ಕರುನಾಡ 'ಕಮಲ'..

ಕರುನಾಡ 'ಕಮಲ'..

ಬರಹ
ದೇಶಭಕ್ತಿಯ ಕಹಳೆ ಊದುತ ಭ್ರಷ್ಟತೆಯ ಹೊಸಕುವೆವೆಂದು ಅಭಿವೃಧ್ಧಿ ಮಂತ್ರವ ಪಠಿಸಿ ಮೋಸದಾಟದ ಬಲಿಗಳೆಂದು ದೈನ್ಯತೆಯ ಕಣ್ಣೀರಿಟ್ಟು ಸಿಂಹಾಸನವ ಏರಿತು.. ಗಣಿ ಧೂಳಿನಲಿ ಮಿಂದೇಳುತ್ತ ಗಡಿಯಾಚೆಯವರ ಸತ್ಕರಿಸುತ್ತ ಅನ್ನದಾತನ ಮಣ್ಣನು ಕಸಿದು ಕಂಡ ಕಂಡಲ್ಲಿ ಮೇಯುತ್ತ ಸಿಕ್ಕ ಸಿಕ್ಕವರನ್ನೆಲ್ಲ ಅಪ್ಪಿಕೊಳ್ಳುತ್ತ ನಿಯತ್ತನ್ನು ಹರಾಜಿಗಿರಿಸಿ ಕತ್ತಲೆಯ ಸಾಮ್ರಾಜ್ಯ ಸ್ಥಾಪಿಸಿತು ಕೆಸರಿನೊಳು ಅರಳುವ 'ಕಮಲ' ಕರುನಾಡಿನಲಿ ಹೊರಳಾಡ ತೊಡಗಿತು..