ಕಡಲೇಕಾಯಿ ಪರಿಷೆ

ಕಡಲೇಕಾಯಿ ಪರಿಷೆ

ಕವನ

ಕಾಯಿ ಕಾಯಿ ಕಡಲೇಕಾಯಿ ಎಲ್ಲಿ ನೋಡಿದರೂ ಕಡಲೇಕಾಯಿ
ಬಸವನಗುಡಿಯ ಕಡಲೇಕಾಯಿ ಪರಿಷೆಯ ಕಡಲೇಕಾಯಿ..

ಸುಂಕೇನಹಳ್ಳಿಯಲ್ಲಿ ಬೆಳೆಯುತ್ತಿದ್ದ ಕಡಲೇಕಾಯಿ
ಬಸವನ ದಾಳಿಗೆ ತುತ್ತಾಗಿ ನಾಶವಾಗುತ್ತಿದ್ದ ಕಡಲೇಕಾಯಿ..
ರೈತರ ಆಕ್ರೋಶಕ್ಕೆ ಬೆದರಿ ಕಲ್ಲಾಗಿ ಹೋದ ಬಸವ
ತಪ್ಪಿನ ಅರಿವಾಗಿ ಕಡಲೇಕಾಯಿ ನೈವೇದ್ಯ ಸಮರ್ಪಿಸಿದ ರೈತರು...

ಬಸವನಗುಡಿಯಾಗಿ ಬದಲಾದ ಸುಂಕೇನಹಳ್ಳಿ..
ಐನೂರುವರ್ಷ ಇತಿಹಾಸದ ಕಡಲೇಕಾಯಿ ಪರಿಷೆ..
ಕಾರ್ತಿಕ ಮಾಸದ ಕಡೆಯ ಸೋಮವಾರದ ಪರಿಷೆ..
ಸಂತೋಷ ಸಂಭ್ರಮ ಸಡಗರದ ಕಡಲೇಕಾಯಿ ಪರಿಷೆ..

ಹಸಿ ಬಿಸಿ ರುಚಿಯಾದ ಚಿಂತಾಮಣಿ ಕಡಲೇಕಾಯಿ...
ಬಡವರ ಬಾದಾಮಿ ಗರಮಾ ಗರಂ ಕಡಲೇಕಾಯಿ
ಕಾಯಿ ಕಾಯಿ ಕಡಲೇಕಾಯಿ ಎಲ್ಲಿ ನೋಡಿದರೂ ಕಡಲೇಕಾಯಿ
ಬಸವನಗುಡಿಯ ಕಡಲೇಕಾಯಿ ಪರಿಷೆಯ ಕಡಲೇಕಾಯಿ..

Comments