ಮಧ್ವಾಚಾರ್ಯರು

ಮಧ್ವಾಚಾರ್ಯರು

ಇದು ನನ್ನ ಗುರುಗಳಾದ ಮಂಡ್ಯದ ಡಾ. ಪ್ರದೀಪಕುಮಾರ ಹೆಬ್ರಿಯವರು ಬರೆದ ಮಧ್ವರ ಮಹಾಕಾವ್ಯದ ಮೊದಲ ಪದ್ಯ. . ಅವರ ಪರಿಚಯ ಕುರಿತು ಇನ್ನೊಮ್ಮೆ ಬರೆಯುತ್ತೇನೆ.

ನೀವಿಲ್ಲದಿರುವಲ್ಲಿ ಹರಡಿರಲು ನಿಶೆಯಂದು
ಬೆಳಗಿದಿರಿ ಲೋಕವನು ಸತ್ಯಮಾರ್ಗದಿ ಸಾಗಿ
ಎದುರಾಗಿ ಬಂದಿರಲು ನಿಮಗಂದು ವಾದಿಗಳು
ವಾದಕ್ಕೆ ಪ್ರತಿವಾದ ನಿಮಗಿಲ್ಲ ಎದುರಾಳಿ |

ಗೆದ್ದಿರೀ ಎಲ್ಲರನು ಗೆದ್ದ ಗೆಲುವಲ್ಲಿ ಹೊಳೆದು
ತೋರಿದಿರಿ ಜಗಕೆಲ್ಲ ಶ್ರೀಹರಿಯ ಮಹಿಮೆಯ
ನಿಮ್ಮೊಲವ ಕಂಡಂದು ಬಂದಿರಲು ಶ್ರೀಕೃಷ್ಣ
ನೆಲೆಯಾದ ಉಡುಪಿಯಲಿ ಶ್ರೀಕ್ಷೇತ್ರವಾಗಿಸಿ |

ಪರಶುರಾಮರ ಕ್ಷೇತ್ರ ಪಾಜಕದಿ ಜನಿಸಿದ್ದ
ಪವನಸುತ ಮಧ್ವರೆ ಜಪಿಸುವೆವು ಅನುದಿನವು
ನೀವು ತೋರಿದ ದಾರಿ ಬೆಳಕಾಗಿ ಎಲ್ಲರಿಗೆ
ನಡೆಸುವುದು ನಮ್ಮನೂ ನಿಮ್ಮ ನೆರಳಾಗಿಸಿ |

ದೈತ್ಯ ಪ್ರತಿಭೆಯ ದ್ವೈತ ಸಿದ್ಧಾಂತಿಯೇ
ಹೊಸಬೆಳಕು ನಿಮ್ಮಿಂದ ವೇದಾದಿಶಾಸ್ತ್ರಕೆ
ತ್ರೇತದಲಿ ಹನುಮ , ದ್ವಾಪರದಿ ಕಲಿಭೀಮ
ಕಲಿಯುಗದಿ ಮಧ್ವರು ಪೊರೆದರೀ ಬುವಿಯನ್ನು |

Rating
No votes yet