ಪಾಪ-ಪುಣ್ಯ
ಬರಹ
ಹೋ ಬೆಳದಿಂಗಳ ಚಂದಿರ, ಹೋ ಶ್ವೇತ ಸುಂದರ
ಹೋ ಕೆಂಪು ಸೂರ್ಯ, ಹೋ ಕೋಟಿ ಕಿರಣಗಳ ಒಡೆಯ
ನಿಮ್ಮ ಇರುವಿಕೆ ಶಾಶ್ವತ, ಆದರೂ ಸೇವೆ ನಿಸ್ವಾರ್ಥ
ನಾ ಅಧಮ ಮಾನವ, ಸ್ವಾರ್ಥ-ಅನರ್ಥಗಳ ಸಮಾಗಮ
ಬೇಡಿದೆ ಹಲವು ದೇವರುಗಳ ಸುದೀರ್ಘ ಬದುಕಾ
ಸೇವಿಸಲು ಸಂತೋಷ ನಿತ್ಯ ಸುಖ
ನಾ ಅಲೆದೆ ಆಲಯಗಳ, ಮಂದಿರ ಮಸೀದಿಗಳ
ಪಾಪಗಳ ಪರಿಹರಿಸಲು, ಪುಣ್ಯಗಳ ಕೂಡಲು
ಪಾಪವು ಕಳೆದಂತೆ,ಪುಣ್ಯ ಹೆಚ್ಚಾದಂತೆ
ಮತ್ತೆ ಪಾಪಗಳ ಮಾಡಲು ಹೊರಟೆ
ಪಾಪ-ಪುಣ್ಯಗಳ ಲೆಕ್ಕ ಸರಿದೂಗಲು
ಇಂತಿ,
ಮಹೇಶ್ಚಂದ್ರ