ಸುಸಂಸ್ಕೃತರ ಸಂಕಟ
ಘನತೆವೆತ್ತ ಒಬ್ಬರ ವಿರುದ್ಧ ಒಂದು ಜಾತಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಬೇಕಾಗಿ ಬಂದ ಪ್ರಸಂಗ, ಮಹನೀಯರೊಬ್ಬರು, ವಾದ್ಯಕಾರರ ಪಾಲಿನ ದೊಡ್ಡ ಮೊತ್ತವನ್ನು ತಾವೇ ಗುಳಕಾಯಿಸಿ ಮೇಲಿಂದ ದುರಹಂಕಾರ ಮೆರೆದೆರೆಂಬ ಆರೋಪ, ಕಲಾವಿದೆಯೊಬ್ಬಳ ಕಣ್ಣೀರಿನ ಪ್ರತಿಭಟನೆಗಳು, ಸಿಟ್ಟನ್ನಲ್ಲ, ಸಂಕಟವನ್ನುಂಟುಮಾಡುತ್ತವೆ. ರಾಜಕೀಯದಂತೆ ಸಾಂಸ್ಕೃತಿಕ ಕ್ಷೇತ್ರವನ್ನೂ ಅಯೋಗ್ಯರೇ ಗುತ್ತಿಗೆ ಹಿಡಿದು ಅದನ್ನು ಅಧೋಮುಖ ಎಳೆಯುತ್ತಿದ್ದಾರೆಂಬ ಭಯ ಉಂಟಾಗುತ್ತದೆ. ಆರಕ್ಕೆ ಹೋಗದೆ, ಮೂರಕ್ಕೆ ಬರದೆ ತಮ್ಮ ಜೀವಿತದ ಪರಿಮಿತಿಯಲ್ಲಿ ತಾವು ರಸಾನುಭಾವ ಕಂಡುಕೊಳ್ಳುವ ರಸಸಂಸ್ಕಾರವಂತರಿಗೆ ಇದು ಸಂಕಟ ತರುತ್ತದೆ.
Rating