ಭಕ್ತರಿಂದಲೆ ಭಕ್ತರ ಸೇವೆ
ಭಕ್ತರಿಂದಲೇ ಭಕ್ತರ ಸೇವೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಐತಿಹಾಸಿಕ, ಧಾರ್ಮಿಕ ಕ್ಷೇತ್ರವಾದ ಕೊಟ್ಟೂರಿನಲ್ಲಿ ನಾಳೆ ನಡೆಯುವ ಕೊಟ್ಟೂರೇಶ್ವರ ರಥೋತ್ಸವಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಭಕ್ತ ಸಾಗರ ಹರಿದು ಬರುತಿದ್ದು, ರತೋತ್ಸವದ ಸುಗಮ ಆಚರಣೆಗೆ ಒಂದಡೆ ಆಡಳಿತ ವ್ಯೆವಸ್ಥೆಯು ಸಕಲ ಸಿದ್ದತೆಗಳನ್ನು ಹಮ್ಮಿಕೊಂಡಿದ್ದರೆ, ಇತ್ತ ಪಟ್ಟಣದ ಸಕಲ ಭಕ್ತಾದಿಗಳಿಂದ ಪಾದಯಾತ್ರಿಗಳಿಗೆ ಸರ್ವವಿಧದಲ್ಲಿ ಸೇವೆಗಳನ್ನು ಮಾಡಲಾಗುತ್ತದೆ. ಇಂತ ಸೇವೆಗಳಂದೇನು ಇಲ್ಲ, ಅರಂಭದಲ್ಲಿ ಪಾದಯಾತ್ರಿಗಳಿಗೆ ಔಷದೋಪಚಾರ, ಕುಡಿಯಲು ನೀರು ಜೋತೆಗೆ ಮಜ್ಜಿಗೆ, ಏಳೆ ನೀರು, ಬಿಸಲಲ್ಲಿ ಬಂದವರ ಹೊಟ್ಟೆ ತಣ್ಣಗಾಗಿಸಲು ಕಲ್ಲಂಗಡಿ, ಟೀ, ಕಾಪೀ,ಊಟ, ವಿಶ್ರಾಂತಿಗೆ ತೋಟಗಳಲ್ಲಿ ಶಾಮಿಯಾನಗಳು ಹೀಗೆ ಭಕ್ತರಿಂದಲೆ ಭಕ್ತರಿಗೆ ಹಲವಾರು ಸೇವೆಗಳು ನಡೆದಿವೆ.
Rating