ಭಲೇ ಅದ್ರಷ್ಟ !!!ಭಾಗ-1
ಹೀಗೆ ಕೂತಿದ್ದೆ ಅದೇ cubical ನಲ್ಲಿ,ಏನೇನೋ ಯೋಚನೆಗಳು ಮಾನಸಪಟದಲ್ಲಿ ತೇಲಿ ಬರುತ್ತಿದ್ದವು, ಜೊತೆಗೆ ನಾಳಿನ ಯೋಜನೆಗಳ ಸರಮಾಲೆಯನ್ನು ಪೋಣಿಸುತ್ತಿದ್ದೆನು.ಇದೇ ಹೊತ್ತಿಗೆ ಸರಿಯಾಗಿ ಯಾವುದೊ ಒಂದು ಅದ್ರಷ್ಟ ದ ಕುರಿತಾದ ತೇಲಿ ಬಂದ ಇ-ಮೇಲ್ ನನ್ನ ಅದ್ರಷ್ಟ ದ ಬಗ್ಗೆ ನನ್ನನ್ನು ಕೆಣಕಲು ಪ್ರೇರೇಪಿಸಿತು.
ಸಣ್ಣವನಿರುವಾಗ ಎಲ್ಲರು ಹೇಳುತಿದ್ದರು ನೀನು ತುಂಬಾ ಅದ್ರಷ್ಟವಂತ ಕಣಪ್ಪ ನೀನು ಅಂದು ಕೊಂಡಿದ್ದೆಲ್ಲ ನೀನು ಪಡೆದು ಕೊಳ್ಳುತ್ತಿಯಾ ಎಂದು. ನಂಬಿಕೆ ಇರಲ್ಲಿಲ್ಲ ನನಗೆ ಭವಿಷ್ಯ , ದಿನಫಲ ಇತ್ಯಾದಿಯಲ್ಲಿ. ಕೆಲಸ, ಮಾತು ಮತ್ತು ಸತ್ಯದ ನಡೆ ನಾವಗಿಸಿದರೆ ಅದ್ರಷ್ಟ ನಮ್ಮನ್ನು ಹಿಂಬಾಲಿಸುತ್ತದೆ ಎಂಬ ನಂಬಿಕೆ ನನ್ನದಾಗಿತ್ತು. ಇಂಜಿನಿಯರ್ ಆಗಬೇಕು ಎಂದು ನಾನೆಂದೂ ಕನಸು ಕಂಡವನಲ್ಲ ,ಮನೆಯಿಂದ ದೂರವಾಗಬೇಕಲ್ಲ ಎಂಬ ವಿಚಾರದಿಂದಲೇ ನಾನು ಆ ಕನಸು ಕಾಣಲಿಲ್ಲ ಎನ್ನ ಬಹುದೇನೋ, ಆದರೆ ಮನೆಯವರ ಒತ್ತಾಯದ ಮೇರೆಗೆ ಇಂಜಿನಿಯರಿಂಗ್ ಸೇರಿಕೊಂಡೆ, ಮನೆಯವರಂತು ಆಗ ನನಗೆ campusನಲ್ಲಿ ಕೆಲಸ ಸಿಗಬೇಕು, ನನ್ನನ್ನು ಸಾಫ್ಟ್ವೇರ್ ಪೋಷಾಕಿನಲ್ಲಿ ನೋಡಬೇಕು ಎಂದೆಲ್ಲ ಕನಸು ಕಂಡದ್ದೇನೋ ನಿಜ. ಅಂತೆಯೇ ಮೊದಲ ಎರಡು ವರುಷಗಳನ್ನು ಸಲಿಸಾಗಿಯೇ ಮುಗಿಸಿದೆನು . ನಾಲ್ಕನೇ sem ನಂತರದ ರಜೆಯಲ್ಲಿ ಮನೆಗೆ ಬಂದಾಗ ಎಲ್ಲೆಲ್ಲೂ ಇಂಜಿನಿಯರ್ ಗಳೇ ಕಾಣುತ್ತಿದ್ದರು, ಒಬ್ಬರ ನಂತರ ಒಬ್ಬರಂತೆ ನನ್ನನ್ನು campus ಎಂಬ ಯುದ್ದಕ್ಕೆ ಕಳುಹಿಸಿಕೊಡುವ ತವಕದಲ್ಲಿದ್ದರು. ಕೆಲವರಂತೂ "ನೀನು m-tech ಮಾಡು !!" ಎಂಬ ಪುಕ್ಕಟ್ಟೆ ಸಲಹೆ ನೀಡುತ್ತಿದ್ದರು .
ಜನವರಿ ೨೦ ೨೦೦೮ ,ಆಗ ತಾನೆ ಜಾತ್ರೆಯ ಅಮಲಲ್ಲಿದ್ದೆ ಮನೆಯವರು ಊರಿಂದ ಕಾಲೇಜ್ ಗೆ ಹೋಗು ಎಂದು ಕಳಿಸಿಕೊಟ್ಟರು ,ಆ ಸಮಯದಲ್ಲಿ ನಾನು ಕಾಲೇಜ್ ಪಕ್ಕದಲ್ಲೇ ರೂಂ ಒಂದನ್ನು ಬಾಡಿಗೆಗೆ ತೆಗೆದು ಅಲ್ಲಿ ಉಳಕೊಳ್ಳುತ್ತಿದ್ದೆ, ಆ ವರುಷವಂತು ನಮ್ಮ ಕಾಂಪೌಂಡ್ ನಲ್ಲಿ 80 % ವಿದ್ಯರ್ಥಿಯರು 3 ನೇ ವರ್ಷದ ವ್ಯಾಸಂಗ ಮಾಡುತ್ತಿದ್ದರು.ಹಿಂದೆ ಹೇಳಿದಂತೆ ನಾನು ಅವರೊಂದಿಗೆ ಅದೃಷ್ಟ ಪರೀಕ್ಷೆ ಗೆ ಅಣಿಯಾದೆ. ಮನೆಯವರಿಗೊಸ್ಕರ ವಾದರೂ ಒಂದು ಕಂಪನಿ ಯಲ್ಲಿ ಕೆಲಸ ಸಿಗಬೇಕು ಅಂದು ಅಷಿಸಿದ್ದೆ. ಮೊದಲ ದಿನ ಇನ್ಫೋಸಿಸ್ ಬಂದಿತ್ತು ಅದರಲ್ಲಿ ಸೆಲೆಕ್ಟ್ ಅಗುವೇನೋ.... ಆದರೆ ಮಂಗಳೂರಿನಲ್ಲೇ ಇರಬಹುದು ಎಂಬ ಆಸೆಗೆ ನನ್ನ ಅದೃಷ್ಟ ಪರೀಕ್ಷೆ ಮಾಡಲು ನಿಂತೆ , ಇಲ್ಲ ಅದುಷ್ಟ ಕೈ ಕೊಟ್ಟಿತು, ಮಾರನೆದಿನ ಉಡುಪಿಯ ರೋಬೋ ಸಾಫ್ಟ್ ಬಂದಿತ್ತು , ಹುಂ ಅಲ್ಲೂ ಇಲ್ಲ....
ಎಲ್ಲಾ ಆಸೆಗಳು ಕರಗಿಹೋದವು.ಆ ನಂತರ ಬಂದ ಕಂಪನಿ ಎಲ್ಲಾ ಸುಮ್ಮನೆ ನಾಮ್ ಕೆ ವಾಸ್ತೇ ಎಂಬಂತೆ attend ಮಾಡಿದೆ .
