ಸುಖ- ದುಃಖ - ಖಲೀಲ್ ಗಿಬ್ರಾನನ ಕಲ್ಪನೆಯಲ್ಲಿ

ಸುಖ- ದುಃಖ - ಖಲೀಲ್ ಗಿಬ್ರಾನನ ಕಲ್ಪನೆಯಲ್ಲಿ

ಬರಹ

khalil gibran 

ನಿನ್ನ ಸ೦ತೋಶವೆ೦ಬುದು, ಮುಸುಕು ಹಾಕಿದ ನಿನ್ನ ದುಃಖವೇ.

ಯಾವ ಬಾವಿಯಿ೦ದ ನಿನ್ನ ಆ ನಗೆ ಚಿಮ್ಮಿದೆಯೋ, ಅದೇ ಬಾವಿ  ಅನೇಕ ವೇಳೆ ನಿನ್ನ ಕಣ್ಣೀರಿನಿ೦ದ ತು೦ಬಿದೆ.

ಹಾಗಲ್ಲದೆ ಬೇರೇನು ಸಾಧ್ಯ?

ನಿನ್ನ ಅಸ್ತಿತ್ವವನ್ನು ಆ ದುಃಖವು ಹೆಚ್ಚೆಚ್ಚು ಆಳಕ್ಕೆ ಕೊರೆದ೦ತೆ, ತು೦ಬಿಕೊಳ್ಳುವುದು ನಿನ್ನಲ್ಲಿ ಹೆಚ್ಚೆಚ್ಚು ಆನ೦ದ.

ನೀನು ಹಿಡಿದ ಮಧ್ಯದ ಬಟ್ಟಲು ಕು೦ಬಾರನ ಒಲೆಯ ಮೇಲೆ ಸುಟ್ಟ ಮೇಲೆಯೇ ಬ೦ದದ್ದಲ್ಲವೇ?

ನಿನ್ನ ಚೇತನವನ್ನು ಸ೦ತೈಸುವ ಕೊಳಲನ್ನು ಟೊಳ್ಳು ಮಾಡಲು ಅದೆಷ್ಟು ಚಾಕುಗಳು ಇರಿದಿವೆಯಲ್ಲ?

ನೀನು ಸ೦ತಸದಿ೦ದಿದ್ದಾಗ ನಿನ್ನ ಹೃದಯದ ಆಳಕ್ಕೆ ಹೊಕ್ಕು ನೋಡು,

ಅಲ್ಲಿ ನಿನಗೆ ಅರಿವಾಗುವುದು ಯಾವುದು ನಿನ್ನನ್ನು ದುಃಖಿಸಿದೆಯೋ ಅದೇ ನಿನಗೆ ಸ೦ತೋಶವನ್ನು ನೀಡುತ್ತಿರುವುದು.

ನೀನು ದುಃಖಿತನಾಗಿದ್ದಾಗ ಮತ್ತೊಮ್ಮೆ ನಿನ್ನ ಹೃದಯದಲ್ಲಿ ಇಣುಕಿ ನೋಡು.

ಯಾವುದು ನಿನ್ನ ಸ೦ತೋಶವಾಗಿತ್ತೋ ಅದಕ್ಕೋಸ್ಕರವೇ ನೀನು ಅಳುತಿದ್ದೀಯಾ ಎ೦ಬ ಸತ್ಯ ನಿನಗೆ ಗೋಚರಿಸುತ್ತದೆ.

ನಿಮ್ಮಲ್ಲಿ ಹಲವರು ಹೇಳುವರು, 'ಸ೦ತೋಶವೇ ದುಃಖಕ್ಕಿ೦ತ ದೊಡ್ಡದು' ಎ೦ದು,

ಮತ್ತೆ ಹಲವರು ಹೇಳುತ್ತಾರೆ, 'ಇಲ್ಲ, ದುಃಖವೇ ದೊಡ್ಡದು'

ಆದರೆ ನಾನು ನಿಮಗೆ ಹೇಳುತ್ತೇನೆ..'    ಅವೆರಡೂ ಅವಿಭಜಿತ. ಒ೦ದನ್ನೊ೦ದು ಬಿಟ್ಟು ಇರಲಾರದು.'

ಒಟ್ಟಿಗೇ ಅವು ಬ೦ದವು. ಒ೦ದು ನಿಮ್ಮಲ್ಲಿ ಜಾಗೃತವಾಗಿ ಕುಳಿತಾಗ, ಇನ್ನೊ೦ದು ನಿಮ್ಮಲ್ಲಿ ಮಲಗಿರುತ್ತದೆ.

ತಕ್ಕಡಿಯ ಎರಡು ತಟ್ಟೆಗಳ೦ತೆ ನಿಮ್ಮ ಸುಖ ಮತ್ತು ನಿಮ್ಮ ದುಃಖಗಳ ನಡುವೆ ನಿಜವಾಗಿ ನಿಮ್ಮನ್ನು ನೇತು ಹಾಕಲಾಗಿದೆ

ನೀವು ಶೂನ್ಯರಾದಾಗ, ಖಾಲಿಯಾದಾಗ ಮಾತ್ರ ನೀವು ಸಮತೋಲನದಿ೦ದಿರುತ್ತೀರಿ ಹಾಗು ವಿಶ್ರಾ೦ತಿಯಲ್ಲಿರುತ್ತೀರಿ.

ವ್ಯಾಪಾರಿ ಚಿನ್ನ ಬೆಳ್ಳಿಯನ್ನು ತೂಗಿದ೦ತೆ, ನಿಮ್ಮ ಹರ್ಷ ಅಥವಾ ನಿಮ್ಮ ದುಃಖ ಏರಬೇಕು ಅಥವಾ ಇಳಿಯಬೇಕು

 

***********************

 (ಕನ್ನಡಕ್ಕೆ ಭಾವಾನುವಾದ)

ಮೂಲ:

http://www.katsandogz.com/onjoy.html