ಕನ್ನಡ ನಮ್ಮಿಂದೇನನ್ನು ನಿರೀಕ್ಷಿಸುತ್ತದೆ?

ಕನ್ನಡ ನಮ್ಮಿಂದೇನನ್ನು ನಿರೀಕ್ಷಿಸುತ್ತದೆ?

ಬರಹ

    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ಏಕೀಕರಣದ ಹೋರಾಟದಲ್ಲಿ ತುಂಬ ಮಹನನೀಯರ ಕೊಡಿಗೆಯಿದೆ. ಅವರ ಹೊರಾಟಗಳು ನಿರರ್ಥಕವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಭಾಷೆಗಳು ಅದನ್ನು ಮಾತನಾಡುವ ಜನರಿಂದ ಅದರ ಬೆಳವಣಿಗೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುತ್ತವೆ. ಹೇಗೆ ತಾಯಿ ವೃದ್ದಾಪ್ಯದಲ್ಲಿ ಮಗನ ಪ್ರೀತಿ ಮತ್ತು ಅಶ್ರಯ ಬಯಸುತ್ತಾಳೋ ಹಾಗೇ. ನಮ್ಮ ಭಾಷೆ ವೃದ್ದಾಪ್ಯಕ್ಕೆ ಸರಿದಿದೆ ಎಂದು ನಾನನ್ನುತ್ತಿಲ್ಲ. ಕನ್ನಡಮ್ಮ ಚಿರಯೌವ್ವನೆ. ಆ ಅವಲಂಬನೆಯನ್ನು ನಿರೂಪಿಸಲು ಆ ರೀತಿ ಹೇಳಿದೆ. ಅದು ಸಹಜ ಕೂಡ.
    ನಾನು ಕೆಲ ಸಂದರ್ಭದಲ್ಲಿ ಕನ್ನಡ ಬಲ್ಲವರೂ ಕೂಡಾ ಇಂಗ್ಲಿಷ್ನಲ್ಲಿ ಮಾತನಾಡುವುದನ್ನು ಹಾಗೂ ವ್ಯವಹರಿಸುವುದನ್ನು ಕಂಡಿದ್ದೇನೆ. ಸಮಾನ್ಯವಾಗಿ ಮನೆಯಲ್ಲಿ ಮಾತನಾಡುವಾಗಲು ಇಂಗ್ಲಿಷ್ ತುಂಡುಗಳಂತೆ ವರ್ತಿಸುತ್ತಾರೆ. ಏಕೇ ಆಗೇ ಎಂದು ಕೇಳಿದರೆ, " ಇಂಗ್ಲಿಷ್ ಕಲಿಯಲು" ಎಂದನ್ನುತ್ತಾರೆ. ನಾನು ಇದನ್ನು ಒಪ್ಪುತ್ತೇನೆ. ಭಾಷೆಯನ್ನು ಕಲಿಯಲು ಅದರ ಬಳಸುವಿಕೆ ಮುಖ್ಯವೆಂದು. ಬಳಸುವ ಮೊದಲು ಭಾಷೆಯ ಮೂಲಭೂತಗಳ ಅರಿವಿರಬೇಕು. ಅದು ಸಹ ಇರುವುದಿಲ್ಲ. ಎಲ್ಲ ಬಟ್ಲರ್ ಇಂಗ್ಲಿಷ್!!! ಸಂಪದದ ಪಾಡ್ ಕಾಸ್ಟ್ ನ ಒಂದು ಸರಣಿಯಲ್ಲಿ ನಿಸಾರ್ ಅಹಮದ್ ರ ಮಾತುಗಳನ್ನು ಆಲಿಸುತ್ತಿದ್ದೆ. ಅವರಲ್ಲಿ "ಒಳ್ಳೆಯ" ಇಂಗ್ಲಿಷನ್ನು ಕಲಿಯುವ ಬಗ್ಗೆ ಒತ್ತುಕೊಟ್ಟರು.