ಎರಡು ತಿಂಗಳು ಆಗುತ್ತಿದ್ದಂತೆ ನನ್ನ ಅದೃಷ್ಟ ಏನಿರಬಹುದು ಎಂದು ಪರಿಚಯವಾಗಿತ್ತು ನೋಡಿ !!! ಕೊನೆಗೆ ಮೇ ತಿಂಗಳ ಕೊನೆಯವಾರ ಪುಣೆ ಯಲ್ಲಿನ persistent system ಬಂದಿತ್ತು,ನನ್ನಲ್ಲಿನ ಎಲ್ಲಾ ಉತ್ಸಾಹ ಉಲ್ಲಾಸ ಎಲ್ಲವು ಮಾಯಾ ವಾಗಿತ್ತು,ಇಲ್ಲಿವರೆಗೆ ಟಿಪ್-ಟಾಪ್ ಆಗಿ ಪಕ್ಕ proffesional ಆಗಿ ಅಣಿಯಾಗುತ್ತಿದ್ದೆ, ಇಂದು ಅವು ಏನು ಇಲ್ಲ ಬರಿಯ ಪ್ಯಾಂಟ್ ಶರ್ಟ್ , ಮಂಗಳೂರಿನ ಮಳೆಯಂತು ಜೋರಾಗಿ ಬರುತಿತ್ತು, ಶೂ ಹಾಕುವ ಧೈರ್ಯವೂ ಬರಲಿಲ್ಲ. ಹಾಗೆ ತಿರುಗಾಡಲು ಹೋದವರಂತೆ ಇಂಟರ್ವ್ಯೂ ಗೆ ಹೋಗಿದ್ದೆ.
ಹುಂ ಇವತ್ತು ಅದೃಷ್ಟ ನನ್ನದಾಗಿತ್ತು. ಮೊದಲ ರೌಂಡ್ ,ಎರಡನೇ ರೌಂಡ್ ಮೂರನೇ ರೌಂಡ್ ಎಲ್ಲಾ ಸಲಿಸಾಗಿಯೇ ನಡೆದುಹೋಯಿತು. ಈಗ ಮಹಾ ಸಮರ H -R ರೌಂಡ್ ,ನನ್ನ ಮೇಲೆ ಈಗ ನನಗೆ ನಂಬಿಕೆ ಹೊರಟುಹೋಗಿತ್ತು.ಈಗ ಬರಿ ಅದೃಷ್ಟದಾಟ ಎಂದು ಸುಮ್ಮನಾಗಿದ್ದೆ.
ನನ್ನ ಬೇಜವಬ್ದಾರಿ ಭಂಗಿ ನೋಡಿದ H -R "ಏನಪ್ಪಾ ಶೂ ಎಲ್ಲಿ ?".
ಮೊದಲು ಸುಮ್ಮನಾದೆ ಆಮೇಲೆ "ಮುಂಗಾರು ಮಳೆ ನೋಡಿ, ಜೊತೆಗೆ ನಾನು ಇಲ್ಲಿವರೆಗೆ ತಲುಪುವೆ ಎಂಬ ನಂಬಿಕೆ ಇರಲ್ಲಿಲ್ಲ ,ಅದ್ದರಿಂದ ಶೂ ಹಾಕಲಿಲ್ಲ !! ವ್ಯವಹರಿಸಲು ಶೂ ಮಾನದಂಡ ಎಂದು ಗೊತ್ತಿರಲಿಲ್ಲ !! "ಎಂಬ ವ್ಯಂಗ್ಯ ನಗು ನನ್ನಲ್ಲಿತ್ತು.
ಬಳಿಕ ಅದ್ಯಾವುದ್ಯಾವುದೋ ತನ್ನ ಭಿತ್ತಳಿಕೆ ಇಂದ ಬಾಣ ಎಸೆದರು ನೋಡಿ ,ಅವುಗಳಿಗೆ ನನ್ನಲ್ಲಿನ ಸಮಾದನಕರ ಅಸ್ತ್ರದಿಂದ ಎದುರಿಸಿದಾಗ ನನ್ನಲ್ಲಿದ್ದ ಸಣ್ಣ ಆತ್ಮವಿಶ್ವಾಸವೂ ಮಾಯಾವಾಯಿತು.
ಮುಂದೇನು? .. ಮನೆಗೆ ಕರೆ ಮಾಡಿ "ಮಿಗೆಲೇ ಕಸ್ಸ್ luck ಕಿ... ಕೆದ್ನ ಕಂಯಿ ಜೈನಾ " ಅಂದೆ.
