ಯಶೋಧಾನಂದನ

ಯಶೋಧಾನಂದನ

ಬರಹ

ಮಾಧವನ ಜನನದಿಂದ
ಭುವನ ಬೃಂದಾವನ./೧/.

ಕೇಶವನಾಗಮನದಿಂದ
ಚಂದನಂದನವನ./೨/.

ಕಂಸಜರಾಸಂಧರಿಂದ
ಕಂಪಿಸಿರಲು ಅವನಿ ಜನ./೩/.

ಧರೆಯನುಳಿಸಲೆಂದು ಬಂದ
ದೇವಕೀನಂದನ./೪/.

ಅಶರೀರವಾಣಿಯಿಂದ
ಕದಡಿರಲು ಕಂಸ ಮನ./೫/.

ಕ್ರೋಧಾವೇಷದಿಂದ
ವಸುದೇವಕಿ ಬಂದನ./೬/.

ಆರ್ಬಟಿಸುವ ಕಂಸನಿಂದ
ಹಸುಳೆಯರ ನಿಧನ./೭/.

ದೇವಕಿಯ ಗರ್ಭದಿಂದ
ದೇವಹರಿಯ ಜನನ./೮/.

ಕಂಸನಾ ಸೆರೆಯಿಂದ
ಗೋಕುಲಕೆ ಪಯಣ./೯/.

ಯಶೋದಾನಂದರಿಂದ
ಗೋಪಾಲನ ಪಾಲನ./೧೦/.

ಹಾಲಾಹಲದಿಂದ
ಪೂತನಿಯ ಮರಣ./೧೧/.

ರಾಕ್ಷಸರ ಮಾಯೆಯಿಂದ
ವ್ಯರ್ಥವಾದ ಪ್ರಯತ್ನ./೧೨/.

ಬೆಳೆಯುತಿರುವ ಕೃಷ್ಣನಿಂದ
ಕಂಸ ಚಿಂತಾಕ್ರಾಂತನ./೧೩/.

ಗೋಕುಲದಾ ಮನೆಗಳಿಂದ
ಗೋವಿಂದನ ಕಳ್ಳತನ./೧೪/.

ಗೋಪಿಯರ ಗುಂಪಿನಿಂದ
ಗೋಪಾಲನ ತುಂಟತನ./೧೫/.

ತಾಯಿಗೇ ಬಾಯಿಯಿಂದ
ವಿಶ್ವರೂಪ ದರ್ಶನ./೧೬/.

ಯಮುನಾ ನದಿಯಿಂದ
ಕಾಳಿಂಗ ಮರ್ದನ./೧೭/.

ಬಲರಾಮಕೃಷ್ಣರಿಂದ
ಮಥುರಾಕ್ರಮಣ./೧೮/.

ವೀರಬಾಲಕೃಷ್ಣನಿಂದ
ಕಂಸನಾ ದ್ವಂಸನ./೧೯/.

ದೇವಕೀನಂದನಿಂದ
ಅಮ್ಮನಾಲಿಂಗನ./೨೦/.

ಅಹೋರಾತ್ರ.