ವಿಷ್ಣುವಿ ಮನೆ ಮೇಲೆ ಲೋಕಾಯುಕ್ತ ದಾಳಿ -ಕುರಿತು.
ಕವನ
ಪ್ರಿಯ ಓದುಗರೆ,
ಮಾನ್ಯ ಲೋಕಾಯುಕ್ತರು ಮಾಡುತ್ತಿರುವ ದಾಳಿಯ ಬಗ್ಗೆ ಅಭಿಮಾನ ಮತ್ತು ವಂದನೆಗಳನ್ನು ಹೇಳಿ ಕವನದ ಮಜಲಿನಲ್ಲಿ ಯೋಚಿಸಿ ಬರೆದಿರುವೆ. ಓದಿರಿ.
ಸಿಬ್ಬಂಧಿಯ ಕೊರತೆ
ಲೋಕಾಯುಕ್ತರು ಮಾಡಿದರು
ವಿಷ್ಣುವಿನ ಮನೆ ಮೇಲೆ
ದಾಳಿ;
ಏನೂ ಸಿಕ್ಕಲಿಲ್ಲ
ಕುಡಿದದ್ದೇ ಬಂತು
ಉಪ್ಪು ನೀರು! ;
ಮರು ಪ್ರಯತ್ನವ ಮಾಡಲು
ಸಬ್ ಮೆರಿನ್ ಬಳಸಿ
ಆಳಕ್ಕೆ ಇಳಿಸದರು !
ಮುತ್ತು ರತ್ನ ಇತ್ಯಾದಿ
ಆಸ್ತಿಗಳ
ವಿವರವ ಪಡೆದರು;
ಅವನ್ನೆಲ್ಲಾ
ಮುಟ್ಟುಗೋಲು ಹಾಕಿಕೊಳ್ಳಲು
ಸಿಬ್ಬಂಧಿಯ ಕೊರತೆಯೆಂದು
ಸರ್ಕಾರಕ್ಕೆ ಪತ್ರವ ಬರೆದರು!.
ದೊಡ್ಡವರನ್ನು ಅವರು
ಏನೂ ಮಾಡಲಾಗದು
ಎಂದು ಮತ್ತೊಮ್ಮೆ
ಸಾರಿದರು.
000000000000000
ಕಲ್ಪಿಸಿ,ರಚಿಸಿ ಟೈಪಿಸಿದವರು - ಶಿವಶಶಿ
ದಿನಾಂಕ 3-12-2010
Comments
ಉ: ವಿಷ್ಣುವಿ ಮನೆ ಮೇಲೆ ಲೋಕಾಯುಕ್ತ ದಾಳಿ -ಕುರಿತು.