ಭ್ರಷ್ಟಾಚಾರದ ಬೀಜಗಳು ಇಲ್ಲಿ ನೂರ್ಕಾಲ ಬಾಳುತ್ತವೆ !

ಭ್ರಷ್ಟಾಚಾರದ ಬೀಜಗಳು ಇಲ್ಲಿ ನೂರ್ಕಾಲ ಬಾಳುತ್ತವೆ !

(ಬೊಗಳೂರು someಶೋಧನೆ ಬ್ಯುರೋದಿಂದ)‌
ಬೊಗಳೂರು, ಜೂ.21- ಸಾವಿರಾರು ವರ್ಷಗಳ ಕಾಲ ಬೀಜವನ್ನು ಸಂರಕ್ಷಿಸುವ ತಂತ್ರಜ್ಞಾನವೊಂದು ಜಗತ್ತಿಗೆ ಪರಿಚಿಸಲ್ಪಟ್ಟಿರುವುದರಿಂದ ಚಿಂತಾಜನಕವಾಗಿ ಕಳವಳಗೊಂಡಿರುವ ಬೊಗಳೂರು ಬ್ಯುರೋ, ಈ ಅಜ್ಞಾನದ some-ಶೋಧಕರನ್ನು ತದ್ವಾತದ್ವಾ ತರಾಟೆಗೆ ತೆಗೆದುಕೊಂಡ ಪ್ರಸಂಗ ವರದಿಯಾಗಿದೆ.

ಬೊಗಳೂರು ಬ್ಯುರೋದ ಈ ಕಳವಳಕ್ಕೆ ಕಾರಣವೆಂದರೆ ಇದರಲ್ಲಿ ಭಾರತೀಯ ಭ್ರಷ್ಟರಾಜಕಾರಣಿಗಳ ಕೈವಾಡವೇನಾದರೂ ಇದೆಯೇ ಎಂಬುದು. ಅಲ್ಲದೆ, ಅವರೂ ತಮ್ಮ ತಮ್ಮ ವಿವಿಧ ನಮೂನೆಯ ಬೀಜಗಳನ್ನು ಈ ಕೇಂದ್ರದಲ್ಲಿ ಠೇವಣಿ ಇರಿಸಬಹುದೆಂಬ ಆತಂಕ. ಇಂಥ ರಾಜಕಾರಣಿಗಳ ಆಯ್ಕೆಯ ಬೀಜಗಳಲ್ಲಿ ಭ್ರಷ್ಟಾಚಾರದ ಬೀಜ, ಜಾತಿ ಬೀಜ, ಕೋಮು ಸಂಘರ್ಷದ ವಿಷಬೀಜ, ಲಂಚೋಪಾಯಗಳ ಬಗೆಗಿನ ಬೀಜಗಳೂ ಸೇರಿವೆ ಎಂಬುದು ಅನ್ವೇಷಣೆ ಸಂದರ್ಭ ಬಯಲಾಗಿದೆ.

ಈ ರಾಜಕಾರಣಿಗಳು ತಮ್ಮಲ್ಲಿ ಕೂಡಿಟ್ಟು ಮಿಕ್ಕುಳಿದ ಹಣವನ್ನು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಅದುಮಿಟ್ಟಂತೆಯೇ ಮತ್ತು ಅದು ಅಲ್ಲಿ ಸುರಕ್ಷಿತವಾಗಿರುತ್ತಾ, ಯಾವಾಗ ಬೇಕಾದರಾವಾಗ ತೆಗೆಯಬಹುದಾದಂತಹ ಸೌಲಭ್ಯ ಇದೆ ಮತ್ತು ಈ ದೇಶದ ಯಾವ ಕಾನೂನು ಕೂಡ ಅದನ್ನು ಮುಟ್ಟದಂತೆ ಮಾಡಲು ಅವರೇ ಹೊಸ ಹೊಸ ಕಾನೂನುಗಳನ್ನು ಮಾಡುತ್ತಿರುವುದರಿಂದ ಅದರಿಂದ ಪ್ರೇರಣೆ ಪಡೆದು ತಮ್ಮ ಬೀಜಗಳನ್ನೂ ಅಲ್ಲಿ ಸುರಕ್ಷಿತವಾಗಿ ಕಾಪಿಡಲು ಸಿದ್ಧರಾಗಿದ್ದಾರೆ.

ಯಾವುದೇ ಪ್ರಳಯಕ್ಕೂ ಜಗ್ಗದಂತೆ ಪರ್ವತದಲ್ಲಿ 70 ಮೀಟರ್ ಕೊರೆದು ಈ ಬೀಜ ಬ್ಯಾಂಕನ್ನು ಭೂಗತವಾಗಿ ಸ್ಥಾಪಿಸಲಾಗಿದೆ. ಇದರ ರಿಮೋಟ್ ಕಂಟ್ರೋಲ್ ಇರುವುದು ಸ್ವೀಡನ್‌ನಲ್ಲಿ. ಕೇಂದ್ರ ಸರಕಾರವು ದೇಶದಲ್ಲಿ Price control ಮಾಡಲಾಗದಿದ್ದರೂ, ಇಟಲಿ ಮೂಲದ ಕೇಂದ್ರವೊಂದರ ಮೂಲಕ Remote controlled ಆಡಳಿತ ನಡೆಸುತ್ತಿರುವ ಅನುಭವದ ಹಿನ್ನೆಲೆಯಲ್ಲಿ ಈ ಬೀಜ ಬ್ಯಾಂಕಿನ ರಿಮೋಟ್ ಕಂಟ್ರೋಲ್ ಪಡೆಯಲು ಹಕ್ಕು ಮಂಡಿಸಿತ್ತಾದರೂ ಅದರಲ್ಲಿ ವಿಫಲವಾಯಿತು ಎಂದು ತಿಳಿದುಬಂದಿದೆ.
bogaleragale.blogspot.com

Rating
No votes yet