ಹಳ್ಳಿಯವರೆಂದರೆ ತತ್ಸಾರನ Mr.Urban Ladders
ಈ ಲೇಖನ ನಾನು ಸೇರಿದಂತೆ ಬಹಳ ಮಂದಿ ಹಳ್ಳಿಯವರ ನೋವಿನ ಸಂಗತಿ...
ನೀವೇ ನೋಡಿ ನಮಗೆ ಹೇಗೆ ಅನ್ಯಾಯವಾಗುತ್ತಿದೆ ಎಂದು
1.ಹಳ್ಳಿಯವರಿಗಿದ್ದ ೫% ಅಂಕ ತೆಗೆದ್ದಿದ್ದಾರೆ, ಆದರೆ ಇಲ್ಲಿ ಪಾಪ ಓದುವುದಕ್ಕೆ ಆಗುವುದಿಲ್ಲ ಏಕೆಂದರೆ ವಿದ್ಯುತ್ತಿನ ಸಮಸ್ಯೆ . ನಗರದವರು ಎಲ್ಲ ಅಧುನಿಕ ಸೌಲಭ್ಯ ಬಳಸಿಕೊಂಡು ಓದುತಿದ್ದರೆ ಇಲ್ಲಿ ಇನ್ನು ಅಡುಗೂಲಜ್ಜಿ ಕಾಲದ ಪದ್ದತಿಯೇ.
ಇಲ್ಲಿ ನನಗೆ ನಾನು ಶಾಲಾ ದಿನಗಳಲ್ಲಿ ಬರೆದ ಚುಟುಕು ನೆನೆಪಾಗುತ್ತದೆ
ಆಟವ ಆಡುತ್ತೆ ಕ.ಈ.ಬಿ. ಕರೆಂಟು
ಓದೋಕೆ ಬರೆಯೋಕೆ ಚಕ್ಕರ್
ನಾನೇನು ಮಾಡಲಿ ಓದೋಕೆ .
ಆದರೆ ಹತ್ತು ವರ್ಷ ಕಳೆದರು ಇನ್ನು ಏನು ಬದಲಾಗಿಲ್ಲ
2.ಕೆಲಸಕ್ಕೆ ಅಂತ ಹೋದರೆ ಸಂದರ್ಶನದಲ್ಲಿ ಏನೋ ಒಂದು ಚೂರು english ಸರಿಯಿಲ್ಲದಿರುವುದಕ್ಕೆ ಕೆಲಸ ಮಾಡುವ ಕಾರ್ಯಕ್ಷಮತೆ ಇದ್ದ್ದರು ಹೊರಹಾಕುತ್ತಾರೆ ಹಾಗೆ ನೋಡಿದರೆ ನಾವೇ ಈ ನಗರದವರಿಗಿಂತ ಹೆಚ್ಚು ವ್ಯಾಕರಣಬಧ್ಧವಾಗಿ ಇಂಗ್ಲೀಷನ್ನು ಮಾತಾಡೋದು .....
ಇಂಗ್ಲಿಷೆಂಬ ಮಾಯೆಯ ಮಾಯವನ್ನು ಅರಿತರು
ಕನ್ನಡವನ್ನು ಪೂಜಿಸಿ ಎಲ್ಲವನ್ನು ಸಿಧ್ಧಿಸಿದರು
ಕೆಲಸ ಸಿಗುತಿಲ್ಲವೋ ಮಂಕುತಿಮ್ಮ .
ಎಂದು ಡಿ.ವಿ.ಜಿ.ಯವರು ಬರೆಯುತಿದ್ದರೆನೋ
3.ಇನ್ನು ಈ ನಗರದ ಕಾಲೇಜುಗಳಲ್ಲಿ ಹಳ್ಳಿಯವರೆಂದರೆ ಹಿಂಜರಿಯುತ್ತಾರೆ. ನನಗೂ ಈ ಅನುಭವ ಆಗಿತ್ತು ಆದರೆ ನಾವು ಕೆಲವು ಹಳ್ಳಿಯವರೇ ಸೇರಿ ಈ ನಗರದವರಿಗಿಂತ ಬಹಳ ಚೆನ್ನಾಗಿ ನಮ್ಮ ಇವೆಂಟ್ ನಡೆಸಿದೆವು.
ಆದರೆ ಎಲ್ಲ ನಗರಿಗರು ಹೀಗೆ ಅಂತ ನಾನು ಹೇಳಲ್ಲ ಆದರೆ ಬಹು ಪಾಲು ಹೀಗೆ ಇರುತ್ತಾರೆ. ಇದಕ್ಕೆ ನಮ್ಮ ಸರ್ಕಾರ ಹಾಗು ಅದರ ಆಡಳಿತ ಹಾಗು ನಗರದವರ ಮೂಡ ನಂಬಿಕೆಗಳು ಕಾರಣ . ಆದರೆ ಹಳ್ಳಿಯವರನ್ನ ಅಸ್ಪ್ರುಷ್ಯರಂತೆ ನೋಡಬೀಡಿ ಎಂಬುದು ನನ್ನ ಕಳಕಳಿಯ ಬೇಡಿಕೆ ...
ನೀವು ಇದೇ ರೀತಿ ಅನುಭವಕ್ಕೆ ಒಳಗಾಗಿದ್ದಾರೆ ತಿಳಿಸಿ.
ಅಲ್ಲದೆ ನಗರದವರಾಗಿ ಹಳ್ಳಿಯವರಿಗೆ ಪ್ರೋತ್ಸಾಹಿಸಿದ್ದಾರೆ ಅದನ್ನು ತಿಳಿಸಿ.
ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಿ.
ವಂದನೆಗಳು
ನಿಮ್ಮ ಪ್ರೀತಿಯ
ಗಣೇಶ