ಕ್ರಿಕೆಟ್ಟಿಗರ ವಿಷಯದಲ್ಲಿ ಶಿವಸೇನೆಯ ದ್ವಂದ್ವ ನಿಲುವು

ಕ್ರಿಕೆಟ್ಟಿಗರ ವಿಷಯದಲ್ಲಿ ಶಿವಸೇನೆಯ ದ್ವಂದ್ವ ನಿಲುವು

Comments

ಬರಹ

ಇತ್ತೀಚಿಗೆ ತೆಂಡುಲ್ಕರ್ ವಿಷಯದಲ್ಲಿ ಶಿವಸೇನೆ ತುಂಬಾ ಬಿಸಿಯಾಗಿದೆ. ಸೌರವ್ ಗಂಗೂಲಿ ಬಂಗಾಳದ ವಿಷಯದಲ್ಲಿ ತೋರಿರುವ ನಿಷ್ಠೆಯನ್ನೇ ಸಚನ್ ಮಹಾರಾಷ್ಟ್ರಕ್ಕೆ ತೋರಬೇಕು; ಮೊದಲು ಮಹಾರಾಷ್ಟ್ರ, ನಂತರ ಭಾರತ ಎಂಬುದು ಅದರ ನಿಲುವು. ಅದರ ಟೀಕೆಗೆ ಇತ್ತೀಚಿನ ಗುರಿ ರಾಹುಲ್ ದ್ರಾವಿಡ್ ಎಂಬ ಸಭ್ಯ ಕ್ರಿಕೆಟ್ಟಿಗ! ಮಹಾರಾಷ್ಟ್ರ ಅಥವಾ ಮುಂಬೈಗೆ ಬಂದವರು ಅಲ್ಲಿಗೇ ನಿಷ್ಠೆ ಹೊಂದಿರಬೇಕು, ಮರಾಠಿ ಕಲಿಯಬೇಕು ಎಂದು ಬಯಸುವ ಶಿವಸೇನೆ, ದ್ರಾವಿಡ್ ಕರ್ನಾಟಕಕ್ಕೆ ನಿಷ್ಠೆ ತೋರಿರುವುದನ್ನು ವಿರೋಧಿಸುತ್ತದೆ. ದ್ರಾವಿಡ್ ಕರ್ನಾಟಕದಲ್ಲಿದ್ದರೂ ಅವರು ಮಹಾರಾಷ್ಟ್ರಕ್ಕೆ ನಿಷ್ಠರಾಗಿರಬೇಕೆಂದು ಬಯಸುತ್ತದೆ!


ಇವೆಲ್ಲವನ್ನೂ ಗಮನಿಸಿದಾಗ ಶಿವಸೇನೆ ಎಂದರೆ ಸರ್ವಾಧಿಕಾರದ ಮುಂದುವರೆದ ಭಾಗವೆನ್ನಿಸುತ್ತಿದೆ.


ನಿಮಗೇನನ್ನಿಸುತ್ತದೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet