ಒಬ್ಬರಿಗೊಬ್ಬರು ತಿಳಿಸದೇ ಇದ್ದುದು ತಪ್ಪಾಗಿ ಬಿಡ್ತು!!!

ಒಬ್ಬರಿಗೊಬ್ಬರು ತಿಳಿಸದೇ ಇದ್ದುದು ತಪ್ಪಾಗಿ ಬಿಡ್ತು!!!

ನಿನ್ನೆ ಭಾನುವಾರ ವಿ-ಚಿತ್ರ ಪ್ರದರ್ಶನ
ಏರ್ಪಡಿಸಿ ಆಹ್ವಾನಿಸಿದರು ಮಂಸೋರೆ
ಚಿತ್ರ ಮತ್ತವುಗಳ ಹಿಂದಣ ಆಶಯಗಳು
ನಿಜಕೂ ಮಾಡಿದವು ನಮ್ಮ ಮನಸೂರೆ


ದೂರದಿಂದಲೇ ನನ್ನ ಮುಖದ (ತಲೆಯ?)
ಗುರುತು ಹಿಡಿದು ನಸುನಗೆ ಬೀರಿದರವರು
ಹತ್ತಿರವಾದಂತೆ ತುಂಬು ಮನದಿಂದ ನಕ್ಕು
ಕೈ ಕುಲುಕಿ ನಮ್ಮನ್ನು ಸ್ವಾಗತಿಸಿದರವರು


ಇಂತಹದೊಂದು ಪ್ರಯೋಗ ಅಭೂತಪೂರ್ವ
ಆಗಿರುವುದಕ್ಕೇನೋ ವಿ-ಚಿತ್ರ ಅನಿಸಿತ್ತೆನಗೆ
ಹೊಸದನ್ನು ಹುಟ್ಟು ಹಾಕಿ ಅದಕೊಂದು ಅರ್ಥ
ನೀಡುವುದು ಸುಲಭ ಸಾಧ್ಯ ಆಗಿರಲಿಲ್ಲವರಿಗೆ


ನಾವು ಹೋಗುವ ಮೊದಲು ವಸಂತ, ರಾಕೇಶ್,
ಓಂಶಿವ ಮತ್ತು ದೃಶ್ಯ ಬಂದಾಗಲೇ ಹೋಗಾಗಿತ್ತು
ರೂಪಾ ರಾಜೀವ ಬೈಗಿನಲಿ ಕರೆ ಮಾಡಿದಾಗ ನಾ
ನನ್ನ ಪತ್ನಿಯೊಂದಿಗೆ ಮನೆಗೆ ಹಿಂದಿರುಗಿಯಾಗಿತ್ತು


ಸಂಪದಿಗರೆಲ್ಲರೂ ಒಂದಾಗಿ ಅಲ್ಲಿಗೆ ಹೋಗಿದ್ದಿದ್ದರೆ
ಆ ಮೇಲು ಕಾಲು ಸೇತುವೆಯಲೂ ರಂಗೇರುತ್ತಿತ್ತು
ನಾವು ಹತ್ತಾರು ಮಂದಿ ನಿನ್ನೆ ಹೋಗಿದ್ದೆವಾದರೂ
ಒಬ್ಬರಿಗೊಬ್ಬರು ತಿಳಿಸದೇ ಇದ್ದುದು ತಪ್ಪಾಗಿ ಬಿಡ್ತು!!!


***************************


 


-ಆತ್ರಾಡಿ ಸುರೇಶ ಹೆಗ್ಡೆ.


 

Rating
No votes yet

Comments