ಮತ್ತೆ ೨೬/೧೧...

ಮತ್ತೆ ೨೬/೧೧...

ಬರಹ

ನೆತ್ತರು ಬಸಿದುಕೊಂಡ ಭುವಿ ತಣ್ಣಗಾಗಿಲ್ಲ
ಮಾಲ್ ಗಳಲ್ಲಿ ಸ್ವಲ್ಪೇ ದಿನ , ಗದ್ದಲವಿರಲಿಲ್ಲ...!
ಕತೆ ಕೇಳುತ ತೂಕಡಿಸುತ ಕೂತಿಹೆವು ನಾವೆಲ್ಲ
ನಾವ್ಯಾಕೆ ಹಿಂಗೆ ಈ ಪ್ರಶ್ನೆಯೇ ಬೇಡ
ಮತ್ತಾರೋ ಮಹ್ಮದ್ ಹೆ(ಡೆ)ಡ್ಲಿ ಯಾಗಿ
ನಮ್ಮೋಣಿಯಲ್ಲಿಯೇ ಸುತ್ತುತಿಹನಲ್ಲ...!
ಕಳೆದಿದೆ ವರ್ಷ ಆಕಳಿಕೆ ಹೋಗಿಲ್ಲ..
ಯಾರೋ ಸುರಿಸಿದ ನೆತ್ತರು ನಮಗಾಗಿ..
ಚಟ್ನಿಗೆ ಹಾಕಿದ ಖಾರ ಜಾಸ್ತಿ ನಮ್ಮ
ಗೊಣಗಾಟ  ಮುಗಿಯುತ್ತಲೇ  ಇಲ್ಲವಲ್ಲ...!