೇಳಿದ 'ಯಾರೇ ಕೂಗಾಡಲೀ' ಹಾಡೂ, ಬಹಳ ಇಷ್ಟ. ಅವರ ಹಲವಾರು ಗೀತೆಗಳ 'ಕ್ಯಾಸೆಟ್ ಸುರಳಿಗಳು' ನನ್ನಬಳಿ ಇವೆ.
ಅವರು ಬಹಳ ಹಿಂದೆ, ಮುಂಬೈಗೆ ಬಂದಿದ್ದಾಗ, 'ಕರ್ನಾಟಕ ಸಂಘ,' ಮಾಹೀಮ್, ಅವರು 'ರಾಜ್,'ಅವರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಸ್ಟೇಜಿನಮೇಲೆ ಭಾವ ಪರವಶರಾಗಿ ರಾಜ್ ಕುಮಾರ್ ಅವರು ನೃತ್ಯಮಾಡುತ್ತಾ ಹಾಡಿದ ನಮ್ಮ, ಅವರ ಮೆಚ್ಚಿನಗೀತೆ, "ಹುಟ್ಟಿದರೇ ಕನ್ನಡ್ನಾಡ್ನಲ್ ಹುಟ್ಟಬೇಕು, ಮೆಟ್ಟಿದರೇ......ಮೆಟ್ಟಾಬೇಕು.....ಬಂಡಿ." ಇಂದಿಗೂ ನನ್ನ ಕಿವಿಯಲ್ಲಿ ಅಲೆ ಅಲೆ ಯಾಗಿ ಚಿಮ್ಮಿ ಬರುತ್ತಿದೆ !

ಕನ್ನಡ ನಾಡಿನ ಸುಪುತ್ರ, 'ರಾಜ್'ಗೆ ನಮ್ಮ 'ಹೃದಯ ತುಂಬಿದ' ನಮನಗಳು.

ಅವರ ಆತ್ಮಕ್ಕೆ ಶಾಂತಿ ಸಿಗಲಿ.

ವೆಂಕಟೇಶ್ ಮತ್ತು ಪರಿವಾರ.