ನಿನ್ನೆ ಮತ್ತು ಇಂದು ಪತ್ರಿಕೆಯಲ್ಲಿ ಕಂಡದ್ದು..

ನಿನ್ನೆ ಮತ್ತು ಇಂದು ಪತ್ರಿಕೆಯಲ್ಲಿ ಕಂಡದ್ದು..

Comments

ಬರಹ

ಐಐಎಂಬಿಯಲ್ಲಿ ತಮಿಳು ಸಾಮ್ರಾಜ್ಯ?


ಐಐಎಂಬಿ ಅಸ್ತಿತ್ವಕ್ಕೆ ಬಂದಾಗ ದೇವರಾಜು ಅರಸು ೧೦೦ಎಕರೆ ಭೂಮಿ ಹಾಗೂ ೧೦ಲಕ್ಷ ರೂ ನೆರವು ನೀಡಿದ್ದರಂತೆ. ಆದರೆ ನಮ್ಮ ನೆಲದಲ್ಲೇ ಇದ್ದು ನಮ್ಮ ಸೌಲತ್ತು ಬಳಸಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ.೮ ಅಸೋಸಿಯೆಟೆಡ್ ಎಕ್ಸಿಕ್ಯುಟಿವ್ ಹುದ್ದೆ ತಮಿಳರಿಗೆ ಕನ್ನಡದವರಿಗೆ ನಿರಾಕರಣೆ.ಹೌಸ್ ಕೀಪಿಂಗ್,ಊಟ,ಉಪಹಾರ, ೪೦ಕೋಟಿ ಕಟ್ಟಡ ನಿರ್ಮಾಣ ಗುತ್ತಿಗೆ, ೧.೩ಕೋಟಿ ಕಟ್ಟಡ ಶೃಂಗಾರ ಗುತ್ತಿಗೆ ಎಲ್ಲವೂ ತಮಿಳುನಾಡಿನ ತಮಿಳರಿಗೆ. --ಇಂದು ವಿಜಯ ಕರ್ನಾಟಕ ಪುಟ ೨


 


ಐಐಎಸ್‍ಸಿಯಲ್ಲೂ ಕೂಡ? ಕನ್ನಡ ಮತ್ತು ತಮಿಳು ಭಾಷೆ ಕಲಿಕೆಗೆ ಸಹಾಯವಾಗುವ ಒಂದು ಸಾಫ್ಟ್ ವೇರ್ ಕಂಡುಹಿಡಿದುದ್ದು ಅದು ಲಿಪಿಯನ್ನು ಭಾಷೆ ಮತ್ತು ಧ್ವನಿತರಂಗಗಳಾಗಿ ಪರಿವರ್ತಿಸುತ್ತವೆ.ಇದನ್ನು ಕಣ್ಡು ಹಿಡಿದಿದ್ದು ಬೆಂಗಳೂರಿನ ಭಾರತೀಯ ವಿಜ್ಙಾನ ಸಂಸ್ಥೆಯ ವಿಜ್ಙಾನಿಗಳು.ಆದರೆ ಇದಕ್ಕೆ ಇಟ್ಟ ಹೆಸರು "ತಿರುಕ್ಕುಳ್".


ಕುರುಳ್ ಅಂದರೆ ತಮಿಳಿನಲ್ಲಿ ಧ್ವನಿ ಎಂದು. --ನಿನ್ನೆ ವಿಜಯ ಕರ್ನಾಟಕ ಪುಟ ೧೧


 


ಹೀಗೆ ದೇಶದ ಉನ್ನತ ಹುದ್ದೆಗಳಿಂದ ಹಿಡಿದು,ಕ್ಲೀನರ್ ಕೆಲಸದವರೆಗೂ ತಮಿಳರು ತಮಿಳರನ್ನೇ ನೇಮಿಸಿಕೊಳ್ಳುತ್ತಿದ್ದಾರೆ.ನಮ್ಮ ಸಾಫ್ಟ್ ವೇರ‍್ನಲ್ಲಿಯೂ ಸಹ.ಬೇರೆಯವರಿಗೆ ಅದೇ/ಹೆಚ್ಚಿನ ಸಾಮರ್ಥ್ಯ ಇದ್ದರೂ ಬೆಲೆಯಿಲ್ಲ.ಬೆಂಗಳೂರಿನಲ್ಲಿ ತಮಿಳರು ,ಕೊಲ್ಕತ್ತದಲ್ಲಿ ಬಾಂಗ್ಲರ ವಲಸೆ ಬಂದಂತೆ ಬರುತ್ತಿರುವುದು ಕೇವಲ ಅವಕಾಶವಿದೆ ಎಂಬ ನಂಬಿಕೆಯಿಂದ ಮಾತ್ರ ಅಲ್ಲ ,ಇಲ್ಲಿ ಆಗಲೇ ಇರುವವರು ತಮಿಳರನ್ನೇ ಆಯ್ಕೆಯಲ್ಲಿರುವುದರಿಂದ. ಈಗಾಗಲೇ ಬೆಂಗಳೂರಿನ ಎಲ್ಲಕಡೆ ಹಬ್ಬಿರುವ ತಮಿಳರು ನಮ್ಮನ್ನು ಆಳೋದಿಕ್ಕೂ ಶುರುಮಾಡಿದ್ದರೆ.ನಮ್ಮ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ


ಹೀಗೆ ಮುಂದುವರೆದಲ್ಲಿ ನಮ್ಮದೇ ನೆಲದಲ್ಲಿ ನಾವು ಅವರ ಮುಂದೆ ಕೈಕಟ್ಟಿಕೊಂಡು ನಿಲ್ಲುವ ದಿನ ದೂರವಿಲ್ಲ ಅಲ್ಲವೇ?. ನೋಡೋದಕ್ಕೆ ಇದು ಸಣ್ಣದಂತೆ ಕಂಡರೂ ಭವಿಷ್ಯ ನೆನಸಿಕೊಂಡಾಗ ಭಯವಾಗುತ್ತೆ! ನಮಗೆ ಎಚ್ಚರವಾಗೋದು ಯಾವಾಗ? ಜೀವನೋಪಾಯಕ್ಕೆ ಬೇರೆಡೆಗೆ ಹೋಗಲಿ ಆದರೆ ನಿಮ್ಮವರೇ ಬೇಕೆಂಬ ಕುರುಡು ಭಾಷಾ ಪ್ರೇಮಕ್ಕೆ ಬೇರೆಯವರ ಅವಕಾಶಗಳನ್ನು ಕೊಲ್ಲದಿರಿ.


ಇಲ್ಲವಾದಲ್ಲಿ ನಾವುಗಳು ಇಂಟರ‍್ವ್ಯೂಗಳಲ್ಲಿ ಅದೇ ಮಾಡಬೇಗಾಗುತ್ತೆ ಯಾರ್ ಬಂದ್ ಕೇಳ್ತಾರ್ ನೋಡಾಣ.


--ಮನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet