ಸಾಹಸಸಿ೦ಹ ಮರೆಯಾಯಿತು ದಟ್ಟ ಕಾನನದೊಳೊಗೆ

ಸಾಹಸಸಿ೦ಹ ಮರೆಯಾಯಿತು ದಟ್ಟ ಕಾನನದೊಳೊಗೆ

ಬರಹ

ವಿಷ್ಣುವರ್ಧನ್ ನಮ್ಮನ್ನು ಬಿಟ್ಟು ಅಗಲಿದ್ದಾರೆ ಅ೦ದರೆ ಮನಸ್ಸಿಗೆ ತು೦ಬ ಘಾಸಿಯಾಗುತ್ತದೆ. ಒಬ್ಬ ನಾಯಕನಾಗಿ ಸಿ೦ಹ ಮರೆಯಾಗಿದೆ. ಇನ್ನೇನನ್ನು ಹೇಳೋದಿಕ್ಕೆ ತೋಚದು. ಕನ್ನಡದ ಮತ್ತೂ೦ದು ಗರಿ ಕಳಚಿದೆ. ನೆನ್ನೆ ಗಾನ ಗಾರುಡಿಗ ಇ೦ದು ಅಭಿನವ ಭಾರ್ಗವ ಎ೦ತ ದುರ್ಗತಿ ನಮ್ಮ ನಾಡಿಗೆ. ಛೇ....ಕನ್ನಡಿಗರಿಗೆ ಈ ವರ್ಷ ಬಲು ಭಾರ.

ಮೈಸೂರಿನಲ್ಲಿದ್ದ ವಿಷ್ಣುವರ್ಧನ್‌ರಿಗೆ ಬುಧವಾರ ಮುಂಜಾನೆ 2.30ರ ಹೊತ್ತಿಗೆ ಎದೆನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ವಿಕ್ರಮ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ಮುಟ್ಟುವ ಮೊದಲೇ ಅವರು ಸುಮಾರು 3.00 ಗಂಟೆ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ.