ಭಲೇ ಅದ್ರಷ್ಟ !!! ಭಾಗ-೨

ಭಲೇ ಅದ್ರಷ್ಟ !!! ಭಾಗ-೨

ಇಗಲಂತೂ ಸ್ವರ್ಗಕ್ಕೆ ಮೊರೆ ಗೇಣು ಎಂಬಂತೆ ಆಗಿತ್ತು, ಜೂನ್ ನ ಕಡೆಯ ವಾರದಲ್ಲಂತು ಜೋಯ್ನಿಂಗ್ ಡೇಟ್ ಬಂತು.ಮನಸ್ಸಲ್ಲೇ ಎಲ್ಲಾ ಕನಸು ನನಸಾದ ಸಂಭ್ರಮ ಮನೆಮಾಡಿತ್ತು.ಆದರೆ ಈಗ ಒಂದು ಚಿಂತೆ  ಪೋಸ್ಟಿಂಗ್ ಬಂದಿದ್ದು "ನಾಗ್ಪುರ್"ಗೆ :(
ಮನೆಯಿಂದ ದೂರ ಹೋಗುವುದೆಂದರೆ ಅಲರ್ಜಿ ಇತ್ತು ಈಗ ನೋಡಿ ಅದ್ರಷ್ಟ ಮನೆಯಿಂದ ೧೨೦೦ ಕಿ.ಮಿ ಧೂರಕ್ಕೆ ನೂಕಿ ಬಿಟ್ಟಿತು.ನಾಗ್ಪುರ್ ಹೆಸರು ಕೇಳಿದ್ದೇನೋ ನಿಜ ಆದರೆ ಉರಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ,ಸೊ ಇಂಟರ್ನೆಟ್ ನ ಮೊರೆ ಹೋದೆ ,ಮಂಗಳೂರಿನಿಂದ ನಾಗ್ಪುರ್ ಗೆ ಹೇಗೆ ಹೋಗುವುದೆಂದು ಮೇಪ್ ನೋಡಲಾರಂಬಿಸಿದೆ, ಮಂಗಳೂರಿನಿಂದ ಟ್ರೈನ್ ಟೇಬಲ್ ನೋಡಿದಾಗ ವಾರಕ್ಕೆ ಒಂದೇ ಟ್ರೈನ್ ಅದು ಮೈಲಾರ ಸುತ್ತಿ ಕಾಶಿ ತಲುಪಿದೆವು ಅಂತಾರಲ್ಲ ಹಾಗೆ ಸುತ್ತು ಬಳಸಿ ಹಿಡಿ ಕೇರಳ ತಮಿಳುನಾಡು ಆಂದ್ರ ದರ್ಶನ ಮಾಡುವಂಥದ್ದು ,ಒಟ್ಟಿಗೆ ೩೮ ಗಂಟೆಯ ಪ್ರಯಾಣ. ಉರು ಹೊಸದು ಅದಕ್ಕಾಗಿ ಮನೆಯಿಂದ ಮಾಮನ ಜೊತೆಗೆ ಹೋಗುವ ಮಾತಾಯಿತು.ಮಾಮ ಬೆಂಗಳುರಿನಲ್ಲಿದ್ದರು ,ಅದಕ್ಕಾಗಿ ನನ್ನ ಪ್ಲಾನ್ ಅನ್ನು ಬೆಂಗಳೂರ್  ಮಾರ್ಗವಾಗಿ ಮಾಡುವುದು ಅನಿವಾರ್ಯವಾಯಿತು.

ಅಗುಸ್ಟ್ ೨೬ ಕ್ಕೆ ಜೋಯ್ನಿಂಗ್ ಡೇಟ್  ಆಗಿತ್ತು, ನನಗೆ ಆಗಸ್ಟ್ ೨೫ ಕ್ಕೆ ನಾಗ್ಪುರ್ ತಲುಪಲೇ ಬೇಕಿತ್ತು.ಆದುದರಿಂದ ನನಗೆ ಆ ವರ್ಷದ ಗಣೇಶಹಬ್ಬ ತ್ಯಾಗ ಮಾಡಬೇಕಾಯಿತು.ನಾನೂ ೨೨ ರಂದು ಮಂಗಳೂರಿನಿಂದ ಬೆಂಗಳೂರಿಗೆ ೨೪ ಕ್ಕೆ ಬೆಂಗಳೂರಿನಿಂದ ನಾಗ್ಪುರ್ ಗೆ ಹೋಗುವುದು ಎಂದು ನಿಶ್ಚಿತ ಮಾಡಿ ಕೊಂಡೆ.ನನ್ನ ಅದೃಷ್ಟಕ್ಕೆ ಸೆಲೆಕ್ಟ್ ಆದ ನಾವಿಬ್ಬರು ಕುಂಬ್ಳೆಯವರೇ ಆಗಿದ್ದೆವು.ನಾವಿಬ್ಬರು ಕಡೆ ಕ್ಷಣದ ಗೊಂದಲ  ಬೇಡ ಎಂದು ಒಂದು ತಿಂಗಳ ಮುಂಚಿತವಾಗಿಯೇ ಬೆಂಗಳೂರಿಗೆ ೨೨ ರ ರಾತ್ರಿಯ ಟ್ರೈನ್ ,೨೪ ರ ಹಗಲಿನ ಟ್ರೈನ್ನಲ್ಲಿ ಬೆಂಗಳೂರ್ ನಿಂದ   ನಾಗ್ಪುರ್ ಗೆ ಟಿಕೆಟ್ ಕಾಯ್ದಿರಿಸಿದೆವು. ಇಲ್ಲಿವರೆಗೆ ನಮ್ಮಿಬ್ಬರ ಅದೃಷ್ಟ ತುಂಬಾ ಒಳ್ಳೇದಿತ್ತು ನೋಡಿ ಯಾವುದೇ ತೊಂದರೆ ಇಲ್ಲದೆ ಎಲ್ಲಾ ಕೆಲಸ ಮುಗಿದಿದ್ದವು .
 
ಆಗಸ್ಟ್ ೨೨ : ನಾನು ಮನೆಯಿಂದ ಹೊರಡಬೇಕಾದ ದಿನ ಬಂತು ನೋಡಿ, ಅದೃಷ್ಟವೂ ಉಲ್ಟಾ ಹೊಡೆಯಲಾರಂಬಿಸಿತು.ಮಳೆಗಾಲದ ದಿನ ಆದುದರಿಂದ ಮಳೆ ಏನೋ ಜೋರಾಗಿ ಬಿಳುತಿತ್ತು,ಅಲ್ಲಿವರೆಗೆ ಸರಿ ಇದ್ದ ಮನೆಯ ಲ್ಯಾಂಡ್ ಲೈನ್ ಅಂದು ಕಡಿತ ಗೊಂಡಿತು. ಪ್ರತಿಯೊಂದು ವಿಷಯಕ್ಕೆ ಅರವಿಂದ್ ಗೆ  ಕರೆ ಮಾಡುವುದು ಅನಿವಾರ್ಯ, ನಮ್ಮ ಮನೆ ಮಟ್ಟಕ್ಕಿಂತ ಕೆಳಗಿರುವುದರಿಂದ ಮೊಬೈಲ್  ವ್ಯಾಪ್ತಿ ಪ್ರದೇಶದಿಂದ ಹೊರಗಿರುತ್ತದೆ !!
ಬೆಳಗ್ಗೆ ಎದ್ದವನೇ ಈ ಫೋನ್ ಸರಿ ಮಾಡುವ ಕೆಲಸ ನನ್ನದಾಗಿತ್ತು, ನನ್ನ ಪುಣ್ಯಕ್ಕೆ ಫೋನ್ ಆಫೀಸ್ ನಲ್ಲಿನ ನೌಕರ ಬೇಗನೆ ಸರಿ ಮಾಡಿದ ಲೈನ್  ಒಂದು ಮಜಲು ಪಾರದೆ ಅಂದು ಕೊಂಡೆ..
ಕೊನೆಯ ಕ್ಷಣದ ತಯಾರಿ ಎಲ್ಲಾ ಮುಗಿದಿತ್ತು, ಸಂಜೆ ೫ ರ ಸುಮಾರಿಗೆ ಮಂಗಳೂರಿಗೆ ಹೊರಡುವ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದೆವು ,ಅರವಿಂದ್ ಗು ಕಾಲ್ ಮಾಡಿ ಮನೆ ಗೆ ಬರಲು ಹೇಳಿದೆ .
೫ ರ ಸುಮಾರಿಗೆ ಮನೆಯವರ ಆಶಿರ್ವಾದ ದೊಂದಿಗೆ ಮನೆ ದೇವರ ಆಶಿರ್ವಾದನೂ  ಜೊತೆಗೆ ಇಟ್ಟುಕೊಂಡು ನನ್ನ ವ್ರತ್ತಿಯ ಕರೆಎಡೆಗೆ ಪ್ರಯಾಣ ಆರಂಬಿಸಿದೆ.

ಇಲ್ಲಿಯೇ ನನ್ನ ಧುರಾದೃಷ್ಟದ ಸರಮಾಲೆ ಆರಂಭವಾಗುವುದು.
ನನ್ನ ೩ ಬ್ಯಾಗ್ಸ್ ಅರವಿಂದನ ೩ ಬ್ಯಾಗ್ಸ್ ಜೊತೆಯಲ್ಲಿ ನಮ್ಮನ್ನು ಮೆಟ್ಟಿದ  ಧುರಾದೃಷ್ಟದ ಭೂತ ನಮ್ಮಿ ವಿನೋದದ ಪ್ರಯಾಣದ ಭಾಗವಾಯಿತು.
 
ಆಶ್ಚರ್ಯದ ಮಾತು ಅಂದು ಕೇರಳದಲ್ಲಿ ಯಾವುದೇ ಹರತಾಳ ವಿಲ್ಲದಿರುವುದು ,ಕಾಸರಗೋಡು ಜಿಲ್ಲೆ ಹರತಾಳಕ್ಕೆ ತುಂಬಾ ಹೆಸರುವಾಸಿ ಆಗಿದೆ, ಯಾವುದೇ ನಾಯಕ ಕಿತ್ತಾಡಿ ಸಾಯಲಿ , ಬೆಲೆ ಏರಿಕೆ ಆಗಲಿ , ಪಕ್ಕದ ಮನೆಯ ಬಾಗಿಲು ಯಾರೋ ಅಜ್ನ್ಯಾಥರು ಬಡಿದರೂ ಇಲ್ಲಿ ಹರತಾಳ ವಾಗುತ್ತದೆ. ಅಂದು ನನ್ನ ಅದೃಷ್ಟ ಚೆನ್ನಾಗಿತ್ತು  ಬಸ್ ಗಳು ಏನೋ ಸಂಚರಿಸುತಿದ್ದವು ಕುಂಬ್ಳೆ ಇಂದ ksrtc ಹಿಡಿದು ಕೊಂಡೆವು, ಇದೊಂದೇ ಅಂದು ನನ್ನ ಪರವಾಗಿದ್ದ ಅದೃಷ್ಟ !!!
 ಬಸ್ ತುಂಬಿ ತುಳುಕುತಿತ್ತು, ನಾವಿಬ್ಬರು, ನಮ್ಮಿಬ್ಬರ ತಂದೆಯಂದಿರು , ಜೊತೆಗೆ ನಮ್ಮ ೬ ಬ್ಯಾಗ್ಸ್ ಗಳು ,ಅವನ್ನು ಬ್ಯಾಗ್ಸ್ ಗಿಂತ ಯಕ್ಷಗಾನದ ಜೋಳಿಗೆ ಎನ್ನಬಹುದು , ಅಷ್ಟು ದೊಡ್ಡದಿದ್ದವು.ನಾಲ್ವರಿಗೂ ಬರಿ ನಿಲ್ಲಲು ಸ್ಥಳವಿತ್ತು. ಹೊರಗೆ ಜಡಿ ಮಳೆ , ಪಾಪ ಡ್ರೈವರ್ ಹೊಂಡದ ನಡುವೆ ರಸ್ತೆ ಹುಡುಕುತ್ತಾ ಬಸ್ ಚಲಾಯಿಸುತ್ತಾ ಇದ್ದರೆ ಅಯ್ಯೋ ಪಾಪ ಎಂಬ ಭಾವನೆ ಜಾಗ್ರತ ವಾಗುತಿತ್ತು, ಉಪ್ಪಳದಾಟಿ ಹೊಸಂಗಡಿ ತಲುಪುವ ಹೊತ್ತಿಗೆ ಬಸ್ ನಲ್ಲಿರುವ ಪ್ರಯಾಣಿಕರಿಗೆ ನಿದ್ದೆ ಬಾರದಿದ್ದರೂ ಬಡಪಾಯಿ ಬಸ್ ಮಲಗಿ ಕೊಂಡಿತು. ಪಾಪ ಮೊದಲೇ ದಣಿದಿದ್ದ ಚಾಲಕ ಎಬ್ಬಿಸುವ ಪ್ರಯತ್ನ ಮಾಡಲಿಲ್ಲ. ಪ್ರಯಾಣಿಕರಲ್ಲಿ ಬೇರೆ ಬಸ್ ಹತ್ತಿ ಮಂಗಳೂರು ತಲುಪಿ ಎಂಬ ಪುಕ್ಕಟೆ ಸಲಹೆ ನೀಡುತ್ತಾ ಡಿಪೋಗೆ ಫೋನಯಿಸುತ್ತಾ ಪೊದೆಯ ಮರೆಯಲ್ಲಿ ಮರೆಯಾದ .

ನಾಲ್ಕು ಮಂದಿ ಮತ್ತು ನಮ್ಮ ೬ ಜೋಳಿಗೆ ತುಂಬಾ ನಾಜುಕಿನಲ್ಲಿ ಬಸ್ಸಿಂದ ಇಳಿದು ಹಿಂದಿನ ಬಸ್ಸಿನ ದಾರಿ ಕಾಯುತ್ತ ,ಮಳೆಯಲ್ಲಿ ನೆನೆಯುತ್ತಾ ನಿಂತಿದ್ದೆವು.೫-೧೦ ನಿಮಿಷದಲ್ಲೇ ಇನ್ನೊಂದು ಬಸ್ ಬಂದು ನಮ್ಮನ್ನೆಲ್ಲ ಏರಿಸಿಕೊಂಡು ಮಂಗಳೂರನ್ನು ತಲುಪಿತು.ಸಂಜೆ ೬ :೩೦ ರ ಸಮಯವಾಗಿರಬಹುದು. ಜ್ಯೋತಿ ಸ್ಟಾಪ್ ನಿಂದ ರೈಲ್ವೆ ಸ್ಟೇಷನ್ ಗೆ ೨ ಆಟೋ ಮಾಡಿ ಎಲ್ಲಾ ಸಾಮಾನು ಹಾಕಿ ಕುಳಿತುಕೊಂಡೆವು . ಅದೇ ಸಮಯಕ್ಕೆ ಯಾವುದೊ ಜಾಥ ನಡುವಲ್ಲಿ ಸಿಕ್ಕಿದರಿಂದ ೫ ನಿಮಿಷದ ಪ್ರಯಾಣ ೨೦ ನಿಮಿಷ ತೆಗೆದುಕೊಂಡಿತು. ಅಂತು ಇಂತೂ ನಾವು ಪ್ಲಾಟ್ಫಾರ್ಮ್ ತಲುಪುವಲ್ಲಿಗೆ ಟ್ರೇನು ನಮ್ಮ ಬರುವಿಕೆಗೆ ಕಾಯುತ್ತಿತ್ತು. ಹತ್ತಿ ನಮ್ಮೆಲ್ಲಾ ಸಾಮಾನನ್ನು ಜೋಡಿಸಿದೆವು . ೭:೪೦ ಮಂಗಳೂರಿನಿಂದ ಹೊರಡಬೇಕಿತ್ತು ಆ ಟ್ರೈನ್ , ೮ :೧೦ ಆಯಿತು ಇನ್ನು ಹೊರಡಿರಲಿಲ್ಲ ,ಅರವಿಂದ್ ಕುಂಬ್ಳೆ ಯವನೇ ಆದರೆ ಅಲ್ಲಿಂದ ಒಳಗೆ ಹೋಗ ಬೇಕು ,ಅವನ ತಂದೆಯವರಿಗೆ ಮನೆಗೆ ತಲುಪುವುದು ಹೊತ್ತು ಹೋದಂತೆ ಕಷ್ಟ ವಾಗಬಹುದು ಎಂದು ೭:೪೦ ಕ್ಕೆ ಇಬ್ಬರನ್ನೂ ಬೈ ಬೈ ಮಾಡಿ ಬಿಳ್ಕೊಟ್ಟಿದ್ದೆವು.