ಎಲ್ಲರ ಪ್ರಶ್ನೋತ್ತರ ಮುಗಿದಾದ ಬಳಿಕ H -R ಪುನಃ ನನ್ನನ್ನು ಕರೆದರೂ , ಬಳಿಕ ಮತ್ತೊಮ್ಮೆ ನನ್ನನ್ನು ಇಂಟರ್ವ್ಯೂ ಮಾಡುವುದಾಗಿ ತಿಳಿಸಿದಾಗ ತುಂಬಾ ಖುಷಿಯಾಯಿತು. ಆತ್ಮವಿಶ್ವಾಸವೂ ಜಾಗ್ರತವಾಯಿತು . ತುಂಬು ವಿಶ್ವಾಸದಿಂದ ಎದುರಿಸಿದೆ.
ಕೊನೆಯ ಮಾತು "ನಿನ್ನನ್ನು ಪೂನದಲ್ಲಿ ಬೇಟಿ ಯಾಗುವೆ ,ಅದು ಶೂ ನೊಂದಿಗೆ !!! ಮಳೆ ಇರಲಾರದು ಭೇಟಿ ಆಗಲು ಮನಸಿದೆಯಾ ?"ಅವರನ್ದದ್ದು ೨ ವರುಷ ಕಳೆದುಹೋದರು ಈಗ ಕೇಳಿದಂತೆ ನನ್ನ ಸ್ಮೃತಿಪಟಲದಲ್ಲಿದೆ .
ಮುಂದೇನು ತುಂಬಾ ಅದೃಷ್ಟವಂತ ಎಂಬ ಮಾತು ಕೊನೆಗೂ ನಿಜವಾದಂತೆ ಆಯಿತು.
ಇಲ್ಲಿ ಏನು ಅದೃಷ್ಟದ ಮಾತು ಬಂತು ಎಂದು ಕೊಂಡಿರಾ... ಹುಂ ಇದೆ ....ಸ್ವಾರಸ್ಯದ ವಿಷಯಗಳು ಹಲವಾರಿದೆ.ನಿಜವಾದ ಅದೃಷ್ಟದ ಅರಿವಾದದ್ದು ಆ ದಿನದ ಬಳಿಕವೇ.
ಹೋಯಿತು ಮತ್ತೆ ಆರು ತಿಂಗಳುಗಳು ಡಿಸೆಂಬರ್ ೨೦೦೮ , ಇಡಿ ಪ್ರಪಂಚವೇ ಬೆರಗಾದ ರಿಸೆಶನ್ ಸಮಯವಾಗಿತ್ತು. ಮೇ ಯಲ್ಲಿ ಒಟ್ಟು ೨೫ -೩೦ ಮಂದಿ ಆ ಕಂಪನಿಯಲ್ಲಿ ಸೆಲೆಕ್ಟ್ ಆಗಿದ್ವಿ ಎಲ್ಲರು ಉಲ್ಲಾಸದಲ್ಲಿ ಬೀಗುತ್ತಿದ್ದರು, ಅದೇ ಸಮಾಯಕ್ಕೆ ಸರಿಯಾಗಿ ೨೨ ಮಂದಿಗೆ ರೆಜೆಕ್ಶನ್ ಲೆಟರ್ ಬಂತು :(
ಅದ್ರಷ್ಟ ಕೈ ಕೊಟ್ಟಿತು ಅಂದುಕೊಂಡ್ರಾ ...? ಇಲ್ಲ ..ಅಲ್ಲಿ ಕೈ ಕೊಟ್ಟಿದ್ದಿದ್ರೆ ಮುಂದೆ ಕಥೆನೇ ಬೇರೆಯಾಗಿರುವುದು !!
ಸೆಲೆಕ್ಷನ್ ಆದ ೮ ಮಂದಿಯಲ್ಲಿ ನಾನು ಒಬ್ಬನಿದ್ದೆ :) ಹುಂ ಇದು ಅದೃಷ್ಟ ನೋಡಿ !!!!
