ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ
ಅಭಿವೃದ್ಧಿ ವಿಷಯಗಳ ಬಗ್ಗೆ ಬರೆಯುವ ಪತ್ರಕರ್ತರನ್ನು ಗೌರವಿಸುವ ಸಲುವಾಗಿ ಬೆಂಗಳೂರಿನ ಕಮ್ಯುನಿಕೇಷನ್ ಫಾರ್ ಡೆವಲಪ್ ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆಯು ಪ್ರತಿ ವರ್ಷ ಚರಕ ಪ್ರಶಸ್ತಿಗಳನ್ನು ನೀಡುತ್ತಿದೆ. ಪ್ರಶಸ್ತಿಗೆ ಇದು ಆರನೇ ವರ್ಷ. ಈ ವರ್ಷದ ಪ್ರಶಸ್ತಿಗಳನ್ನು ದಿನಾಂಕ ೦೧.೦೭.೨೦೦೯ ರಂದು ಪ್ರದಾನ ಮಾಡಲಾಗುತ್ತಿದೆ. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಸಂಜೆ ೫ ಗಂಟೆಗೆ ಕಾರ್ಯಕ್ರಮ. ಅನುಕ್ರಮವಾಗಿ ಡಾ.ಪೂರ್ಣಿಮಾ, ಮಲ್ಲಿಕಾರ್ಜುನ ಹೊಸಪಾಳ್ಯ, ಕಟ್ಟೆ ಗುರುರಾಜ್ ಮತ್ತು ಮಹೇಶ್ ಭಗೀರಥ ಅವರು ಈ ಸಲದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜುಲೈ ೧ ವಿಶ್ವ ಪತ್ರಿಕೋದ್ಯಮ ದಿನವೂ ಹೌದು.