ಅಮ್ಮ ಮನೆ ಇಂದ ಚಪಾತಿ,ಪದಾರ್ಥ ಮಾಡಿ ರಾತ್ರಿ ತಿನ್ನಲು ಕಟ್ಟಿ ಕೊಟ್ಟಿದ್ದರು ಆ ಪೊಟ್ಟಣ ಬಿಚ್ಚಿ ನಾವಿಬ್ಬರು ತಿನ್ನಲು ಶುರು ಮಾಡುತ್ತಿದ್ದಂತೆ
"ಇಂದಿನ ಮಂಗಳೂರ್-ಬೆಂಗಳೂರ್ ಟ್ರೈನ್ ನ ಪ್ರಯಾಣ ರದ್ಧು ಗೊಳಿಸಲಾಗಿದೆ " ಎಂಬ ಅಶರೀರ ವಾಣಿ ಮೊಳಗುತ್ತಿದ್ದವು.
ತಿಂಡಿ ಇನ್ನು ಸೇರಲಿಲ್ಲ ಕೈಯಲ್ಲಿದನ್ನು ಅಲ್ಲೇ ಇದ್ದ ಬೇಡುವ ಹುಡುಗನ ಕೈಯಲ್ಲಿಟ್ಟು ಅರವಿಂದ್ ನಲ್ಲಿ "ನೀನು ಇಲ್ಲೇ ನಿಂತಿರು ನಾನು ಏನೀ ವಿಚಾರ ಕೆಳಿಬರುತ್ತೇನೆ "ಎಂದು ರೈಲಿನಿಂದ ಇಳಿದೆ , ಆಗ ಗೊತ್ತಾದಂತೆ ಅಂದು ಸಕಲೇಶಪುರ ಘಾಟಿ ಯಲ್ಲಿ ಯಾವುದೊ ಗೂಡ್ಸ್ ಗಾಡಿ ಹಳಿ ತಪ್ಪಿರುವುದರಿಂದ ಪ್ರಯಾಣ ರದ್ದುಗೊಳಿಸಲಾಗಿತ್ತು .
ಅಲ್ಲೇ ಇದ್ದ tc  ಗೆ ಕೇಳಿದಾಗ "ಟಿಕೆಟ್ ಕ್ಯಾನ್ಸಲ್ ಮಾಡಿ ಫುಲ್  ಹಣ ವಾಪಸ್ಸು ಸಿಗುತ್ತದೆ "ಅಂದ.
"ಎಷ್ಟು ದಿನದ ಒಳಗಾಗಿ ಕ್ಯಾನ್ಸಲ್ ಮಾಡಬೇಕು ?"
"ಮುಂದಿನ ೪ ದಿನದಲ್ಲಿ ಮಾಡಬಹುದು."
ಅಲ್ಲಿಂದ ಟಿಕೆಟ್ ಕೌಂಟರ್ ಕಡೆಗೆ ನಡೆದೆ ಬರೋ ಬರಿ ೨೦೦-೩೦೦ ಮಂದಿ ಟಿಕೆಟ್ ಕ್ಯಾನ್ಸಲ್ ಗೆ ಆಗಲೇ ಲೈನ್ ಗೆ ನಿಂತಿದ್ದರು :(
ಪುನಃ ಟ್ರೈನ್ ಹತ್ತಿದೆ ಪಾಪ ಅರವಿಂದ್ ನನಗಾಗಿ ಕಾಯುತಿದ್ದ .
"ಏನಾಯಿತೋ? ಟ್ರೈನ್ ಹೋಗಲ್ವಾ ? ಬೆಂಗಳೂರ್  ಹೇಗೆ ತಲುಪುವುದು?"
"ಏನಿಲ್ಲ ಹೇಳ್ತೇನೆ , ಬಾ ಹೋಗುವ ksrtc ಯ ಯಾವುದಾದರು ಬಸ್ ಸಿಗುತ್ತದ ನೋಡೋಣ... ಟಿಕೆಟ್ ಕ್ಯಾನ್ಸಲ್ ಟೈಮ್ ಸಿಕ್ಕಾಗ ಮಾಡಿದರಾಯಿತು ... ನಡಿ ಬೇಗ ಹೋಗುವ ಇಲ್ಲಾಂದ್ರೆ  ಬಸ್ ಫುಲ್ ಆಗಬಹುದು ..."
