ನವ-ಭಾರತ

ನವ-ಭಾರತ

ಬರಹ

ಒಮ್ಮೆ ಇಣುಕಿ ನೋಡಿದೆ ,ಭಾರತದಿ

ಅತ್ತ -ಇತ್ತ , ಸುತ್ತ -ಮುತ್ತ    ಮತ್ತು

ಎತ್ತ ಕಣ್ಣ ಹಾಯಿಸಿದರೂ ಗಾವರ ;

ಗದ್ದಲ ,ಬರಿಗದ್ದಲ ,ನಿತ್ಯ ಗದ್ದಲ .

 

ಕೋಮು ಸೌಹಾರ್ದವ ಭಾಷಣ

-ಗಳಲಿ ಕೊರೆಯುವ ಇವರು

'ಪುರಾತನ ಸಹೋದರರ ' ಮನದಲಿ

ವಿಷದ    ಬೀಜ   ಬಿತ್ತುವರು .

 

ಅದಕೆ  ನೀರೆರೆದು  ಪೋಶಿಸಿ

ಬೆಳೆಸುವರು ಡಾ೦ಭಿಕ  ಸಾಮರಸ್ಯದಿ

ಬೀಜ   ಗಿಡವಾಗಿ ,   ಹೆಮ್ಮರವಾಗುವುದು

ತಲೆ  ಎತ್ತಿ   ನಿಲ್ಲುವುದು ಗಟ್ಟಿಮುಟ್ಟಾದ  ದೇಹ ಹೊತ್ತು .

 

ಒ೦ದಿಬ್ಬರು   ಕೊಡಲಿ ಏಟ   ನೀಡಿದರು

ಬಗ್ಗಲಿಲ್ಲ , ಜಗ್ಗಲಿಲ್ಲ ,  ತುಟಿಪಿಟಿಕ್ಕೆನ್ನಲಿಲ್ಲ

ಸ್ಥೂಲಕಾಯ  ಅದು ;    ನೀಡುತಿರುವರು,

ನೀಡುತಲೇ  ಇರುವರು :ಏಟ- ಇವರ ಸ೦ತತಿಗಳು