ಕನ್ನಡದ ಇಂಪು ಕವಿ ಕುವೆಂಪು

ಕನ್ನಡದ ಇಂಪು ಕವಿ ಕುವೆಂಪು

ಕವನ

ಕನ್ನಡದ ಕವಿ ರಸ ಋಷಿ  
"ಶ್ರೀ ರಾಮಾಯಣ ದರ್ಶನಂ" ಖುಷಿ         |೧|  
  
ಮಾನವತೆಯ ಮೂಲಭೂತ  
ಮನುಜಮತ ವಿಶ್ವ-ಪತ                       |೨|  
  
ರತಿ ಹೇಮಾವತಿ ಪತಿ  
ನೀ ಕನ್ನಡದ ಕರುನಾಡು ಸತಿ                 |೩|  
  
ವೇದಋಷಿ ವಾಲ್ಮಿಕಿಯ ಗಂಟು  
ಕನ್ನಡಕ್ಕೆ ನಿನ್ನದೇ ನಂಟು                      |೪|  
  
"ಕೊಲಳಿನಲ್ಲಿ" ಕಾವ್ಯದಾರೆ ಹರಿದು  
ಕಾವೇರಿ ಮಣ್ಣಲ್ಲಿ  ತುಂಬಿಹದು                 |೫|
 
ಕನ್ನಡದ ಕೊರಳಿಗೆ "ಪಾಂಚಜನ್ಯ" ತೆತ್ತು  
ಕನ್ನಡಿಗರ ಧರೆಯಲ್ಲಿ ನಿನ್ನನ್ನು ಹೆತ್ತು            |೬| 


 


"ಕೋಗಿಲೆ" ಯ ರಾಗದ ಸ್ವರದಿ  
ಬಾರಿಸಿದೆ ಕನ್ನಡದ ಗಂಟೆ ಡಿ೦ ಡಿ೦ಮದಿ      |೭|  
  
"ಮಲೆನಾಡಿನ ಮದುಮಗಳು" ಮಗನಾಗಿ  
ಶಿರಿಗನ್ನಡದ ಬರವ ಹೊರುವ ವರವಾಗಿ       |೮|  
  
ಕನ್ನಡ ನಾಡಿನ ಕಣ್ಣ್ ಮಣಿಯಾಗಿ  
ಮನ್ಕುಲದ ರವಿ ಕವಿ ತೇಜನಾಗಿ                |೯|  
  
ಜನನದಲ್ಲಿ ಪುಟ್ಟಪ್ಪನಾಗಿ  
ಜಗದಲ್ಲಿ ಬಹು ದೊಡ್ಡಾಟವಾಡಿ                 |೧೦| 
 
ಈ ಸ್ವರ್ಗ ದಿಂದ ಲೀನನಾದರು  
ಕನ್ನಡದ ಕನ್ನಡಿಯಲ್ಲಿ ಶಾಶ್ವತ ಅಲಿನರು      |೧೧|  
  
ಕಬ್ಬಿಗರಲ್ಲಿ  ಮನದು೦ಬಿ ಕಂಪು  
"ವಿನೂತನ" ಇಂಪು ಕವಿ ಕುವೆಂಪು            |೧೨|   
      
                        ರಚನೆ: ಸಂಜಯ ಉಮರಾಣಿ