ಕಾಣೆಯಾದವರ ಬಗ್ಗೆ ವರದಿ !!

ಕಾಣೆಯಾದವರ ಬಗ್ಗೆ ವರದಿ !!

ಕೆಲ ವಾರಗಳಿಂದ ಕೆಲ ಸಂಪದಿಗರು ಕಾಣೆಯಾಗಿದ್ದಾರೆ. ಅವರ ಲೇಖನಗಳು ಪ್ರತಿಕ್ರಿಯೆಗಳು ಕಂಡುಬರುತ್ತಿಲ್ಲ.
ಬೇಜಾರಾಗಿ ಹೊರನಡೆದರೋ, ಐ ಡಿ ಯನ್ನು ಬದಲಿಸಿಕೊಂಡಿದ್ದಾರೋ, ಸುಮ್ಮನೆ ದೂರದಿಂದ ನಿಂತು ಸಂಪದವನ್ನು ವೀಕ್ಷಿಸುತ್ತಿದ್ದಾರೋ, ತಮ್ಮ ಕೆಲಸಗಳಲ್ಲಿ ಅತ್ಯಂತ ವ್ಯಸ್ತರಾಗಿದ್ದಾರೋ ತಿಳಿಯದು. ಇವರು ತಮ್ಮ ಇರವನ್ನು ತಿಳಿಸಬೇಕಾಗಿ ವಿನಂತಿ.

೧ prasca -- ಬಿಸಿ ಬಿಸಿ ಚರ್ಚೆಗೆ ಸಕ್ಕತ್ತಾಗಿ ಅನುವು ಮಾಡಿಕೊಡುತ್ತಿದ್ದರು.
೨. ಇಂಚರ. -- ಇವರ ಚರ್ಚೆ ಇನ್ನೂ ಬಿಸಿ.
೩. shylaswamy
೪ ರೇಖಾ ಹೆರೆನ್ಜಾಲ್
೫. ಸುಪ್ರೀತ್.
೬. summer_galu
೭. ವಾಸು -- ಭಗವದ್ಗೀತೆಯ ಬಗ್ಗೆ ಬರೆಯುತ್ತಿದ್ದವರು.
೮. ಕಮಲ -- ಮೇ ನಲ್ಲಿ ಕರ್ನಾಟಕದಲ್ಲಿ ಇರುವುದಿಲ್ಲ ಎನ್ನುತ್ತಿದ್ದರು.
೯ ಸೋಮಶೇಖರಯ್ಯ
೧೦. ರಾಘವ -- ಜ್ಯೂ .ಕೈಲಾಸಂ
11. ಹರ್ಷವರ್ಧನ್

ಇನ್ನೂ ತುಂಬಾ ಜನ ಇದ್ದಾರೆ ಅನ್ಸುತ್ತೆ. ರಾಕೇಶ್ ಶೆಟ್ಟಿ ಯವರು ಬರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಲೇಖನ ಬಂದಿಲ್ಲ. ಅಸು ಹೆಗ್ಡೆ ಕವನಗಳ ಸಂಖ್ಯೆ ಕಡಿಮೆಯಾಗಿವೆ. ಸವಿತೃ ಲೋ ಪವರ್ ಐ ಸಿ ಡಿಸೈನ್ ನಲ್ಲಿ ಬಿಜಿ ಅನ್ಸುತ್ತೆ. ಡಾ. ಮೀನಾ ಸುಬ್ಬರಾವ್ ಇತ್ತೀಚಿಗೆ ಏನೂ ಬರೆದಿಲ್ಲ. ಲಸಿಕೆಗಳ ಬಗ್ಗೆಯೂ ಬರೆದಿಲ್ಲ. ಹಾಗು ಲಸಿಕೆಗಳ ಬಗೆಗಿನ ಲೇಖನಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಅನಿವಾಸಿಗಳು ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ. ದೇವರ ಮೂಗು ಬಾಯಿ ಹುಡುಕುತ್ತಿದ್ದಾರೋ ಏನೋ ?? :) ಹನ್ನೊಂದು ಜನ ಅರವಿಂದರ ಪೈಕಿ ಒಂದಿಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ.
ನಾಪತ್ತೆಯಾದವರು ದಯವಿಟ್ಟು ಯಾಕೆ ನಾಪತ್ತೆಯಾಗಿದ್ದೇವೆ ... ಮತ್ತೆ ಯಾವಾಗ ದರ್ಶನ ಭಾಗ್ಯ ಕರುಣಿಸುತ್ತೇವೆ ಎಂದು ದಯವಿಟ್ಟು ತಿಳಿಸಬೇಕಾಗಿ ವಿನಂತಿ.

Rating
No votes yet

Comments