ಈಗ ಮೂರೂ ಬಿಟ್ಟವರೇ ಅಧಿಕಾರದಲ್ಲಿರುವವರು!!!

ಈಗ ಮೂರೂ ಬಿಟ್ಟವರೇ ಅಧಿಕಾರದಲ್ಲಿರುವವರು!!!

ಸ್ವಾಮೀ ನಾವೆತ್ತ ಸಾಗುತ್ತಿದ್ದೇವೆ ಅನ್ನುತ್ತಿರುವಿರೇಕೆ?


ನಾವೆಲ್ಲಿದ್ದೇವೆ ಈಗ ಎಂದು ನೀವು ಕೇಳ ಬಾರದೇಕೆ


 


ಅವರಿಗೆ ಮತದಾರನ ನೆನಪು ಚುನಾವಣೆ ಬಂದಾಗ


ಅಲ್ಲದೆ ಮತದಾರನೂ ಮರೆತಿರುವನು ಎಲ್ಲವನು ಆಗ


 


ಮತ ಹಾಕಿ ಪಡೆದು ಸರಕಾರವನ್ನು ಬೈಯುವ ಹಕ್ಕು


ಮುಂದೆ ಸರಕಾರದ ವಿರುದ್ಧ ಬಾಯಿಗೆ ಬಂದದ್ದನ್ನು ಕಕ್ಕು


 


ಮತ್ತೆ ಮತ ಹಾಕು, ಯಾಕೆಂದರೆ ಹಾಕದಿರುವುದಪರಾಧ


ಮತ ಗಿಟ್ಟಿಸಿಕೊಂಡವರು ಸದಾ ಮಾಡುತ್ತಿರಲಿ ಅಪರಾಧ


 


ಭ್ರಷ್ಟಾಚಾರ ಮತ್ತು ರಾಜಕೀಯ ಇವು ಎರಡು ಮುಖಗಳು


ನಾಣ್ಯ ಒಂದೇ ನಾಣ್ಯದ ಸಂಪಾದನೆಗೆ ಭಿನ್ನ ತಂತ್ರಗಳು


 


ಹೆಣ್ಣು ಹೊನ್ನು ಮಣ್ಣು ಇವು ಮೂರೂ ಈಗ ಚಾಲ್ತಿಯಲ್ಲಿವೆ


ಅವು ಇರುವಾಗ ಮತದಾರನ ನೆನಪಿಲ್ಲಿ ಹೇಳಿ ಯಾರಿಗಿದೆ


 


ಎಲ್ಲೇ ನೋಡಿ ಮೂರೂ ಬಿಟ್ಟವರೇ ಅಧಿಕಾರದಲ್ಲಿರುವವರು


ಮಾತೆತ್ತಿದರೆ ಜನಸೇವೆಗಾಗೆಂದು ದೇವರಾಣೆ ಹಾಕುವರು


******************************


- ಆತ್ರಾಡಿ ಸುರೇಶ ಹೆಗ್ಡೆ


 


 


ಈ ಲೇಖನಕ್ಕುತ್ತರವಾಗಿ.


http://sampada.net/forum/23156

Rating
No votes yet