ಸುದ್ದಿ ಚುಟುಕಗಳು - ನಾಲ್ಕು

ಸುದ್ದಿ ಚುಟುಕಗಳು - ನಾಲ್ಕು

ಕುಮಾರ ಗೌಡ ಪತ್ರಿಕಾಗೋಷ್ಟಿಯಲ್ಲಿ ಸಿಡಿಯನ್ನು ಬಿಡುಗಡೆಮಾಡಿ
ಭಾಜಪದ ಮೇಲೆ ಹಣದಾಮಿಷದ ಆರೋಪ ಹೊರಿಸಿಬಿಟ್ಟಿದ್ದಾರಂತೆ,

ಕರಾವಳಿಯ ಆ ಎರಡನೇ ಮನೆಯ ಹೆಣ್ಣು, ನಂದೂ ಕೆಲವು ಸಿಡಿಗಳು
ಬಿದ್ದಿದಾವೆ, ಬಿಡುಗಡೆ ಮಾಡ್ರೀ, ಅಂತ ದುಂಬಾಲು ಬಿದ್ದಿದ್ದಾಳಂತೆ!

****

ಕುಮಾರ ಗೌಡನದ್ದು, ನಕಲಿ ಸಿಡಿ ನಕಲಿ ಸಿಡಿ ಅಂತ, ಅಶೋಕ, ರವಿ,
ಸುರೇಶ ಗೌಡ ಮತ್ತು ಈಶ್ವರಪ್ಪ ಸೇರಿ, ಬಾಯಿ ಬಡ್ಕೊಳ್ತಾ ಇದಾರೆ,

ನಕಲಿ ಸಿಡಿ ಕಾನೂನಿನನ್ವಯ "ರೈಡ್" ಮಾಡಬಹುದೇನೋ ನೋಡ್ರೀ
ಅಂತ ಸುರೇಶ್ ಕುಮಾರ್, ಶಂಕರ್ ಬಿದರಿ ಜೊತೆ ಚರ್ಚಿಸುತ್ತಿದ್ದಾರೆ!

****

ಬೋಪಯ್ಯ ಮತ್ತು ಯಡಿಯೂರಪ್ಪನವರಿಗೆ ಮರ್ಯಾದೆ ಅನ್ನೋದೇ
ಇಲ್ಲ ಅಂತ ಗಂಭೀರ ಆರೋಪ ಮಾಡಿದ್ದಾರಂತೆ ಕುಮಾರ ಗೌಡಪ್ಪ,

ಮೊದಲನೆಯ ಮನೆಯೊಡತಿ, ಅದ್ಯಾಕೋ ಎರಡನೇ ಮನೆಯೊಡತಿಯ
ನೆನೆಸಿಕೊಳ್ಳುತ್ತಾ ಕೇಳುತ್ತಾ ಇದ್ದಳಂತೆ "ಮರ್ಯಾದೆ ಅಂದ್ರೆ ಏನಪ್ಪಾ?"

****

ಇನ್ನು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡದಿದ್ರೆ ತಮಗೆ ಉಳಿಗಾಲ
ಇಲ್ಲ ಅಂತ ಕೈ ಕಮಾಂಡಿನವರು ಮರುಚಿಂತನೆ ನಡೆಸುತ್ತಿದ್ದಾರೆ ಅಲ್ಲಿ,

ಎರಡನೇ ಬಾರಿ ಬಹುಮತ ಸಾಬೀತು ಪಡಿಸಲು ಹೇಳಿದ್ದು ನೀವೇ ಅಲ್ವೇ
ಅಂತ ಭಾಜಪ ನಾಯಕರುಗಳು ಒಳಗೊಳಗೇ ನಗುತ್ತಿದ್ದಾರಂತೆ ಇಲ್ಲಿ!

****

ಬಿಸಿಸಿಐ-ಮೋದಿ ಸಂಧಾನ ಮಾಡಿಕೊಳ್ಳಲು ನ್ಯಾಯಾಲಯ ಇನ್ನೂ
ಕಾಲಾವಕಾಶ ನೀಡಿ ಹೊಸ ಸೂಚನೆ ಹೊರಡಿಸಿದೆ ಅಂತ ಸುದ್ದಿ ಇದೆ,

ದಾಲ್ಮಿಯಾ ಜೊತೆ ಸಂಧಾನ ಮಾಡಿಕೊಂಡವರಿಗೆ ಮೋದಿ ಜೊತೆಗೆ
ಯಾಕಾಗೋದಿಲ್ಲ ಅನ್ನುವ ತರ್ಕವೂ ಹೊಸ ಸೂಚನೆಯಲ್ಲಿ ಅಡಗಿದೆ!

****

ಕಾಂಗ್ರೇಸ್ ಶಾಸಕರಿಂದ ತಾಯಿ ದ್ರೋಹ ಆಗಿದೆಯೆಂದು
ಕಾಂಗ್ರೇಸು ಅಧ್ಯಕ್ಷ ದೇಶಪಾಂಡೆ ಬಾಯ್ಬಿಟ್ಟು ಅಳುತ್ತಿದ್ದರು

ನಕಲಿ ವಿದೇಶೀ ಗಾಂಧಿಯ ಮನೆಯಲ್ಲಿ ಕಾಂಗ್ರೇಸನ್ನು ಅಡವಿಟ್ಟು
ತಾಯ್ನಾಡಿಗೇ ದ್ರೋಹ ಮಾಡಿರುವುದನ್ನು ಅವರೇ ಮರೆತಿಹರು
***

ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments