ದೇಶದ್ರೋಹಿ ಯಾರು...
ಬರಹ
ಇಂದಿನ ವಿಜಯ ಕರ್ನಾಟಕದಲ್ಲಿ ಬುಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರ ಒಂದು ಹೇಳಿಕೆ ಬಂದಿತ್ತು.ಅದನ್ನು ಅರ್ಧ ಓದುವ ಹೊತ್ತಿಗೆ ಬೇಸರಗೊಂಡು ಪೂರ್ತಿ ಓದಲಿಲ್ಲ. ಆಕೆ ಕೊಟ್ಟಿರುವ ಹೇಳಿಕೆ ಆದರೂ ಏನು "ಕಾಶ್ಮೀರ ಭಾರತಕ್ಕೆ ಸೇರಿಲ್ಲ ಬಿಟ್ಟು ಬಿಡಿ" ಎಂದು ಅದು ಅಲ್ಲದೆ ತಮ್ಮ ಹೇಳಿಕೆಯನ್ನು ಆಕೆ ಸಮರ್ಥಿಸಿಕೊಂಡಿದ್ದಾರೆ ಕೂಡ. ಕೇಂದ್ರ ಸರ್ಕಾರ ದೇಶದ್ರೋಹದ ಆರೋಪದ ಮೇಲೆ ಆಕೆಯನ್ನು ಬಂಧಿಸಲು ಆಲೋಚಿಸುತ್ತಿದ್ದಾರೆ ಅಲ್ಲಿತನಕ ಓದಿ ನಿಲ್ಲಿಸಿದೆ.
ನಿಜವಾದ ದೇಶದ್ರೋಹಿಗಳು ಯಾರು? ಹೊರಗಿನಿಂದ ಬರುವವರೆ? ಅಥವಾ ನಮ್ಮಲ್ಲಿಯೇ ಇದ್ದುಕೊಂಡು ಇಂಥಹ ಹೇಳಿಕೆಗಳನ್ನು ಕೊಡುವವರೆ??
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