ಪುಟ್ಟಣ್ಣ ನ “ ರಾಮಾಚಾರಿ “ ಇನ್ನಿಲ್ಲ !!!

ಪುಟ್ಟಣ್ಣ ನ “ ರಾಮಾಚಾರಿ “ ಇನ್ನಿಲ್ಲ !!!

ಪುಟ್ಟಣ್ಣರ “ನಾಗರಹಾವು” ಚಿತ್ರದಲ್ಲಿನ “ರಾಮಾಚಾರಿ”ಯನ್ನು ಯಾರು ಎಂದೂ ಮರೆಯಲ್ಲ. ಯಾಕೆಂದರೆ ಆತ ನಮ್ಮೆಲ್ಲಿರುವ ಒಬ್ಬನ ಕಥೆ. ಆ ಪಾತ್ರದಿಂದ ಕೆಂಪಗೆ, ದಪ್ಪವಾಗಿ, ಸುಂದರವಾಗಿ ಇದ್ದ ಹುಡುಗ ಚಿತ್ರರಂಗಕ್ಕೆ ಬಂದಿದ್ದ.  ಮುಂದೆ ಆ ಹುಡುಗ ಚಿತ್ರರಂಗದ ದಂತಕಥೆ ಆಗ್ತಾನೆ ಅಂತ ಅಂದು ಯಾರು ಚಿಂತೆಮಾಡಿರಕ್ಕಿಲ್ಲ. ಅಂತಹ “ಸಂಪತ್ತು” ನಮ್ಮೆಲ್ಲರ ಮೆಚ್ಚೆಗೆಯ “ವಿಷ್ಣುವರ್ಧನ”ನಾಗಿ , ಕನ್ನಡ ಚಿತ್ರರಂಗದ ಅಧಿಪತಿಯಾಗಿ ಮೆರೆದರು. ಇವತ್ತು ಆ “ಸಿಂಹ” ನಮೆಲ್ಲರನ್ನು ಬಿಟ್ಟು ಇಂದು ಸಾವೆಯಿಲ್ಲದ ಮನೆಡೆಗೆ ಹೊರಟುಹೋಗಿದ್ದಾರೆ.


 ೨೦೦೯ ರ ಕೂನೆಯಲ್ಲಿ ಆಘಾತ, ಗಾನಗಾರುಡಿಗ ಸಿ. ಅಶ್ವಥ್ ಮತ್ತು ಅಭಿನವ ಭಾರ್ಗವ “ ಡಾ. ವಿಷ್ಣುವರ್ಧನ” ಇನ್ನಿಲ್ಲ. ಮನಸ್ಸಿಗೆ ತೊಂದರೆ ಆಗ್ತಾಯಿದೆ. ಅವರ ಆತ್ಮಕ್ಕೆ ಶಾಂತಿ ಬಯಸೋಣ.

Rating
No votes yet

Comments