ಹಿಸ್ಟರಿ ಈಗ ರಾಮಾಚಾರಿ..

ಹಿಸ್ಟರಿ ಈಗ ರಾಮಾಚಾರಿ..

ಬರಹ

Dr. Vishnu

 

ಕನ್ನಡಿಗರ ಪಾಲಿಗೆ ಹೊಸ ವರುಷದ ಹಿಂದಿನ ದಿನಗಳು ತೀವ್ರ ಮತ್ತು ಅನಿರೀಕ್ಷಿತ ಆಘಾತಗಳನ್ನು ಕೊಟ್ಟಿವೆ.
ನೆನ್ನೆ ತಾನೆ ಸಂಗೀತ ಕ್ಷೇತ್ರದ ದಿಗ್ಗಜ ಸಿ.ಅಶ್ವಥ್’ರನ್ನು ಕಳೆದು ಕೊಂಡ ದುಃಖದಲ್ಲಿರುವಾಗಲೇ ಮತ್ತೊಂದು ಭೀಕರ ಸುದ್ದಿ ಚಿತ್ರರಂಗದ ಅಭಿನಯ ಭಾರ್ಗವ ನಾಗರಹಾವಿನ ’ರಾಮಾಚಾರಿ’ ಇನ್ನು ಹಿಸ್ಟರಿ ಮಾತ್ರ.

ಸ್ನೇಹಲೋಕದ ಸ್ನೇಹದೊಡೆಯ ಇನ್ನಿಲ್ಲ, ಕನ್ನಡ ಚಿತ್ರರಂಗದ ಪ್ರಮುಖ ನಟನಾದರೂ ’ಯಜಮಾನ’ತನ ತೋರದ ಸೃಜನಶೀಲತೆ ನಟನೆಯ ’ಸಿರಿವಂತ’ನಾಗೆ ಉಳಿದು, ಇಂದು ಬೆಳ್ಳಿತೆರೆಯಿಂದ ಮರೆಗೆ ಸರಿದಿದ್ದಾರೆ.

ಆಪ್ತಮಿತ್ರ ಚಿತ್ರದ ಮುನ್ನ ಸೌಂದರ್ಯರ ಅಕಾಲಿಕ ಮರಣ, ಅದರ ಮುಂದುವರೆದ ಭಾಗವೆಂದು ಹೇಳಲಾದ ’ಆಪ್ತರಕ್ಷಕ’ ಚಿತ್ರದಲ್ಲಿ ನಿರತರಾಗಿದ್ದಾಗಲೇ ವಿಷ್ಣು ಮರಣ ಕಾಕತಾಳಿಯವೇ ಸರಿ..


ಅಗಲಿದ ತಾರೆಗಳೆ ನೀವು ಮಿನುಗಿದಿರಿ ಇಷ್ಟು ದಿನ ಬೆಳ್ಳಿ ತೆರೆಯಮೇಲೆ, ಇನ್ನು ಮುಂದೆ ನೆನಪ ತೆರೆಯಮೇಲೆ..