ಹರಕೊಂಡ್ ತಿನ್ನುವವನನ್ನ ಮುರ್ಕೊಂಡ್ ತಿನ್ನುವುದು

ಹರಕೊಂಡ್ ತಿನ್ನುವವನನ್ನ ಮುರ್ಕೊಂಡ್ ತಿನ್ನುವುದು

ಬರಹ

ನಮಸ್ಕಾರ,

ನಮಗೆಲ್ಲ ತಿಳಿದಿದೆ ... ಸಂಸ್ಕೃತ ಒಂದು  ಪ್ರಾಚೀನ, ಪರಿಪೂರ್ಣ ಭಾಷೆ.  ಅದೊಂದು ಜ್ಞಾನ ಭಂಡಾರ.  ಸಂಸ್ಕೃತವನ್ನು ಉಳಿಸಬೇಕು. ಅದರಿಂದ ಜ್ಞಾನವನ್ನು ಪಡೆದು, ನಮ್ಮ ಜೀವನದಲ್ಲಿ, ಇಂದಿನ ವಿಜ್ಞಾನದಲ್ಲಿ, ರಾಜಕೀಯದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು.  ಕೆಲವೊಂದು ಸಂಸ್ಥೆಗಳು ಈ ದಿಸೆಯಲ್ಲಿ ಅದ್ಭುತ ಕೆಲಸ ಮಾಡುತ್ತಿವೆ.  ಇಷ್ಟೇ ಆದರೆ ಸಾಕು. ಎಲ್ಲರಿಗೂ ಪ್ರಯೋಜನವಾಗುತ್ತದೆ.

ಈಗ ಒಂದು ಹೊಸ ಟ್ರೆಂಡ್ ಶುರುವಾಗಿದೆ - ಸಂಸ್ಕೃತ ಗ್ರಾಮಗಳನ್ನು, ಮನೆಗಳನ್ನು ನಿರ್ಮಿಸುವುದು - ಸಾಸನ ಒರಿಸ್ಸಾ, ಜಿಹಿರಿ ಮಧ್ಯಪ್ರದೇಶ , ಮತ್ತೂರು ಕರ್ನಾಟಕ ... (ಇದಕ್ಕೆ ಸಂಸ್ಕೃತ ಭಾರತೀಯಂತಹ ದೊಡ್ಡ ಸಂಸ್ಥೆಗಳು ಹಾಗು ಹಲವಾರು ವ್ಯಕ್ತಿಗಳ ಪ್ರಯತ್ನವಿದೆ).  ಅಂದರೆ ಆ ಗ್ರಾಮಗಳಲ್ಲಿ ಎಲ್ಲರು ಸಂಸ್ಕೃತವನ್ನು ಮಾತನಾಡಲಿಕ್ಕೆ ಬಳಸುತ್ತಾರೆ.

ಈಗಾಗಲೇ ಇಂಗ್ಲಿಷ್, ಹಿಂದಿಯಿಂದ ಉಸಿರಾಡಲು ಕಷ್ಟಪಡುತ್ತಿರುವ ಭಾರತೀಯ ಭಾಷೆಗಳಿಗೆ ಇನ್ನೊಂದು ಗುದ್ದು ಕೊಟ್ಟ ಹಾಗೆ. ಈಗಾಗಲೇ ನಮ್ಮ ದೇಶದಲ್ಲಿ ಹಲವಾರು ಭಾಷೆಗಳು ನಶಿಸಿವೆ, ಇನ್ನು ಕೆಲವು ಅವಸಾನದ ಅಂಚಿನಲ್ಲಿವೆ. ನಮ್ಮ ದೇಶದಲ್ಲಿ ತಮ್ಮ ಮಾತೃಭಾಷೆ  ಬಳಸುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ, ಅಂಥಹ ಪರಿಸ್ಥಿತಿಯಲ್ಲಿ ಮಿಕ್ಕಿರುವ ಜನರನ್ನು ಸಂಸ್ಕೃತ ದಿನನಿತ್ಯ ಬಳಸಲು ಪ್ರಚೋದಿಸುವುದು ಎಷ್ಟು ಸರಿ?

ನಮಗೆ ಸಂಸ್ಕೃತ ಬೇಡವೆಂದಲ್ಲ. ಅದನ್ನು ಓದಿ, ಜ್ಞಾನವನ್ನು ಪಡೆದು, ಇಂದಿನ ಜಗತ್ತಿಗೆ ಅನ್ವಯಿಸಲು ಪಾಂಡಿತ್ಯಪೂರ್ಣವಾದ ಕೆಲ ವ್ಯಕ್ತಿಗಳು ಸಾಕು. ಸಂಸ್ಕೃತ ಗ್ರಾಮಗಳಲ್ಲ, ಸಂಸ್ಕೃತ ಮನೆಗಳಲ್ಲ. ಈಗ ಎಲ್ಲಕಿಂತ ಪ್ರಮುಖವಾಗಿ ಆಗಬೇಕಾಗಿರುವುದು ನಮ್ಮ ಮಾತೃಭಾಷೆಗಳನ್ನು, ಅವಸಾನದಲ್ಲಿ ಇರುವ ಹಲವಾರು  ಉಳಿಸುವುದು, ಬೆಳೆಸುವುದು.


ನಿಮ್ಮ ಏನಂತೀರಿ ಗೆಳೆಯರೇ ?