ಇಬ್ಬರಿದ್ದೆವು ಹೇಳಿದಂತೆ ೬ ದೊಡ್ಡ ದೊಡ್ಡ ಜೋಳಿಗೆಗಳು ,ಇರುವುದು ನಾಲ್ಕೇ ಕೈ !!! ಹೇಗೋ ಅಡ್ಜಸ್ಟ್ ಮಾಡಿಕೊಂಡು ಎಂಟರೆನ್ಸೆ ಗೆ ಬಂದೆವು . ನೋಡುವಾಗ ಹೊರಗೆ ಧಾರಾಕಾರ ಮಳೆ. ಉಳಿದದಿನ ೨೦-೨೫ ಆಟೋ ಕಾಯುತ್ತ ನಿಂತಿರುತ್ತಿದ್ದವು ಇವತ್ತು ಒಂದು ಇಲ್ಲ :(
ಅರವಿಂದ್ ನಲ್ಲಿ "ನೀನು ಇಲ್ಲೇ ನಿಂತಿರು ನಾನು ಮೇಲೆ ಹಂಪನಕಟ್ಟೆ ಗೆ ಹೋಗಿ ಆಟೋ ತಕೊಂಡು ಬರ್ತೇನೆ "
ಜಡೆ ಮಳೆಯಲ್ಲಿ ಒಂದೂ ಆಟೋ ದ ಪತ್ತೆ ಇಲ್ಲ. ಮೇಲೆ ಸಿಗ್ನಲ್ ಹತ್ತಿರ ಬರುತ್ತಿದ್ದಾಗ ಒಂದೂ ಆಟೋ ಸಿಕ್ಕಿತು ಅವನನ್ನು ಕರಕೊಂಡು ರೈಲ್ವೆ ಸ್ಟೇಷನ್ ಗೆ ಹೋಗಿ ಎಲ್ಲಾ ಲೋಡ್ ಮಾಡ್ಕೊಂಡು ಬಿಜೈ ತಲುಪುವಾಗ ಬರೋ ಬರಿ ೯:೧೫ ದಾಟಿತ್ತು .
ಸಾಮಾನನ್ನು ಅನ್ ಲೋಡ್ ಮಾಡಿ ಅರವಿಂದ್ ಗೆ ಕಾವಲು ನಿಲ್ಲಿಸಿ ksrtc ಟಿಕೆಟ್ ಕೌಂಟರ್ ಗೆ ಹೋದೆ .
"ಬೆಂಗಳೂರಿಗೆ ನೆಕ್ಷ್ಟ್ ಬಸ್ ಎಷ್ಟೊತ್ತಿಗೆ ?"
"ಸರ್ ೧೦:೧೦ ರ ವೋಲ್ವೋ ದಲ್ಲಿ ಒಂದೂ ಸೀಟ್ ಇದೆ ಕೊಡ್ಲಾ?"
"ಬೇಡ ಇಬ್ಬರಿದ್ದೇವೆ ..."
"೧೦:೪೦ ಕ್ಕೆ ಒಂದಿದೆ ರಾಜಹಂಸ ,೧೦:೫೦ ಕ್ಕೆ ಕೊನೆಯ ಬಸ್ ...."
"ಅರೆ ಏನಪ್ಪಾ.. ೯:೩೦ ಇಂದ ೧೦:೪೫ ರ ಮದ್ಯ ಬಸಿಲ್ಲವೇನೋ?"
"ಇಲ್ಲಾ ಸರ್ ಇವತ್ತು  ರಾತ್ರಿಯ ಮಂಗಳೂರಿಂದ ಹೊರಡುವ ೧೦ -ಉಡುಪಿ ಇಂದ ಹೊರಡುವ ೪ ,ಕುಂದಾಪುರದಿಂದ ಹೊರಡುವ ೨ ಬಸ್ ಟ್ರಿಪ್ ಕ್ಯಾನ್ಸಲ್ ಮಾಡಿ ಬೆಂಗಳೂರಿನಿಂದ ಇವತ್ತು ಹೋರಾಡುತ್ತಿದೆ ..."
"ಯಕ್ಕಪ್ಪ ಕ್ಯಾನ್ಸಲ್ ಆಯಿತು ...? ಗೂಡ್ಸ್ ಗೀಡ್ಸ್ ಏನಾದ್ರು ಬಿತ್ತಾ ಶಿರಾಡಿ ಘಾಟಿ ಯಲ್ಲಿ?"
"ಅಲ್ಲ ಸರ್ ... ನಾಳೆ ಹಬ್ಬ ಅಲ್ಲ ... ಬೆಂಗಳೂರಿನಿಂದ ಊರಿಗೆ ಬರುವ ಪ್ರಯಾಣಿಕರು ಜಾಸ್ತಿ ಇರ್ತಾರಂತ ಈ ಟ್ರಿಪ್ ಕ್ಯಾನ್ಸಲ್ ಮಾಡಿದ್ದರಷ್ಟೇ ..."
"ಸರಿ ಬಿಡಪ್ಪ ... ನಮಗೆ ೨ ಟಿಕೆಟ್ ಕೊಟ್ಟುಬಿಡು ೧೦:೪೦ ರಲ್ಲಿ "
"ಸರಿ ಸರ್ "

ಹಾಗೆ ಟಿಕೆಟ್ ಪಡಕೊಂಡು ೨ ಚೈರ್ ಮೇಲೆ ನಾವಿಬ್ಬರು ಕುಳಿತುಕೊಂಡೆವು . ಇನ್ನು ಒಂದೂವರೆ ಗಂಟೆ ಕಾಲಹರಣ ಹೀಗೆ ಮಾಡುವುದಪ್ಪಾ ಎಂದು ಆಲೋಚಿಸುತಿದ್ದೆವು.ಆಗ ಮನೆಗೆ ಕಾಲ್ ಮಾಡುವ ಆದ ಸಮಾಚಾರ ತಿಳಿಸುವ ಎಂದು ಮೊಬೈಲ್ ನಲ್ಲಿ ನಂಬರ್ ಆಯಿಸಿದೆ
"ದಯವಿಟ್ಟು ನಿಮ್ಮ ಅಕೌಂಟ್ ಅನ್ನು ರೀಚಾರ್ಜ್  ಮಾಡಿ ..."ಎಂಬ ಅಸಾಯಕ ವಾಣಿ ಬಂದಾಗಲೇ ಅರಿವಾದದ್ದು ... ಮನೆಯ ಫೋನ್ ಸರಿ ಇಲ್ಲದಿದ್ದಾಗ ನನ್ನ ಮೊಬೈಲ್ ನಲ್ಲಿನ ಎಲ್ಲಾ ಕರೆನ್ಸಿ  ಖಾಲಿ ಆಗಿರುವುದು .....
೯ :೩೦ ಅದೂ ಮಂಗಳೂರಿನ ಮಳೆಯ ರಾತ್ರಿ ಯಲ್ಲಿ ಎಲ್ಲಪ್ಪಾ ಟಾಪ್-ಅಪ್ ಅಂಗಡಿ ಹುಡುಕುವುದು ....
ಅರವಿಂದ್ ನಲ್ಲಿ "ನೀನು ಕಾವಲು ಕಾಯಪ್ಪಾ... ನಾನು ನನ್ನ ಮೊಬೈಲ್ ಗೆ ಟಾಪ್-ಅಪ್ ಸಿಗುತ್ತದಾ ನೋಡಿ ಬರ್ತೇನೆ  "ಎಂದವನೇ ಮಳೆಯಲ್ಲಿ ಅಂಗಡಿ ಹುಡುಕಲು ಆರಂಬಿಸಿದೆ.

