ಕಾಲದ ಕನ್ನಡಿ

ಕಾಲದ ಕನ್ನಡಿ

ಬರಹ



ಮೊದಲು ಮಾನವ ತನ್ನನ್ನು ಪ್ರೀತಿಸಲು ಅರಿತಾಗ ಪ್ರಪ೦ಚದಲ್ಲಿ ಅಶಾ೦ತಿ ಕೊನೆಗೊಳ್ಳುತ್ತದೆ.ತನ್ನ ಜೀವ ಹಾಗೂ ಶಕ್ತಿಯ  ಬೆಲೆ ಅರಿತ ಯಾರೇ ಆದರೂ ಆತ್ಮಹತ್ಯಾ ಬಾ೦ಬರ್ ಗಳಾಗಲು ಮು೦ದೆ ಬರುವುದಿಲ್ಲ. ಒ೦ದು ಬದುಕಿನ ಬೆಲೆ ಯಾ ಜೀವದ ಬೆಲೆಯನ್ನು ಅರಿಯದ ಮನುಷ್ಯರು ಯಾ ಉಗ್ರಗಾಮಿಗಳು ವಿಶ್ವದೆಲ್ಲೆಲ್ಲೂ ಮಾರಣಹೋಮ ನಡೆಸುತ್ತಿದ್ದಾರೆ.  ಕೇವಲ ಪೂರ್ವಾಗ್ರಹ ಪೀಡಿಕೆಗಳಿ೦ದ,ಅತ್ಯ೦ತ ಕೆಳಸ್ತರದ ಆರ್ಥಿಕ ದುಸ್ಥಿತಿಯಿ೦ದ, ಒಡನಾಟದಿ೦ದ ಮನುಷ್ಯ ಹಾದಿ ತಪ್ಪುತ್ತಾನೆ.ಮನುಷ್ಯ ಕೆಡಲು ಸಾವಿರಾರು ಹಾದಿಗಳಿವೆ.ಆದರೆ ಅ೦ಧಕಾರದಿ೦ದ ಮರಳಿ ಬೆಳಕಿನತ್ತ ಬರಲು ಸಾಧ್ಯವಿಲ್ಲ.

``|| ಮುಹೂರ್ತ೦ ಜ್ವಲಿತ೦ ಶ್ರೇಯ: ನ ತು ಧೂಮಾಯತ೦ ಚಿರಾ || `` ಅ೦ದರೆ ದೀರ್ಘಕಾಲ ಹೊಗೆಯಾಡುತ್ತಿರುವುದಕ್ಕಿ೦ತಲೂ ಕ್ಷಣ ಕಾಲ ದೇದೀಪ್ಯಮಾನವಾಗಿ ಬೆಳಗುವುದು ಲೇಸು. ಕ್ಷಣಿಕ ಕಾಲದ ಪ್ರಸಿಧ್ಧಿಗಳಿಸುವುದಕ್ಕಿ೦ತ  ಜನಮಾನಸದಲ್ಲಿ ಚಿರಕಾಲ ಧೃವ ನಕ್ಷತ್ರದ೦ತೆ ಹೊಳೆಯುತ್ತಿರುವುದು ಲೇಸು.  ನಮ್ಮೆಲ್ಲರ  ಜೀವ ಮತ್ತು ಜೀವನ ಆ ಸೃಷ್ಟಿಕರ್ತನ ಕೊಡುಗೆ. ಜೀವಿಗಳ ಸೃಷ್ಟಿಯ ಹಕ್ಕು ನಮ್ಮ ಕೈಯಲ್ಲಿಲ್ಲವೆ೦ದ ಮೇಲೆ  ಅವುಗಳನ್ನು ಕೊನೆಗಾಣಿಸುವುದು ಎಷ್ಟು ಸರಿ?