೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ಕಲಿಸಿದೆಯೇ??

೨೬/೧೧ರ ಹತ್ಯಾಕಾಂಡ ನಮ್ಮ ವಿದ್ಯಾವಂತರಿಗೆ ಸ್ವಲ್ಪವಾದರೂ ಬುದ್ಧಿ ಕಲಿಸಿದೆಯೇ??

Comments

ಬರಹ

 ೨೬/೧೧ರ ದುರಂತದ ಪ್ರಥಮ ವಾರ್ಷಿಕೋತ್ಸವ ನಡೆಯುತ್ತಿದೆ, ಎಲ್ಲೆಡೆ ಅಂದು ಪ್ರಾಣ ತೆತ್ತವರಿಗಾಗಿ ಶ್ರದ್ಧಾಂಜಲಿ ಸಭೆಗಳು ನಡೆಯುತ್ತಿವೆ.  ಆದರೆ ಒಮ್ಮೆಯಾದರೂ, ಒಬ್ಬರಾದರೂ ನಮ್ಮ ಅತ್ಯುನ್ನತ ಅಸ್ತ್ರವಾದ "ಮತದಾನದ" ಬಗ್ಗೆ ಚಕಾರವೆತ್ತಿಲ್ಲ.  ಎಲ್ಲರೂ ಮತ ಚಲಾಯಿಸಿ, ಈಗಿರುವ ೪೫-೫೦% ಮತದಾನ ಮುಂದಿನ ಚುನಾವಣೆಗಳಲ್ಲಿ ೧೦೦% ಮುಟ್ಟಿ, ಅಯೋಗ್ಯರನ್ನು, ಭ್ರಷ್ಟರನ್ನು ಅಧಿಕಾರದಿಂದ ಹೊರಗಿಟ್ಟರೆ, ಈಗ್ಗೆ ವರ್ಷದ ಹಿಂದಾದ ಬಲಿದಾನಗಳಿಗೊಂದು ಅರ್ಥ ಬರಬಹುದು.  ಕೇಂದ್ರದಲ್ಲಿ ಕೇವಲ ಮುಸ್ಲಿಮರ ಹಾಗೂ ಪರಿಶಿಷ್ಟ ಜಾತಿಗಳ ವೋಟಿನ ಮೇಲೇ ಅವಲಂಬಿತವಾಗಿರುವ, ಕಾಂಗ್ರೆಸ್ನಂತಹ ನಿರ್ವೀರ್ಯ ಸರ್ಕಾರ ಅಧಿಕಾರದಲ್ಲಿರುವವರೆಗೂ ಬಹುಶ: ಈ ಗೋಳು ತಪ್ಪುವುದಿಲ್ಲ ಅನ್ನಿಸುತ್ತದೆ.  ಇಲ್ಲದಿದ್ದಲ್ಲಿ ಇಂತಹ ನೂರಾರು ೨೬/೧೧ ಬರುತ್ತಲೇ ಇರುತ್ತವೆ, ಕಣ್ಣೀರು ಹರಿಯುತ್ತಲೇ ಇರುತ್ತದೆ.  ನಿರಪರಾಧಿಗಳ ಮಾರಣಹೋಮ ನಡೆಯುತ್ತಲೇ ಇರುತ್ತದೆ.  ಮುಖ್ಯವಾಗಿ ನಮ್ಮ ವಿದ್ಯಾವಂತರು ಅನ್ನಿಸಿಕೊಂಡವರು ತಮ್ಮ ನಿರ್ಲಿಪ್ತತೆಯಿಂದ ಹೊರ ಬರಬೇಕು. ಮತ ಚಲಾಯಿಸಬೇಕು, ಉತ್ತಮರ ಆಯ್ಕೆ ಮಾಡಬೇಕು.  ಇಲ್ಲದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ, ಮತ್ತೊಮ್ಮೆ ಅಮೇರಿಕನ್ನರ ಅಥವಾ ಪಾಕಿಸ್ತಾನೀಯರ!! ಅಡಿಯಾಳಾಗಿ ಈ ದೇಶ ಗುರುತಿಸಿಕೊಳ್ಳುವ ದಿನ ದೂರವಿಲ್ಲ.  ಈ ಬಗ್ಗೆ ಸಂಪದಿಗರ ಅಭಿಪ್ರಾಯವೇನು?? ನೋಡೋಣವೇ ???

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet