ಬಂದೆವಯ್ಯ ಗೋವಿಂದ ಶೆಟ್ಟಿ!
ನನಗೆ ದಾಸರ ರಚನೆಗಳು ಯಾಕೆ ಇಷ್ಟ ಅಂತ ಮತ್ತೆ ಮತ್ತೆ ಹೇಳೋದಿಲ್ಲ. ಎಷ್ಟೋ ಸಲ ಹೇಳಿದ್ದೀನಿ. ಆದ್ರೆ, ಒಂದೊಂದು ಹೊಳಹುಗಳನ್ನ ಕಂಡಾಗ, ಅದರ ವಿಷಯ ಹಂಚಿಕೊಳ್ಳೋಣ ಅನ್ನಿಸುತ್ತೆ.
ಒಂದಷ್ಟು ದಿನದ ಹಿಂದೆ ಪುರಂದರ ದಾಸರು ಹೇಳೋರೋ ತಿರುಪತಿ ತಿಮ್ಮಪ್ಪನ ದೋಸೆ ಹೋಟೆಲ್ ಗಳ ವಿಷಯ ಬರೆದಿದ್ದೆ.ಇವತ್ತು ಕನಕ ದಾಸರ ಒಂದುರಚನೆ.
ಕನಕದಾಸರು ತಿಮ್ಮಪ್ಪನ್ನ ಬರೀ ದೋಸೆ-ಅನ್ನ ಮಾರಿಸೋನು ಅಂತ ಹೇಳ್ದೇ, ಇನ್ನೂ ಎಷ್ಟೋ ತಿಂಡಿ ತಿನಿಸು ದಿನಸಿಗಳನ್ನೆಲ್ಲ ಮಾರಿಸಿ ದುಡ್ಡುಮಾಡೋ ಶೆಟ್ಟಿ ಅಂತ ನೇರವಾಗೇ ಆಪಾದಿಸಿದಾರೆ!
ಇಲ್ಲಿ ಚಿಟಕಿಸಿ ನೋಡಿ - ಬಂದೆವಯ್ಯಾ ಗೋವಿಂದ ಶೆಟ್ಟಿ! ಅನ್ನೋ ರಚನೆಯ ಬಗ್ಗೆ ನನ್ನ ಒಂದಷ್ಟು ಹರಟೆ.
ಕನ್ನಡ ಬರದ ಕೆಲವು ಆಸಕ್ತರೂ ಕೇಳಿದ್ದರಿಂದ, ನನ್ನ ಒಗ್ಗರಣೆ ಇಂಗ್ಲೀಷಿನಲ್ಲಿ ಮಾಡಿದ್ರಿಂದ, ನೇರವಾಗಿ ಸಂಪದದಲ್ಲಿ ಹಾಕಲಿಲ್ಲ.
-ಹಂಸಾನಂದಿ
Rating