ಒಗ್ಗಟ್ಟಿನಲ್ಲಿ ಬಲವಿದೆ!

ಒಗ್ಗಟ್ಟಿನಲ್ಲಿ ಬಲವಿದೆ!

          ‘ಒಗ್ಗಟ್ಟಿನಲ್ಲಿ ಬಲವಿದೆ; ಆ ಬಲದ ಬಡಿತದಿಂದ ಸರಕಾರಗಳನ್ನೂ ಬೇಕಾದಂತೆ ಬಗ್ಗಿಸಿಕೊಳ್ಳಬಹುದು; ಮುಂದಿಡುವ ಡಿಮ್ಯಾಂಡ್ ಸಾಧುವೂ, ಸಿಂಧುವೂ ಆಗಿರದಿದ್ದರೂ ಪರವಾಗಿಲ್ಲ!’ ಎನ್ನುವದಕ್ಕೆ ರಾಜಾಸ್ಥಾನದಲ್ಲಿ ಗುಜ್ಜರರ, ಆಂಧ್ರದಲ್ಲಿ ತೆಲಂಗಾಣರ ವಿಜಯ ಉದಾಹರಣೆ.


ಪ್ರತ್ಯೇಕತಾವಾದವೂ, ಮೀಸಲಾತಿಯ ಶಾಶ್ವತ ಕೈತುತ್ತೂ ಉನ್ನತ ಮೌಲ್ಯಗಳೇನೂ ಅಲ್ಲವೆನ್ನುವುದು ಎಲ್ಲರಿಗೂ ಗೊತ್ತು. ಆದರೂ ಉಪವಾಸ ಮಾಡಿ ಸತ್ತುಹೊಗುತ್ತೆವೆಂಬ ಬ್ಲ್ಯಾಕ್‌ಮೇಲ್‌ನಿಂದ, ರೈಲು-ಬಸ್ಸು ತಡೆದು ಜನತೆಯನ್ನು ಪಟ್ಟಾಡಿಸುವ ಗೂಂಡಾ ಬಲದಿಂದ ಆ ನಾಯಕರು ಕೇಳಿದ್ದನ್ನೆಲ್ಲಾ ಪಡೆದುಕೊಂಡರು! ಇದು ಅವರ ಗೆಲುವಲ್ಲ; ಸರಕಾರಗಳ ಸೋಲು; ಭ್ರಷ್ಟರು ಭ್ರಷ್ಟರಿಗಾಗಿ ನಡೆಸುವ, ಭ್ರಷ್ಟತೆಯ ಹುಳ ಹಿಡಿದ ಸರಕಾರಗಳ ನೈತಿಕ ದೌರ್ಬಲ್ಯ. ತಿಳಿಗಾಳಿ ಬೀಸಿದರೂ ಸಾಕು, ಪಾದಕ್ಕೇ ಮಣಿಯುವಷ್ಟು ನಾಜೂಕು, ಅವು!


ಪ್ರತ್ಯೇಕತಾವಾದದ ಈ ಗುಂಪುಗುಳಿ ಮುಖಂಡರು ಸಾಮಾಜಿಕ ನ್ಯಾಯಕ್ಕಾಗಿ ಕಷ್ಟ-ನಷ್ಟಗಳನ್ನೆದುರಿಸಿ ಪ್ರಾಣಾರ್ಪಣೆಗೂ ಸಿದ್ಧರೆಂದಿದ್ದರಲ್ಲವೇ? ಸರಕಾರ ಮಣಿದು ಅವರ ಆ ಇಷ್ಟಾರ್ಥ ಈಡೇರಿಸಿಕೊಟ್ಟಿರುವುದಕ್ಕೆ “ಕಂಗ್ರಾಚುಲೇಷನ್” ಹೇಳೋಣ. ಆದರೆ ಇವರ ದುಂಡಾವರ್ತಿಯಿಂದಾಗಿ ಸಾರ್ವಜನಿಕರಿಗಾದ ಹಾನಿಗಾಗಿ ಕಾಯ್ದೆ ಪ್ರಕಾರ ವಿಧಿಸಬೇಕಾದ ಜೈಲು-ಜುಲ್ಮಾನೆಗಳಿಂದ ರಿಯಾಯತಿ-ವಿನಾಯತಿಗಳನ್ನು ಕೊಡುವುದು ಮಾತ್ರಾ ಬೇಡ!

Rating
No votes yet

Comments