     ಮತ್ತೆ ಕನ್ನಡದ ಬಗ್ಗೆ ಬರುವ. ಕನ್ನಡ ಒಂದು ಮುದ್ದಾದ ಭಾಷೆಯೆಂಬುದನ್ನು ಕನ್ನಡದ ಅಭಿಮಾನಿಗಳಿಗೆ ಮತ್ತು ಅದನ್ನು ಬಲ್ಲವರಿಗೆ ಗೊತ್ತು. ಕನ್ನಡದ ಬೆಳೆವಣಿಗೆಗೆ ಕೆಲವು ಧರ್ಮಗಳು ತಮ್ಮ ಬೆಳೆವಣಿಗೆಗೆ ಬೇರೆ ಧರ್ಮದವರನ್ನು ಮತಾಂತರಿಸುವಂತೆ ಮಾಡಬೇಕಾಗಿಲ್ಲ! ನಮ್ಮ ತಾಯಿ ನಮ್ಮಿಂದ ನಿರೀಕ್ಷೆ ಇಟ್ಟುಕೊಳ್ಳುತಾಳೆ ಹೊರತು ತನ್ನದಲ್ಲದ ಮಕ್ಕಳಿಂದಲ್ಲ! ಕನ್ನಡದ ಜವಬ್ದಾರಿ ಕನ್ನಡಿಗರ ಮೇಲೆ ಇದೆ. ಇನ್ಯಾರ ಮೇಲೆ ಇರಬೇಕಾಗುತ್ತದೆ ನಮ್ಮನ್ನು ಬಿಟ್ಟು?!! ಕನ್ನಡ ಮಾತನಾಡುವಾಗ ಆದಷ್ಟೂ ಕನ್ನಡದ ಪದಗಳನ್ನೆ ಬಳಸೋಣ. ಪರಭಾಷೆಗಳ ಪದಗಳನ್ನು ಮಧ್ಯದಲ್ಲಿ ಬಳಸುವುದರಿಂದ ಭಾಷೆಯ ಅಂದ ಕೆಡುತ್ತದೆ. ಇದನ್ನು ಅನುಸರಿಸುವವರಿಗೆ ಗೊತ್ತು ಅದರ ಮುದ! ಬೆಂಗಳೂರಿನಂತ ಬಹುಸಂಸ್ಕ್ರುತಿಯ ಊರುಗಳ ಶಾಪಿಂಗು ಮಾಲ್ ಗಳಲ್ಲಿ ಅಂಗಡಿಯವರ ಹತ್ತಿರ ಕನ್ನಡದಲ್ಲೇ ವ್ಯವಹರಿಸೋಣ. ಬಹುತೇಕರೂ ಕನ್ನಡಬಲ್ಲವರಾಗಿರುತ್ತಾರೆ. ಇದರಿಂದ ಬೆಂಗಳೂರು ಕನ್ನಡಿಗರ ರಾಜಧಾನಿ ಎಂದು ಜ್ನ್ಯಾಪಿಸಿಕೊಟ್ಟಂತಾಗುತ್ತದೆ. ಕನ್ನಡ ಬಳಸುವುದು ಅಭಿಮಾನದ ಸಂಕೇತವಾಗಬೇಕು. ಎಲ್ಲೆಲ್ಲಿ ಕನ್ನಡ ಬಳಸಬಹುದೋ ಅಲ್ಲಿ ಕನ್ನಡವಿರಲ್ಲಿ.
    ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಮತ್ತು ಇಂಗ್ಲಿಷ್ ಒಂದು ಭಾಷೆ ಆಗಬೇಕೆಂಬ ಅಶಯಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಜಯಸಿಗಬೇಕು. ಇದನ್ನು ವಿರೋಧಿಸುವವರಿಗೆ ಇದರ ಬಗ್ಗೆ ತರ್ಕಿಸಬೇಕೆಂದು ಕೇಳಿಕೊಳ್ಳುತ್ತೇನೆ. ಈ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕನ್ನಡ ಬಳಸುವದರ ಬಗ್ಗೆ ಗಂಭೀರವಾಗಿ ಚಿಂತಿಸೋಣ. ಮತ್ತೆ ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.