ಮುಂದೆ ??
ಮೇ- ಜೂನ್ ನಲ್ಲಿ ಇಂಜಿನಿಯರಿಂಗ್ ನ ಹೊಸ್ತಿಲು ದಾಟುವ ಹೊತ್ತಿನಲ್ಲಿ ರಿಸೆಶನ್ ಇನ್ನೊಮ್ಮೆ ಜಾಡಿಸಿ ಉಳಿದ ೮ ರಲ್ಲಿ ೬ ಜನರಿಗೆ ಒದ್ದಿತ್ತು.
ಅದ್ರಷ್ಟ ಕೈ ಕೊಟ್ಟಿತು ಅಂದುಕೊಂಡ್ರಾ ...?
ಇಲ್ಲ ..ಅಲ್ಲಿ ಕೈ ಕೊಟ್ಟಿದ್ದಿದ್ರೆ ಮುಂದೆ ಕಥೆನೇ ಬೇರೆಯಾಗಿರುವುದು !!
ಜೋಯ್ನಿಂಗ್ ಲೆಟರ್ ಸಿಕ್ಕ ಇಬ್ಬರಲ್ಲಿ ನಾನೂ ಒಬ್ಬನಿದ್ದೆ ಹುಂ ಇದು ಅದೃಷ್ಟ ನೋಡಿ !!!!
ಉಳಿದ ೨೫-೨೮ ಮಂದಿಯ ವ್ಯಥೆ ನೋಡಿದಾಗ ಬೇಜಾರಾಗುತ್ತಿತ್ತು ..ಒಮ್ಮೆ ಸೆಲೆಕ್ಟ್ ಆದವರಿಗೆ ನಂತರದ ಕಂಪನಿ attend ಮಾಡುವಂತೆ ಇರಲ್ಲಿಲ್ಲ ನಮ್ಮ ಕಾಲೇಜ್ ನಲ್ಲಿ. ಅವರಿಗಂತೂ ಮೂಗಿನ ತುದಿಯ ತುಪ್ಪವಾಯ್ತು ಈ ಕಂಪನಿ .
ಎಲ್ಲರೂ ಪ್ರಯತ್ನಕಿಂತ ಅದೃಷ್ಟ ನನ್ನ ಕೈ ಹಿಡಿಯಿತು ಎಂಬ ಮಾತು ಆಡಲಾರಂಬಿಸಿದಾಗ ನನಗೆ ನಿಜಕ್ಕೂ ಸಣ್ಣಾಗಿನ ಮಾತು ನಿಜವಾದಂತೆ ಅನಿಸಲಾರಂಬಿಸಿತು.
ಮುಂದೆ?
ಮುಂದೆ ಅದೃಷ್ಟ ಹೀಗೆ ಕೈ ಹಿಡಿಯಿತು ಎಂದು ಕೊಂಡಿರಾ ...
ಸ್ವಾರಸ್ಯ ಇನ್ನು ಹಲವಿದೆ ಮುಂದೆ ಯಾವಾಗಲಾದರೂ ಹೇಳುತ್ತೇನೆ.
ಕಾಮತ್ ಕುಂಬ್ಳೆ
ಭಲೇ ಅದ್ರಷ್ಟ !!!ಭಾಗ-2: http://sampada.net/blog/kamathkumble/21/09/2010/28025
Comments
ಉ: ಭಲೇ ಅದ್ರಷ್ಟ !!!ಭಾಗ-1
In reply to ಉ: ಭಲೇ ಅದ್ರಷ್ಟ !!!ಭಾಗ-1 by Harish Athreya
ಉ: ಭಲೇ ಅದ್ರಷ್ಟ !!!ಭಾಗ-1
ಉ: ಭಲೇ ಅದ್ರಷ್ಟ !!!ಭಾಗ-1
In reply to ಉ: ಭಲೇ ಅದ್ರಷ್ಟ !!!ಭಾಗ-1 by shreekant.mishrikoti
ಉ: ಭಲೇ ಅದ್ರಷ್ಟ !!!ಭಾಗ-1