ಅಪ್ಪಾ....ದಾರಿ ಬಿಡು

ಅಪ್ಪಾ....ದಾರಿ ಬಿಡು

 

    ಅಪ್ಪಾ..ಈ ಕತ್ತಲಿನೊಳಗೆ

    ನನ್ನನ್ನೇಕೆ  ಬಂಧಿಸಿಟ್ಟೆ ?

 

     ಭವಿಷ್ಯದ ಬೆಳಕೆಡೆಗೆ

     ಹೆಜ್ಜೆಯಿಡುವ ಕನಸು

     ಹೊಸಕಿ ಹಾಕಿ ನನ್ನ

     ಮುಗ್ಧತೆಗೆ ಕಾವಲಿನ ಬೇಲಿ

 

     ಹಿಂದಿನ  ಎಂಜಲು ಉಳಿಸಿ

     ಅಮೃತವೆಂದು ಕೈಯಲ್ಲಿ ಹಿಡಿಸಿ

     ನಿನಗಿಷ್ಟವೋ ಕಷ್ಟವೋ  ಎಂದು

     ಎಂದೂ  ಕೇಳದ  ಕಿವುಡನಾದೆಯೇಕೆ?

 

     ಈ ಕತ್ತಲಿನಲ್ಲೆ ಬೆಳಕಿದೆಯೆಂದು

     ನಂಬಿಸಿ..

     ಧರ್ಮದ ಗೋಡೆ ಕಾವಲಿಟ್ಟು

     ಸಂಪ್ರದಾಯದ ಛಾವಣಿ ಹೊದೆಸಿ ಬಿಟ್ಟೆ ಏಕೆ ?

 

      ಆದರೆ  ....ಇನ್ನು ಕಾಯುವದಿಲ್ಲ

      ನಿಮ್ಮ ನಂಬಿಕೆಯ   ಈ ಗೂಡ

      ಹರಿದೊಗೆದು  ಬೆಳಕಿಗೆ ಮೈಯೊಡ್ಡುವ

       ತವಕ !  ನನಗೆ   ದಾರಿಬಿಡು

 

 

 

Rating
No votes yet

Comments