ತ್ರಿಜ ದೀಕ್ಷೆ!
http://avadhi.wordpress.com/2010/11/01/%E0%B2%B9%E0%B2%BE%E0%B2%97%E0%B2%BE%E0%B2%A6%E0%B2%B0%E0%B3%86-%E0%B2%A7%E0%B2%B0%E0%B3%8D%E0%B2%AE-%E0%B2%8E%E0%B2%82%E0%B2%A6%E0%B2%B0%E0%B3%87%E0%B2%A8%E0%B3%81/
ಈ ಬರಹ ಇಷ್ಟವಾಯ್ತು. ನಿಜಕ್ಕೂ ಹಲವರಿಗೆ ದ್ವಿಜ ದೀಕ್ಷೆಯ ಬದಲು ತ್ರಿಜ ದೀಕ್ಷೆಯ ಅವಶ್ಯಕತೆ ಇದೆ. ಒಂದು ಸಮಾಜದ ಮತ್ತ ಅದರ ವ್ಯಕ್ತಿಗಳನ್ನು , ಅವರ ಚಿಂತನೆಗಳನ್ನು ಗಮನಿಸಿದ ಯಾರಿಗೆ ಆಗಲಿ ಈ ಬರಹದಲಿ ತೂಕ ಅಂತ ಅನ್ನಿಸದೆ ಇರಲ್ಲ.
ಕೆಲವರನ್ನು ಕಂಡಾಗ ... ಅವರಿಗೆ ಯಾವಾಗ ಈ ಕರುಣಾ ದೀಕ್ಷೆ ಸಿಗುತ್ತೋ ಯಾವಾಗ ಅವರು ಮೇಲೆತ್ತಲ್ಪಡುತ್ತಾರೋ ಅನ್ನಿಸದೆ ಇರಲ್ಲ.
"ಮುಗ್ದತೆಯಿಂದ ಮೌಡ್ಯತೆ"ಯ ಕಡೆ ಪಯಣ ...ಅದು ಅಧಪತನದ ಕಡೆಗೆ ಪಯಣ...
ಇದಕ್ಕೆ ಹೋಲಿಸಿದರೆ "ಮುಗ್ದತೆಯಿಂದ ಮೌಡ್ಯತೆ" ಕಡೆ ಪಯಣ ಸ್ವಾಗತಾರ್ಹ.
ಇಂದು ಜನಕ್ಕೆ ಬೇಕಿರುವುದು ದೀಕ್ಷೆಯಲ್ಲ..ದಕ್ಷತೆ. .... ಕಾಯಕದಲ್ಲಿನ, ಜೀವನ ನಿರ್ವಹಣೆಯಲಿನ ದಕ್ಷತೆ! ಮೌಡ್ಯತೆಯ ದೀಕ್ಷೆಯಲ್ಲ.
ಜನ ತಮ್ಮದೇನೋ ದೊಡ್ಡ ಜಾತಿ ಅನ್ನೋ ಭ್ರಮೆಯಲ್ಲಿ ...ಬೇರೆಯವರ ಮನೆಗೆ ಹೋಗಿ (ಊಟ ಮಾಡದೆ) ಅವರನ್ನು ಉದ್ದಾರ ಮಾಡ್ತೀನಿ ಅನ್ನೋವ್ರನ್ನ ನೋಡಿ ನಗಬೇಕು ಅಷ್ಟೇ!