ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು..
ಯೂಟ್ಯೂಬ್-ನಲ್ಲಿ ಹೀಗೇ ಕನ್ನಡದ ವಿಡಿಯೋಗಳನ್ನು ಹುಡುಕುತ್ತಿದ್ದೆ. ಆಗ ಸಿಕ್ಕಿದ್ದು ಈ ವಿಡಿಯೋ..
ಟಿ.ವಿ.9 ಮಾಡಿರುವ ಒಂದು ಸ್ಟಿಂಗ್ ಆಪರೇಶನ್ ಇದು. ಬೆಂಗಳೂರು ಸಿಟಿ ಆರ್ಮ್ಡ್ ರಿಸರ್ವ್ ಡಿ.ಸಿ.ಪಿ ಎಂ. ನಂಜುಂಡಸ್ವಾಮಿ ಈ ಆಪರೇಶನ್-ನ ಗುರಿ. ಈ ಆಸಾಮಿ ಮಾಡಿರುವುದು ಅಂತಿಂಥ ಕೆಲಸವಲ್ಲ. ಕೈಕೆಳಗೆ ಕೆಲಸ ಮಾಡುವ ಸರಕಾರಿ ಪೋಲೀಸರನ್ನೇ ತನ್ನ ಸ್ವಂತ ಮನೆ ಕಟ್ಟಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ಪೋಲೀಸ್ ಇನ್ಸಪೆಕ್ಟರ್ ನಾಗರಾಜ ಎಂಬುವವನು ಇದರ ಕಂಟ್ರಾಕ್ಟರ್. ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿರುವ ಈ ಮನೆ ಕಟ್ಟುವ ಕೆಲಸಕ್ಕೆ ಕೇವಲ ಪೋಲೀಸರೇ ಕೂಲಿಯಾಳುಗಳು. ಅವರು ಸರಿಯಾಗಿ ಮನೆಗೂ ಹೋಗುವಂತಿಲ್ಲ..ವಿಡಿಯೋ ನೋಡುತ್ತಿದ್ದರೆ ತಲೆ ಚಿಟ್ಟು ಹಿಡಿಯುತ್ತದೆ.
ವಿಡಿಯೋ ಲಿಂಕ್: http://www.youtube.com/watch?v=CoSK1plVaKU&feature=channel
ಏನಾಗುತ್ತಿದೆ ಕರ್ಣಾಟಕದಲ್ಲಿ? ರಾಜಕೀಯ ಫುಡಾರಿಗಳಿಗಿಂತಲೂ ಕೀಳಾಗಿದ್ದಾರೆ ಈ ಸರಕಾರಿ ನೌಕರರು.
ಈ ವಿಷಯವನ್ನು ಇನ್ನೂ ಮುಂದುವರೆಸಲು ಸಾಧ್ಯವಾಗುತ್ತಿಲ್ಲ..
ಜೈ ಕರ್ಣಾಟಕ!! ಜೈ ಕನ್ನಡ!!
Comments
ಉ: ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು..
In reply to ಉ: ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು.. by suresh nadig
ಉ: ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು..
In reply to ಉ: ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು.. by manjunath.hosur
ಉ: ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು..
ಉ: ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು..
In reply to ಉ: ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು.. by manju787
ಉ: ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು..