ತಲೆ ಬೋಳಿಸುವುದು ಯಾಕೆ?

ತಲೆ ಬೋಳಿಸುವುದು ಯಾಕೆ?

ಅಲ್ಲಾ ಕಲಾ ತಲೆ ಯಾಕಲಾ ಬೋಳಿಸ್ತಾರೆ ಅಂದ ನಮ್ಮೂರು ಪೆಸೆಲ್ ಹಳಸೋದು ಫಲಾವು ವಾಸ್ನೆಯ ಗಬ್ಬುನಾಥ ಗೌಡಪ್ಪ. ಗೌಡ್ರೆ ಒಂದು ಸಾನೇ ಹೇನಾಗಿದ್ರೆ, ಇಲ್ಲಾ ತಲ್ಯಾಗೆ ಹೆಚ್ಚಿಗೆ ಕೂದಲು ಬೆಳೆದಿದ್ರೆ. ಇಲ್ಲಾ ಯಾವುದಾದರೂ ಹುಳ ಹೊಕ್ಕಿದ್ರೆ. ಇದೆಲ್ಲದಕ್ಕೂ ಅಲ್ಲಾ ಅಂದ್ರೆ ಗಂಡ ಸತ್ತಾಗ ವಿಧವೆ, ಅಪ್ಪ,ಅವ್ವ ಸತ್ತಾಗ ಮಕ್ಕಳು ಅಂದ ಸುಬ್ಬ, ಅಂಗಾರೆ ಮಂತ್ರಿ ಶ್ರೀರಾಮುಲು ಯಾಕಲಾ ಬೋಳಿಸಿರೋದು. ಅವನ ಪ್ರಕಾರ ಕಾಂಗ್ರೆಸ್ ಸತ್ತೈತೆ ಅಂತಾ ಅಂದಾ ಸುಬ್ಬ. ಲೇ ಅವರು ಪಾದಯಾತ್ರೆ ಮಾಡ್ತಾ ಸಂದಾಗೆ ಅವ್ರೆ. ಅದೆಂಗೆಲ್ಲಾ ಸತ್ತು ಹೋಗಿದಾರೆ ಅಂತ್ಯಾ. ಏನು ಒಂದೀಟು ಡಾನ್ಸ್ ಮಾಡಿ ಸುಸ್ತು. ಮಂಡಿ ಸವದೈತೆ ಆದ್ರೂ ಅಂತಿದ್ದಾಗೆನೇ ಸತ್ತು ಹೋದರು ಅನ್ನೋದೆನ್ಲಾ ಬಡ್ಡೆ ಐದನೆ ಅಂದಾ. ನೋಡಲಾ ಮುಂದಿನ ದಪಾ ನಾನು ಎಂ.ಎಲ್.ಎ ಚುನಾವಣೆಗೆ ನಿಂತ್ಕಬೇಕು ಅಂತಾ ಇದೀನಿ. ಕಾಸು ಬೇರೆ ಇಲ್ಲಾ. ಅದಕ್ಕೆ ಶ್ರೀರಾಮುಲು ಜೊತೆ ಸೇರ್ಕಂಡರೆ ಸಾನೆ ಕಾಸು ಕೊತ್ತಾನೆ. ನಾನು, ನೀನು, ನಿಂಗ,ಕಟ್ಟಿಗೆ ಒಡೆಯೋ ಕಿಸ್ನ ಎಲ್ಲಾ ತಲೆ ಬೋಳಿಸ್ಕೊಂಡು ಬಳ್ಳಾರಿಗೆ ಹೋಗುವ ಅಂದಾ ಗೌಡಪ್ಪ.
ಸರಿ ಬೆಳಗ್ಗೆನೇ ಎಲ್ಲಾ ಕ್ಯೂನಾಗೆ ಹಜಾಮ ಹನುಮನ ತಾವ ಹೋದ್ವಿ. ನೋಡ್ರಲಾ ನೀವು ಕಟಿಂಗ್ ಮಾಡಿಸ್ದೆ ಸಾನೇ ತಿಂಗಳೇ ಆಗೈತೆ. ಒಳ್ಳೆ ಕಾಡು ಮನುಸರು ತರಾ ಆಗಿದೀರಾ. ಒಂದೊಂದು ತಲೆಗೆ 100ರೂಪಾಯಿ ಆಯ್ತದೆ ಅಂದಾ. ಏ ಯಾರು ಬಂದ್ಯಾರೆ ನೋಡ್ ಮಾತಡಲಾ. ಲೇ ಈ ಗೌಡ ಹಳೇದೆ 500ರೂಪಾಯಿ ಕೊಡಬೇಕು ಅಂದ. ಏನ್ರೀ ಗೌಡ್ರೆ. ಹೂಂ ಕಲಾ, ನಮ್ಮ ಅಪ್ಪ ಸತ್ತಾಗ ನಮ್ಮನೇವೆಲ್ಲಾ ಹೋಲ್ ಸೇಲಾಗಿ ತಲೆ ಬೋಳಿಸಿದ್ದು ಕಾಸು ಕೊಟ್ಟಿಲ್ಲ ಅಂದಾ ಗೌಡಪ್ಪ. ಏ.ಥೂ. ಸರಿ ಎಲ್ರೂ ತಲೆನೂ ಬೋಳಿಸ್ದ. ಕೆಲವೊಬ್ಬರು ತಲ್ಯಾಗೆ ರಕ್ತ ಸುರೀತಾ ಇತ್ತು. ಮಗಾ ಹನುಮ ಉದ್ರಿ ಗಿರಾಕಿ ಅಂತಾ ಹಳೇ ಬ್ಲೇಡ್ ಹಾಕಿದ್ದ. ಪಟಿಕದ ಜೊತೆಗೆ ಅರಿಸಿನ ಬಳೆದು ಕಳಿಸ್ದ. ಹಳ್ಯಾಗೆ ಹೊಂಟ್ವಿ. ಯಾರೋ ತಿರುಪತಿ ಇಂದ ಬಂದ್ಯಾರೆ ಅಂತಾ ರಂಗ ತೆಲುಗಾನಾಗೆ ಮಾತಾಡಸ್ದ. ನಾವು ಕಲಾ ಅಂದ್ ಮ್ಯಾಕೆ ಏ ಥೂ. ಅಂದ.
ಸರಿ ಗೌಡಪ್ಪನ ಮನೆಗೆ ಹೋದರೆ ಅವನ ಹೆಂಡರು ಗೌಡರು ಇಲ್ಲ. ಇಟ್ಟೊತ್ತಿಗೆ ಭಿಕ್ಸೆ ಹಾಕಕಿಲ್ಲಾ ಅಂದ್ಲು. ನಾನ್ ಕಣಮ್ಮೀ ಅಂದ್ ಮ್ಯಾಕೆ. ಏ ಒಳಗೆ ಬಾರಲಾ ಅಂದ್ಲು. ಗೌಡನ ಹೆಂಡರಿಗೆ ಕೈ ಕೆರೆತ ಬಂದ್ರೆ ಗೌಡಪ್ಪನ ತಲೆ ಮೇಲೆ ಸವರೋಳು. ವಿಭೂತಿ ಹಚ್ಚಿದ್ದಕ್ಕೂ, ತಲೆ ಬೋಳಿಸಿದ್ದಕ್ಕೂ ಗೌಡಪ್ಪ ಒಂತರಾ ಫೈಟರ್ ಶೆಟ್ಟಿ ಕಂಡಂಗೆ ಕಾಣೋನು. ಸರಿ ಬೆಳಗ್ಗೆನೇ ಬಳ್ಳಾರಿ ಹೋಗೋದು ಅಂತಾ ಆತು. ಎಲ್ಲಾ ಕಪ್ಪು ಡ್ರೆಸ್ನಾಗೆ ತಲೆಮೇಲೆ ಬಟ್ಟೆ ಗಂಟು ಹಿಡ್ಕಂಡು ಹೊಂಟ್ವಿ. ದಾರ್ಯಾಗೆ ಸಿಕ್ಕೋರು ಶಬರಿ ಮಲೆಗೆ ಹೋಯ್ತಾ ಇದೀವಿ ಅಂತಾ ನಮಗೆಲ್ಲರಿಗೂ ನಮಸ್ಕಾರ ಮಾಡೋದೆಯಾ. ಅಂಗೇ ಇರುಮುಡಿ ಅನ್ಕಂಡು ದಕ್ಸಿಣೆ ಹಾಕಿದ್ರು. ಸುಬ್ಬ ಬಸ್ ಚಾರ್ಜ್ ಆಯ್ತಯ ಬಿಡ್ಲಾ ಅಂದ. ಬಸ್ನಾಗೆ ಸಾನೆ ಮರ್ವಾದೆ. ಸ್ವಾಮಿಯೇ ಅಯ್ಯಪ್ಪಾ, ಸರಣಂ ಸರಣಂ ಅಯ್ಯಪ್ಪಾ ಅಂತಾ ಕುಂತ್ವಿ. ಮಾಲೆ ಹಾಕ್ದೋರು ಹೋಟಲಾಗೆ ತಿನ್ ಬಾರದು ಅಂತಾ ಕಂಡಕ್ಟರ್ ಮನೆಯಿಂದ ತಂದಿದ್ದ ಚಿತ್ರಾನ್ನ ನಮಗೆ ಕೊಟ್ಟು. ತಾನು ಒಳ್ಳೆ ಊಟ ಹೊಡ್ಕಂಡ್ ಬಂದ. ಸರಿ ಅಂಗೇ ಅರ್ಧ ಹೊಟ್ಯಾಗೆ ಬಳ್ಳಾರಿ ಹೋದ್ವಿ. ಕಾಂಗ್ರೆಸ್ ನೋವು ನಮ್ಮನ್ನೇ ಗುರಾಯಿಸೋವು. ಧರ್ಮದೇಟು ಗ್ಯಾರಂಟಿ ಆಗಿತ್ತು.
ಶ್ರೀರಾಮುಲು ಎದುರಿಗೆ ಸಿಕ್ತಿದ್ದಾಗೆನೇ ನಮ್ಮ ಗೌಡಪ್ಪ ಬಾಗುನ್ನಾರಾ ಅನ್ನಾ ಅಂದ. ಯಾರಕಿನ ನೀವು ಗೊತ್ತಾಗಲಿಲ್ಲ ಅಂತೂ ಶ್ರೀರಾಮುಲು. ಲೇ ಅಲ್ಲಿ ಯಾವುದೋ ಸತ್ತೋದಿಕಿನ ನಾಯಿ ವಾಸ್ನೆ ಬತ್ತಾ ಇದೆ ತೆಗೆಯಲಾ ಅಂತಾ ಕೆಲಸದೋನೆಗೆ ಶ್ರೀರಾಮುಲು ಅಂತಿದ್ದಾಗೆನೇ, ಸುಬ್ಬ ಅನ್ನಾ ಅದು ನಮ್ಮ ಗೌಡಪ್ಪನ ಪೆಸೆಲ್ ಸೆಂಟ್ ಅಂದ. ಓಹೋ ನೀನಾ ಗೌಡಪ್ಪ. ನಿಮ್ಮ ಊರಕಿನ ಎಲ್ಲಾ ಚೆನ್ನಾಗದೀರಾ ಅಂದ. ಎಲ್ರೂ ತಲೆನೂ ನೋಡಿ ನಮ್ಮ ಬೆಂಬಲಕ್ಕೆ ಬಂದಿರೋದು ಖುಸಿ ಆತು ಅಂತಾ ನಮ್ಮ ತಲೆಮೇಲೆ ಕೈ ಆಡಿಸಿದ ಶ್ರೀರಾಮುಲು. ಮಗಾ ಹಜಾಮ ಹನುಮ ಹುಬ್ಬನ್ನು ಬೋಲ್ಸಿದ್ದ. ಪೊಲೀಸ್ನೋರು ಯಾರೋ ನಕ್ಸಲಯಟ್ ಇರಬೇಕು ಅಂತಾ ನೋತ್ತಾ ಇದ್ವು.
ಸರಿ ನಾವು ಬಳ್ಳಾರ್ಯಾಗೆ ಪಾದಯಾತ್ರೆ ಮಾಡಿದ್ವಿ. ಎಲ್ಲಾ ಮಿರಿಂಡಾ ತಲೆ. ಯಾರು ಅಂತಾನೇ ಗೊತ್ತಾಯ್ತ ಇರ್ಲಿಲ್ಲ. ಸುಬ್ಬ ಯಾರೂ ಅಂತಾ ಗೊತ್ತಾಗದೆ ಶ್ರೀರಾಮುಲು ಅಂಗ ರಕ್ಸಕದೋರು ಜೊತೆ ಸೇರ್ಕಂಡಿದ್ದ. ಮಗಂಗೆ ಗನ್ ಬೇರೆ ಕೊಟ್ಟಿದ್ರು. ತಂತಿ ಪಕಡು ಸೀತು ಫಕ್ಕನೆ ನಕ್ತಾ ಬಳ್ಳಾರಿಯೋರು ಜೊತೆಗೆ ಇತ್ತು. ನಮ್ಮ ಗೌಡಪ್ಪನ ಮಂಡಿ ಬೇರೆ ಸವದಿತ್ತು. ಅಲ್ಲಲ್ಲೇ ಕೂತ್ಕಳೋನು. ಪಾದಯಾತ್ರೆ ಮಾಡಕಿನ ಬೇಕಾದ್ರೆ ಹಿಂಗೆ ಕೂರಬಾರದು. ಕಾಂಗ್ರೆಸ್ನೋರು ಇದನ್ನೇ ದೊಡ್ಡಕಿನ ಮಾಡ್ತರೆ ಅಂತು ಶ್ರೀರಾಮುಲು. ನೋಡು ಗೌಡಪ್ಪ ನೀನು ನನಗೆ ತುಂಬಾ ಪ್ರೋತ್ಸಾಹಕಿನ ಕೊಟ್ಟಿದ್ಯಾ ಎಂ.ಎಲ್.ಎ ಎಲೆಕ್ಸನ್ ಗೆ ಒಂದು 50ಸಾವಿರ ಕೊತ್ತೀನಿ ಅಂತೂ ಶ್ರೀರಾಮುಲು. ನಮ್ಮ ಖರ್ಚೇ 20ಸಾವಿರ ಆಗಿತ್ತು. ಬಸ್ ಹತ್ತೋ ಬೇಕಾದ್ರೆ ಕಾಂಗ್ರೆಸ್ ನೋರು ಬೇರೆ ನಾಲ್ಕು ಒದೆ ಕೊಟ್ಟಿದ್ರು. ಮಕ್ಕಳ ಇನ್ನೊಂದಪ ಇಲ್ಲಿ ಬಂದ್ರೆ ಕಾಲು ಮುರಿತೀವಿ ಅಂದ್ವು. ಕಟ್ಟಿಗೆ ಒಡೆಯೋ ಕಿಸ್ನ ಒಂದ್ಸಾರಿ ಗೌಡಪ್ಪನ ಕೆಕ್ಕರಿಸಿದ್ದ. ಸರಿ ವಾಪಸ್ಸು ಊರಿಗೆ ಬಂದರೆ. ಏನ್ರಲಾ ಏನು ಆಯಿತು ಅಂದರೆ. ನಮ್ಮ ಗೌಡಪ್ಪನ ಮಂಡಿ ಸವದೈತೆ ಅಂದಾ ಸುಬ್ಬ.

www.komal1231.blogspot.com

 

 

 

Rating
No votes yet

Comments