ವಿಷ್ಣು ವಿಯೋಗ

ವಿಷ್ಣು ವಿಯೋಗ

ಬರಹ

(ಬೆಳಗಿನಿಂದ ದೂರದರ್ಶನದಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರವನ್ನು ಮತ್ತು ಜನಸಾಗರದ ದೃಶ್ಯಗಳನ್ನು ನೋಡುತ್ತಿರುವ ನನ್ನ ಮನಸ್ಸಿನಲ್ಲಿ ಉಕ್ಕಿಹರಿದ ನೋವು ಇದು.)

ದೂರದ ಲೋಕಕ್ಕೆ
ಮರಳಿ ಬಾರದ ಲೋಕಕ್ಕೆ
ಹಾರಿಹೋಯಿತು ಹಕ್ಕಿ
ಅತ್ತರು ಅಭಿಮಾನಿಗಳು ಬಿಕ್ಕಿ ಬಿಕ್ಕಿ

ಕಣ್ಮರೆಯಾಯಿತು ಕಲಾಸಾಗರ!
ಕಣ್ಣೀರ್ಗರೆಯಿತು ಜನಸಾಗರ

ಸಾಧನೆ ತೋರಿತು
ಹಾದಿ ಪೂರೈಸಿತು
ನಾಡು ತೊರೆದು
ನಿಜಗಾಂಭೀರ್ಯದಲಿ
ಕಾಡಿಗೆ ಸಾಗಿತು
ಸಾಹಸಸಿಂಹ

ಕಾಡುವುದೀ ನೋವು
ಕಲಾರಸಿಕರ ಮನ
ಬಹುದಿನ