ತೋಟ-ಚಾರಣ ೧
ರಜೆ ಬಂತೆಂದರೆ ನಾನು ಗಟ್ಟಿಯೋ, ಮನೆ ಗಟ್ಟಿಯೋ ಎಂದು ಮನೆಯಲ್ಲೇ ಝಾಂಡಾಊರುವೆನು. ಕೈಯಲ್ಲಿ ರಿಮೋಟು, ಎದುರಿಗೆ ಟಿ.ವಿ., ಮೇಲೆ ಫ್ಯಾನ್, ಪಕ್ಕದಲ್ಲಿ ತಿನ್ನಲು ಏನಾದರೂ ಐಟಂ.
ಕಷ್ಟಪಟ್ಟು, ಖರ್ಚುಮಾಡಿ, ಊರೂರು ಸುತ್ತುವ ಬದಲು, ಡಿಸ್ಕವರಿ ಹಾಕಿ ಕಾಡು ಅಲೆಯುವೆ, ಟ್ರಾವೆಲ್ ಹಾಕಿ ದುಬೈ ಸುತ್ತುವೆ....
ಈ ನನ್ನ ಚಾರಣ ಹವ್ಯಾಸ ನನ್ನ ಮನೆಯವ್ರಿಗೆ ಯಾರಿಗೂ ಇಷ್ಟವಿಲ್ಲ. "ಎಪ್ರಿಲ್ ರಜೆಯಲ್ಲಿ ಊರಿಗೆ ಹೋಗೋಣ, ಟೂರಿಗೆ ಹೋಗೋಣ..."ಎಂದು ಹಾ(ಕಾ)ಡುವರು. ಈ ಹಾಡು ಏಕತಾಳದಲ್ಲಿ ಜನವರಿಯಲ್ಲಿ ಆರಂಭವಾಗಿ, ತಾಳ್ ಸೆ ತಾಳ್ ಮಿಲಾಕರ್, ಎಪ್ರಿಲ್ ತಲುಪುವಾಗ ಬೇತಾಳದಂತೆ ಕಾಡುವುದು.
ಕಳೆದ ವರ್ಷ ಹೀಗೇ ಒತ್ತಾಯ ಹೆಚ್ಚಾಗಿ, ಬೇತಾಳ ಹೆಗಲಿಗೇರಿಸಿ, ಸ್ಸಾರಿ, ಬ್ಯಾಗ್ ಹೆಗಲಿಗೇರಿಸಿ, ಮನೆಯವರೊಂದಿಗೆ ಮಂಗಳೂರಿನ ಹತ್ತಿರದ ಹಳ್ಳಿಗೆ ಹೋಗಿದ್ದೆ.
ಅಬ್ಬಾ..ಏನು ಬಿಸಿಲು!
ಪಾಪದ ಹಳ್ಳಿಗರಿಗೆ ದಿನಗಟ್ಟಲೆ ಕರೆಂಟು ಇರುವುದಿಲ್ಲ. ಮರಗಳು ಅಲ್ಲಿ ಸಾಕಷ್ಟಿದ್ದರೂ, ಒಂದು ಎಲೆ ಅಲ್ಲಾಡಿದರೆ ಕೇಳಿ..
ಸೆಖೆ ಸಹಿಸಲಾಗದೆ, ಟವಲು ಒದ್ದೆ ಮಾಡಿ ಮೈತುಂಬಾ ಹೊದ್ದು ಕುಳಿತ ೧೦ ನಿಮಿಷದಲ್ಲಿ ಟವಲು ಒಣಗಿರುತ್ತದೆ.
ಮಧ್ಯಾಹ್ನದ ಹೊತ್ತಿಗೆ ಒಂದು ಕಪ್ಪು ಚುಕ್ಕೆಯೂ ಕಾಣದಂತೆ ಸ್ವಚ್ಛವಾಗಿರುವ ಆಕಾಶ, ಸಂಜೆಗಾಗುವಾಗ ಪೂರ್ತಿ ಮೋಡ ತುಂಬಿರುತ್ತದೆ. ಇನ್ನೇನು ಮಳೆ ಬಂದು ನೆಲ ತಂಪಾಗುವುದು ಎಂದು ಕಣ್ಣು ಬಾಯಿ ಬಿಟ್ಟು, ನೋ(ಮೋ)ಡ ನೋಡುತ್ತಿದ್ದಂತೇ, ಇಲ್ಲಿನ ಗವರ್ನ್ಮೆಂಟ್ ಬಸ್ಗಳಂತೆ ಸ್ಟಾಪ್ ಕೊಡದೇ, ಡೈರೆಕ್ಟ್ ಚಾರ್ಮಾಡಿ ಘಾಟ್ಗೆ ಹೋಗಿ ಮಳೆಸುರಿಸುವುದು.
ನನ್ನ ಪುಣ್ಯಕ್ಕೆ, ನಾನು ಅಲ್ಲಿದ್ದ ಎರಡು ದಿನವೂ ಮಳೆಯಾಯಿತು.
ಮಳೆ ನಿಂತು ಹೋದ ಮೇಲೇ..
ತೋಟ ಚಾರಣಕ್ಕೆ ಹೊರಟೆ..
ವಿವರ ಮುಂದಿನ ಭಾಗದಲ್ಲಿ..
-ಗಣೇಶ.
Comments
ಉ: ತೋಟ-ಚಾರಣ ೧
ಉ: ತೋಟ-ಚಾರಣ ೧