ಹೊರಗೆ ಬಂದವನಿಗೆ ಎಲ್ಲಾ ಮುಚ್ಚಿದ ಅಂಗಡಿಗಳೇ ಎದುರಾದವು ... ಎಲ್ಲಿಂದ ಹಾಕಿಸುದಪ್ಪಾ ಟಾಪ್-ಅಪ್ ಎಂಬ ಚಿಂತೆ...
ದೂರದಲ್ಲಿ "IDEA" ದ board ನೇತುಹಾಕಿದ್ದು ಕಣ್ಣಿಗೆ ಬಿತ್ತು . ಅಲ್ಲಿಗೆ ನಡೆದೆ , "ಅಣ್ಣ ಈ ನುಂಬರ್ ಗೆ ಫುಲ್ talktime ಇರೋ ಟಾಪ್ ಅಪ್ ಹಾಕಪ್ಪ .."
"೧೧೧ ಹಕ್ಲಾ?"
"ಬೇಡ ತುಂಬಾ ದೂರ ಹೋಗುವವನಿದ್ದೇನೆ ೩೩೩ ಹಾಕು "
"ಅಣ್ಣಾ ನನ್ನ ಮೊಬೈಲ್ ನಲ್ಲಿ ಬ್ಯಾಲೆನ್ಸ್ ಇಲ್ಲ ಈಗ ೧೧೧ ಹಾಕುತ್ತೇನೆ ನಾಳೆ ಬನ್ನಿ ೩೩೩ ಹಾಕಿ ಕೊಡ್ತೇನೆ "
"ಸರಿಯಪ್ಪಾ ೧೧೧ ಹಾಕು ...."
ಅಂತು ಇಂತು ಮೊಬೈಲ್ ಗೆ ಹಣ ಹಾಕಿಸಿ ಪುನಃ ಬೆಂಚಿ ನೆಡೆಗೆ ಬಂದೆ .
ಕಾವಲು ಕುಳಿತಿದ್ದ ಅರವಿಂದ ತನ್ನ ಬ್ಯಾಗ್ ನೊಂದಿಗೆ ಏನೋ ಸರಹ ಆಡುತಿದ್ದ
"ಏನಾಯ್ತು? "
"ತರಾತುರಿಯಲ್ಲಿ ಜಿಪ್ ಕೈಗೆ ಬಂತು "
"ಅರೆ ನಮ್ಮ ದುರಾದೃಷ್ಟವೇ ...!!!! ಸರಿ ಇನ್ನು ನಮ್ಮಲ್ಲಿ ೪೦ ನಿಮಿಷ ಉಳಿದಿವೆ... ನೋಡುವ ....ಸೂಜಿ ದಾರ ಸಿಗುತ್ತದ ನೋಡಿ ಬಾ.. ಇದ್ದರೆ ಇಲ್ಲೇ ಬ್ಯಾಗ್ ರೆಪೇರಿ ಅಂಗಡಿ ತೆರೆಯುವ !!!  " 
ಅವ ಅದೆಲ್ಲಿಂದಲೋ ಸೂಜಿ ದಾರ ತಕೊಂಡು ಬಂದ .ತರಾತುರಿಯಲ್ಲಿ ಬ್ಯಾಗ್ ಹೊಲಿದು ಮುಗಿಸಿದೆವು . ಮನೆಗೆ ಕರೆ ಮಾಡಿ ಎಲ್ಲಾ ವಿಷಯ ತಿಳಿಸುವ ಹೊತ್ತಿಗೆ ೧೦:೪೦ ರ ರಾಜಹಂಸ ಹಂಸನಡಿಗೆ ಯಲ್ಲಿ ನಮ್ಮತ್ತ ಬರುತ್ತಿತ್ತು. ಎಲ್ಲಾ ಜೋಳಿಗೆ ಲಗೇಜ್ ನಲ್ಲಿ ಹಾಕಿ  ನಾವಿಬ್ಬರು ಬಸ್ಸ ಏರಿದೆವು .
"ಅರೆ ಕುಡ್ವ ತು ಕಷಿ ಹಂಗಾ?? "(ಕುಡ್ವಾ ನೀನ್ ಹೇಗೆ ಇಲ್ಲಿ ?)
"ಬೆಂಗಳೂರ್ ವಚ್ಚ ಅಷಿಲೆ ಫೈ ಏಕ ಸೆಮಿನಾರ್ ಅಸ್ಸ "(ಬೆಂಗಳೂರಿಗೆ ಹೋಗಲಿಕ್ಕೆ ಇತ್ತು ನಾಳೆ ಒಂದೂ ಸೆಮಿನಾರ್ ಉಂಟು )
"ಅರೆ ಪರಬ್ ಸೊಣು ತು ಸೆಮಿನಾರ್ ಮೊಣು  ಬೆಂಗಳೂರ್ ಮಂಗಳೂರ್ ಮೊಣು ಬೋವ್ನ್ತಾ ಅಸ್ಸ ...ಜವೆಥ್ ಸೈಭಾ ..."(ಹಬ್ಬ ಬಿಟ್ಟು ಬೆಂಗಳೂರ್  ಮಂಗಳೂರ್ ಸೆಮಿನಾರ್ ಅಂತ ತಿರುಗುತಿದ್ದಿ ಯಲ್ಲ..?)
ಕುಡ್ವಾ ನಮ್ಮ batch ನವನೇ ಕಾಲೇಜ್ ನಲ್ಲಿ ಎಲ್ಲಾ ಇ ಅಂಡ್ ಇ ನ ಅಸಿಸ್ಟೆಂಟ್ ಪ್ರೊಫೆಸರ್ ಅಂತ ಕರಿಯುತ್ತಿದ್ದರು.ಇನ್ಫೋಸಿಸ್ ನಲ್ಲಿ ತನ್ನ ಬುದ್ದಿವಂತಿಗೆ ಮತ್ತು ಮಾತಿನ ಚಾಣಿಕ್ಷತೆ ಇಂದ ಆಯ್ಕೆ ಆಗಿದ್ದ.
"ಸೋಡಿ ತು ಇತ್ತೇ ಬೆಂಗಳೂರ್ ಸಾಂಗ್"(ನೀನ್ಯಾಕೆ ಬೆಂಗಳೂರ್ ಹೇಳು )
"ಕಂಯಿ ನಾ ...ಜಲ್ಲೆ ಅಮ್ಗೆಲೇ ಮಂಗಳೂರ್ ರುಣ್"(ಏನೂ ಇಲ್ಲ ...ನಮ್ಮ ಮಂಗಳೂರ್ ನ ಋಣ ಮುಗಿಯಿತು )
"ಏನಾಯಿತು?"
"ಏನಿಲ್ಲ ಕಂಪನಿ ಜೋಯಿನಿಂಗ್  ಆಗಬೇಕು ನಾಡಿದ್ದು ೨೬ ಕ್ಕೆ "
"ಹೋ ಕಾಂಗ್ರಟ್ಸ್,ನೀನಂತು ಭಲೇ ಅದೃಷ್ಟವಂತ !!! ನಾವು ನೋಡು ಇನ್ನೂ ಕಾಯುತ್ತ ಕುಳಿತುಕೊಂಡಿದ್ದೇವೆ ... ನಮ್ಮ ನಂಬರ್ ಯಾವಾಗ ಬರುವುದೋ..?"
"ಅದೃಷ್ಟವಂತ " !!! ಈ ಮಾತಿನ ಅರ್ಥ ಅವತ್ತು ನಮಗಿಂತ ಅರ್ಥ ಮಾಡಿಕೊಂಡವರು ಬೇರೆ ಯಾರು ಇರಲಿಕ್ಕಿಲ್ಲ

ಅದೃಷ್ಟವಂತನ ಇನ್ನೂ ಹಲವು ಅದೃಷ್ಟಗಳು ತುಂಬಿದ  ಅದೇ ಪ್ರಯಾಣದ ಘಟನೆಗಳಿವೆ  ,ಮುಂದೆ ಹೇಳುತ್ತೇನೆ ...
ಕಾಯುತ್ತ ಇರುವಿರಲ್ಲಾ?

ಕಾಮತ್ ಕುಂಬ್ಳೆ :) 

 

ಮುಂದಿನ ಭಾಗ http://sampada.net/blog/kamathkumble/24/09/2010/28070

Rating
No votes yet

Comments