ಪತ್ನಿಗೇ ಮೋಸ ಮಾಡಿದವನು ನಾಡಿಗೆ ಮೋಸ ಮಾಡನೇ?

ಪತ್ನಿಗೇ ಮೋಸ ಮಾಡಿದವನು ನಾಡಿಗೆ ಮೋಸ ಮಾಡನೇ?

ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದ ವಿದ್ಯಾವಂತೆ ಧರ್ಮಪತ್ನಿಗೇ ಮೋಸ ಮಾಡಿದವನು
ಸಿನಿಮಾ ತಾರೆಯ ಮೈಮಾಟಕ್ಕೆ ಸೋತು, ರಮಿಸಿ, ತಾಯಿಯನ್ನಾಗಿಸಿದ ನಾಯಕನು

ಕರ್ನಾಟಕದ ಜನತೆಯ ಪರವಾಗಿ ತಾನೀ ಮಹತ್ಕಾರ್ಯ ಮಾಡುತ್ತಿದ್ದೇನೆ ಎನ್ನುವನಲ್ಲಾ
ಜನರು ಆರಿಸಿ ಸ್ಥಾಪಿಸಿರುವ ಸರಕಾರವನ್ನು ಕೆಡವಲು ಷಡ್ಯಂತ್ರ ರಚಿಸಿ ಕಾಡುತಿಹನಲ್ಲಾ

ಕರ್ನಾಟಕದ ಎಷ್ಟು ಮಂದಿ ಅವನಲ್ಲಿಗೆ ಹೋಗಿ ಕಾಪಾಡು ಎಂದು ಗೋಗರೆದಿರಬಹುದು?
ಹತ್ತು ಮೂವತ್ತು ಶಾಸಕರ ಬಲದಿಂದ ಹೇಗೆ ನಮ್ಮೀ ನಾಡನ್ನೇ ಗೆದ್ದವನಂತೆ ಆಡಬಹುದು?

ಮನೆಯಲ್ಲಿ ತನ್ನ ಹೆಂಡತಿ ಮಕ್ಕಳ ಪಾಲಿಗೇ ನಿಷ್ಟಾವಂತನಾಗಿ ಉಳಿದು ಬಾಳಲಾಗದವನು
ಇಡೀ ನಾಡಿನ ಜನತೆಗೆ ನಿಷ್ಟಾವಂತನಾಗಿರುತ್ತೇನೆ ಎಂದರೆ ಹೇಗೆ ಆತನನು ನಂಬಬಹುದು?

ನಾಚಿಕೆ ಮಾನ ಮರ್ಯಾದೆ ಮೂರನ್ನೂ ಬಿಟ್ಟು ಸಾರ್ವಜನಿಕವಾಗಿಂತು ನಗ್ನರಾಗುವವರು
ಮೈತುಂಬಾ ಬಟ್ಟೆಯಿಲ್ಲದವರ ಮತ್ತು ಉಣ್ಣಲು ಕೂಳಿಲ್ಲದವರ ಕೂಗನದೆಂತು ಆಲಿಸುವರು?

ಅವರನ್ನು ಇವರು, ಇವರನ್ನು ಅವರು, ಸೋಲಿಸಿ ಪ್ರಜಾಸತ್ತೆಗೆ ಮಾಡದೇ ಇದ್ದು ಅವಮಾನ
ಹೊಸದಾಗಿ ಚುನಾವಣೆ ಘೋಷಣೆಯಾದರೆ ಉಳಿಯಬಹುದೇನೊ ನಮ್ಮ ರಾಜ್ಯದ ಮಾನ!!
*************
ಆತ್ರಾಡಿ ಸುರೇಶ ಹೆಗ್ಡೆ



Rating
No votes yet

Comments