ರಾಮ್ ಅಲ್ಲಾ ಭಾಯೀ ಭಾಯೀ

ರಾಮ್ ಅಲ್ಲಾ ಭಾಯೀ ಭಾಯೀ

ಅರೆ ಏ ಕ್ಯಾ ರಾಮ್ ನಮ್ದೂಗೆ ಸಲುವಾಗಿ ಭಾರತದಾಗೆ ಜನ ಕಿತ್ತಾಡ್ತವ್ರೆ. ಅದೂ ಒಂದು ಎರಡೆ ಜಾಗಕ್ಕೆ, ಏ ಅಚ್ಚಾ ನಹೀ ಭಯ್ಯಾ. ಹೌದು ಅಲ್ಲಾ ನೀವು ಹೇಳಿದ್ದು ಸರೀ ಇದೆ. ನಮಗೆ ವಿಶಾಲವಾಗಿ ಇಲ್ಲಿ ಜಾಗ ಇರೋ ಬೇಕಾದ್ರೆ ಆ ಎರಡು ಎಕರೆಯಲ್ಲಿ ಏನು ಮೆಕ್ಕೆ ಜೋಳ ಬೆಳೆಯಬೇಕಾಗಿದೆಯಾ. ಅದೂ ಅಲ್ಲದೆ ಅದೂ ನನ್ನ ತಮ್ಮನ ಆಸ್ತಿ ಭರತಂದು. ಹಿಸ್ಸೆ ಆಗಿ. ಖಾತೆ ಏರಿಸಿ. ಪಾಣಿನೂ ಅವನ ಹೆಸರಿಗೇನೇ ಇದೆ. ಇದರ ಬಗ್ಗೆ ನಾನು ಮತ್ತೆ ರೀ ಎಂಟ್ರಿ ಕೊಟ್ಟರೆ ನಮ್ಮಮ್ಮ ಉಗೀತಾಳೆ ಅಂದರು ದೇವತಾ ಪುರಷ ರಾಮ್. ನಮ್ದೂ ಅದೇ ಭಯ್ಯಾ. ಮೆಕ್ಕಾ ಮದೀನಾದಾಗೆ ನಮ್ದೂಕೆ ದೊಡ್ಡ ಜಾಗ ಇದೆ. ಇಲ್ಲಿ ಬಂದು ನಾವು ಏನು ಮಾಡಬೇಕು. ಅದೂ ಅಲ್ಲದೆ ಕಳೆದ ಒಂದು ವರ್ಷದಿಂದ ಸ್ಪೈನಲ್ ಕಾರ್ಡ್ ಪ್ರಾಬ್ಲಮ್ ಇರೋದ್ರಿಂದ ಓಡಾಡಕ್ಕೂ ಆಗ್ತಾ ಇಲ್ಲ. ಇನ್ನು ಮೆಕ್ಕಾದಿಂದ ಅಯೋಧ್ಯೆಗೆ ಬರೋದು ಕೈಸೆ ಹೋತಾ ಹೇ ಭಯ್ಯಾ ಅಂದ್ರು ಅಲ್ಲಾ ದೇವರು.

ಸರಿ ಒಂದು ಸಾರಿ ಭೂಮಿಗೆ ಹೋಗಿ ಖುದ್ದಾಗಿ ನಾವೇ ಬುದ್ದಿ ಹೇಳಿ ಬರಣಾ ಆವ್ ಭಯ್ಯಾ ಅಂತಾ. ರಾಮ ಮತ್ತೆ ಅಲ್ಲಾ ಭೂಮಿಗೆ ಬಂದು ಅಯೋಧ್ಯೆ ನೋಡ್ತಿದ್ದಾಗೆನೇ. ಅರೆ ಕ್ಯಾ ಏ ಪುರಾನಾ ಬಂಗಲಾ. ನಮ್ದೂಕೆ ಇಲ್ಲಿ ಉಳಿಯೋದು ಬಹೂತ್ ಕಷ್ಟ ಹೋತಾ ಹೈ. ಹೇ ನನಗೂ ಅಷ್ಟೇ ಅಲ್ಲಾರವರೆ. ಫ್ಯಾನ್ ಇಲ್ಲದೆ ನಿದ್ದೇನೇ ಬರಲ್ಲಾ ಅಂತೀನಿ. ಒಮ್ಮೊಮ್ಮೆ ಕರೆಂಟ್ ಹೋದಾಗ ಸೀತೆ ಸೈಡಿಗೆ ಕೂತು ಗಾಳಿ ಹೊಡಿತಾಳೆ. ಅಯ್ಯಯ್ಯಪ್ಪಾ ನನ್ಕಯಲ್ಲಂತೂ ಆಗಲಪ್ಪ ಅಂದ ರಾಮ. ಅಯ್ಯೋ ಈ ಮನೇನಾ ದಿನಾ ಕಸ ಹೊಡಿದು ಸಾರಿಸಿದ್ರೆ ನನ್ನ ಹೆಣ ಬಿದ್ದು ಹೋಗುತ್ತೆ ಅಂದಳು ಸೀತೆ. ಸರಿ ಇದು ಇಬ್ಬರಿಗೂ ಬೇಡ ಅಂದ್ ಮೇಲೆ ಇನ್ನು ರಾಜಕಾರಣಿಗಳಿಗೆ ಇದು ನಮಗೆ ಬೇಡ ಏನಾದ್ರೂ ಕಾಂಪ್ಲೆಕ್ಸ್ ಕಟ್ಟಿಕೊಳ್ಳಿ ಅಥವಾ ಇನ್ಯಾದುಕ್ಕಾದ್ರೂ ಬಳಸಿಕೊಳ್ರಿ ಅಂತಾ ಹೇಳೋಣ ನಡೀರಿ ಎಂದು ಮೊದಲು ವಾಜಪೇಯಿ ಮನೆಗೆ ಹೋದರು. ನೋಡಿ ಸರ್ ಇವರು ಅಲ್ಲಾ , ನಾನು ರಾಮ, ಇವಳು ನನ್ನ ಹೆಂಡ್ತಿ ಸೀತೆ ಅಂತಾ. ಮತ್ತೆ ಮಕ್ಕಳು ಎಲ್ಲಿ. ಯಾರು ಲವ, ಕುಶನಾ ಅವರಿಬ್ಬರೂ ಶಾಲೆಗೆ ಹೋಗಿದಾರೆ. ನೋಡಿ ವಾಜಪೇಯಿಯವರೆ ನಮ್ಮಿಬ್ಬರಿಗೂ ಈ ಜಾಗ ಬೇಡ. ನಮಗೆ ಮೇಲುಗಡೆ 1000 ಬೈ 1000ನಲ್ಲಿ ಅರಾಮಾಗಿದೀವಿ. ಸುಮ್ನೆ ಯಾಕೆ ಗಲಾಟೆ ಅಂದ್ರು. ದೇಖೋ ಭಯ್ಯಾ ಏ ಹಮ್ಕೊಭೀ ನಹೀ ಚಾಹತಾ. ಆದರೆ ಏನು ಮಾಡೋದು ನಾವು ರಾಮ ಅನ್ನಲಿಲ್ಲ ಅಂದ್ರೆ ಹಿಂದುಗಳು ಓಟೇ ಹಾಕೋದಿಲ್ವೇ. ನಾನು ಪ್ರಧಾನಿ ಮಂತ್ರಿಯಾಗಿದ್ದು ನಿಮ್ಮ ದಯೆಯಿಂದ ಅಂತಾ 1001 ಇಟ್ಟು ಪಾದಪೂಜೆ ಮಾಡಿದ್ರು. ನಿಮಗೆ ಬೇಡ ಅಂದ್ರೂ ನಮಗೆ ಬೇಕು ತಾವು ಇನ್ನು ಹೊರಡಬಹುದು ಅಂದ್ರು ವಾಜಪೇಯಿ.

ಸರಿ ಸೋನಿಯಾ ಗಾಂಧಿ ಹತ್ತಿರ ಹೋಗಿ ಪರಿಚಯ ಮಾಡಿಕೊಂಡರು. ಹಮಕೋ ಭೀ ಏ ನಹೀ ಸಾಹತಾ. ಮಗರ್ ಮುಸ್ಲಿಂ ಲೋಗೋಕೋ ಏ ಅನ್ಯಾಯ್ ಹೋತಾ. ಸಮಜಾ ಅಂದ್ರು ಸೋನಿಯಾ. ಅಲ್ಲಾ ಮೇಡಂ ಜಾತಿ ಇಡಕಂಡು ನೀವು ಮಜಾ ತಗೊಂತೀರಲ್ಲಾ ಇದು ಸರೀನಾ. ನೋಡಿ ಬಿಜೆಪಿ ರಾಮ ಅಂದ್ ಮೇಲೆ ನಾವು ಅಲ್ಲಾ ಅನ್ನಲೇಬೇಕು ಇಲ್ಲದೇ ಹೋದರೆ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತೆ. ಅಂತಾ ಅಲ್ಲಾನಿಗೆ 2001ರೂಪಾಯಿ ಇಟ್ಟು.  ಲೋಬಾನ ಅಂಗೇ ಸಕ್ಕರೆ ಇಟ್ಟು ಪೂಜೆ ಮಾಡಿದ್ರು. ಅಲ್ಲಾ ನವಿಲು ಗರಿಯಿಂದ ಸೋನಿಯಾ ತಲೆಗೆ ಆಸೀರ್ವಾದ ಮಾಡಿದ್ರು. ಹೊರಗೆ ಬಂದ ಅಲ್ಲಾ ರಾಮ ದುಡ್ಡಿನ ಲೆಕ್ಕ ಹಾಕ್ತಾ ಇದ್ರು. ಸೀತೆ ಏಥೂ ನಡೀರಿ ನ್ಯಾಯಾಧೀಶರ ಹತ್ತಿರ ಹೋಗೋಣ ಅಂದ್ರು.

ಮೂರು ಜನ ನ್ಯಾಯಾಧೀಶರು ಬಾರಿ ತಲೆ ಕೆರ್ಕಂತಾ ಯಾರ ಕಡೆ ನ್ಯಾಯ ಕೊಟ್ಟರೆ ಜಾಸ್ತಿ ಹಡೆದಾಟ ಆಗಬಹುದು ಅಂತಾ ಲೆಕ್ಕಾಚಾರ ಹಾಕ್ತಾ ಇದ್ರು. ನೋಡ್ರೀ ಅಲ್ಲಾ ಅಂದರೆ ಬೇರೆ ಯಾರೂ ಅಲ್ಲಾ ಅವನು ಶಿವ. ನಾನು ರಾಮ ಇದು ಡಬ್ಬಲ್ ಆಕ್ಟಿಂಗ್ ಅಷ್ಟೇನೇ ಅಂದ್ರು. ನೋಡ್ರೀ ನೀವು ದೇವರು ಬಂದಿದೀರಾ ಅಂತಾ ನಮ್ಮ ತೀರ್ಪು ಬದಲಾಯಿಸುವುದಕ್ಕೆ ಆಗುವುದಿಲ್ಲ. ಒಟ್ಟಾರೆ ದೇಶದಲ್ಲಿ ಏನಾಗುತ್ತೆ ಅನ್ನುವ ಕುತೂಹಲ ನಮ್ಮದು ಅಂತಾ ಹೊರಟೇ ಹೋದ್ರು. ಜನದ ಮುಂದೆ ಈ ದೇವರುಗಳು ಹೋದ್ರೆ. ಹೋಗ್ರಯ್ಯೋ ಯಾರ ಕಡೆ ತೀರ್ಪು ಬರುತ್ತೆ, ಎಲ್ಲೆಲ್ಲಿ ಏನಾಗುತ್ತೆ ಅಂತಾ ನಾವು ಕಾಯ್ತಾ ಇದೀವಿ. ನಿಮ್ದು ಒಳ್ಳೆ ಅಂತಾ ಉಗಿದು ಹೋದ್ರು. ಲೇ ಕೇಳ್ರೋ ಇಲ್ಲ ಬ್ರಹ್ಮ ಇನ್ನೊಂದು ಸಾರಿ ಹುಟ್ಟಿ ಬಂದ್ರೂ ಭಾರತವನ್ನು ಬದಲಿಸುವುದಕ್ಕೆ ಆಗುವುದಿಲ್ಲ. ಹೊಡೆದಾಡಿ ಸಾಯಿರಿ. ಮೇಲೆ ಬಂದಾಗ ವಿಚಾರಿಸಿಕೊಳ್ಳುತ್ತೀವಿ  ಅಂತಾ ಮಧ್ಯಾಹ್ನ ಎರಡು ಗಂಟೆ ಫ್ಲೈಟ್ ಗೆ ಅಲ್ಲಾ ರಾಮ ಹೊಂಟೇ ಹೋದ್ರು. ಸೀತಮ್ಮ ಮಾತ್ರ ಜಾಗ ಇಲ್ಲಾ ಅಂತಾ ನೆಕ್ಸಟ್ ಫ್ಲೈಟ್್ಗೆ ಹೋದ್ರು.

Rating
No votes yet

Comments