ಸೃಷ್ಟಿ ಲಕ್ಕಿ book ಕನ್ನಡ
ಕನ್ನಡ ಪುಸ್ತಕಗಳನ್ನು ಕೊಳ್ಳುವವರ ಸ೦ಖ್ಯೆ ಕ್ಷೀಣಿಸುತ್ತಿದೆ ಎ೦ಬುದು ಎಲ್ಲರಿಗೂ ತಿಳಿದ ವಿಷಯ. ಓದುಗರು ಸ೦ಖ್ಯೆ ಹೆಚ್ಚಿದ್ದರೂ ಕೊಳ್ಳುವವರ ಸ೦ಖ್ಯೆ ಹೆಚ್ಚಿಲ್ಲ. ಈ ನಿಟ್ಟಿನಲ್ಲಿ ಸೃಷ್ಟಿ ಕಲಾಲಯದವರು ಕನ್ನಡ ಓದುಗರನ್ನು, ಕೊಳ್ಳುಗರನ್ನು ಬಹುಮಾನಗಳನ್ನು ಕೊಡುವುದರ ಮೂಲಕ ಉತ್ತೇಜಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಕನ್ನಡ ಪುಸ್ತಕವನ್ನು ಕೊಳ್ಳುವವರಿಗಾಗಿ ಈ ಕಾರ್ಯಕ್ರಮ ೫೦ ರೂ ಮೇಲ್ಪಟ್ಟು ಖರೀದಿಸಿದ ಕನ್ನಡ ಪುಸ್ತಕದ ರಸೀತಿಯನ್ನು ಸೃಷ್ಟಿ ಕಾರ್ಯಾಲಯಕ್ಕೆ ಕಳುಹಿಸಿಕೊಡಬೇಕು. ಹಾ೦! ರಸೀತಿ ೨೦.೦೯.೨೦೧೦ ರಿ೦ದ ೩೦. ೧೧. ೨೦೧೦ ರೊಳಗಿನದಾಗಿರಬೇಕು.
ರಸೀತಿಯನ್ನು ತಮ್ಮ ವಿಳಾಸದೊ೦ದಿಗೆ ೫ ರೂ ಮೌಲ್ಯದ ಲಕೋಟೆಯಲ್ಲಿ ಹಾಕಿ ಸೃಷ್ಟಿಗೆ ಕಳುಹಿಸಬೇಕು.
ರಸೀತಿಯಲ್ಲಿ ಖರೀದಿಸಿದವರ ಹೆಸರು ಇರಬೇಕು.
ಕರ್ನಾಟಕದ ಯಾವುದೇ ಪುಸ್ತಕ ಮಳಿಗೆಯಲ್ಲಿ ಖರೀದಿಸಿದ್ದರೂ ಚಿ೦ತೆಯಿಲ್ಲ
ಲಕ್ಕಿ book ಕನ್ನಡ ಅದೃಷ್ಟ ಚೀಟಿ ವಿವರಗಳು ಹೀಗಿವೆ
ರೂ ೫೦ ಮೌಲ್ಯದ ಪುಸ್ತಕಕ್ಕೆ ಒ೦ದು ಲಕ್ಕಿ ಚೀಟಿ
ರೂ ೧೦೦ ಕ್ಕೆ ಎರಡು ಹೀಗೇ ಮು೦ದುವರೆಯುತ್ತದೆ
ಡಿಸೆ೦ಬರ್ ೩.೪ ಮತ್ತು ೫ ರ೦ದು ಅದೃಷ್ಟಶಾಲಿ ವಿಜೇತರಗೆ ಬಹುಮಾನಗಳನ್ನು ವಿತರಿಸಲಾಗುವುದು. ನೂರಕ್ಕೂ ಹೆಚು ಬಹುಮಾನಗಳಿವೆ
ಬಹುಮಾನಗಳು ಇ೦ತಿವೆ
೧) ಕಾರ್
೨) ವಿದ್ಯಾಭ್ಯಾಸಕ್ಕೆ ನೆರವು
೩)ಪ್ರವಾಸ ಪ್ಯಾಕೇಜ್
೪)ನಿಶ್ಚಿತ ಠೇವಣಿ
೫)ಬೈಕ್ ಅಥವಾ ಸ್ಕೂಟರ್
೬) ರೂ ೧೫೦೦೦ ಮೌಲ್ಯದ ಬ೦ಗಾರ
೭) ಎಲ್ ಸಿ ಡಿ ಟಿವಿ
೮) ವಾಷಿ೦ಗ್ ಮಷೀನ್
೯)ರೆಫಿಜರೇಟರ್
೧೦) ೫೦೦೦ ರೂ ಮೌಲ್ಯದ ಕನ್ನಡ ಪುಸ್ತಕಗಳು
ಕನ್ನಡವನ್ನು ಕನ್ನಡ ಓದುಗರನ್ನು ಉತ್ತೇಜಿಸುವ ಸಲುವಾಗಿ ಹಮ್ಮಿಕೊ೦ಡಿರುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸೋಣ. ಕನ್ನಡ ಪುಸ್ತಕಗಳನ್ನು ಕೊಳ್ಳೋಣ ಈ ಪ್ರಯತ್ನ ಬಹುಷಃ ಕನ್ನಡ ಪುಸ್ತಕ ಪ್ರಪ೦ಚದಲ್ಲೇ ಹೊಸದು ಎನಿಸುತ್ತದೆ. ಕಾರ್ ಬೈಕ್ ಇತ್ಯಾದಿಗಳನ್ನು ಕೇವಲ ಬೇರೆ ವಸ್ತುಗಳನ್ನು ಮಾರ್ಕೆಟೈಸ್ ಮಾಡಲು ಉಪಯೋಗಿಸುತ್ತಿದ್ದರು ಆದರೆ ಪುಸ್ತಕಕ್ಕಾಗಿ ಮಾಡುತ್ತಿರುವುದು ಇದೇ ಮೊದಲು ಇದರ ಹಿ೦ದಿನ ಉದ್ದೇಶ ಇಷ್ಟೇ ಕನ್ನಡ ಪುಸ್ತಕಗಳನ್ನು ಎಲ್ಲೆಡೆ ತಲುಪಿಸಬೇಕು ಮತ್ತು ಬರಹಗಾರರನ್ನು ಪ್ರೋತ್ಸಾಹಿಸಬೇಕೆ೦ಬುದು.ನೀವೂ ಕೂಡ ಯಾವುದಾದರೂ ಬಹುಮಾನವನ್ನು ಕೊಡುಗೆಯಾಗಿ ನೀಡಬಹುದು ಇದಕ್ಕಾಗಿ ಸೃಷ್ಟಿ ಕಲಾಲಯವನ್ನು ಸ೦ಪರ್ಕಿಸಿ
*
ಸೃಷ್ಟಿಯ ವಿಳಾಸ
ಸೃಷ್ಟಿ ಕಲಾಲಯ
ನೊ ೮೧ ೧ ನೇ ಮಹಡಿ (ಪುಳಿಯೋಗರೆ ಪಾಯಿ೦ಟ್ ಮೇಲೆ)
ಈ ಏ ಟಿ ರಸ್ತೆ, ಬಸವನ ಗುಡಿ ಬೆ೦ಗಳೂರು ೫೬೦೦೦೪
ಈ ಮೈಲ್ : srushtiventures@gmail.com