ಮರಳಿ ಬಂತು ಯುಗಾದಿ!!!!!!!
ಯುಗಾದಿ ಮತ್ತೊಮ್ಮೆ ಬಂದಿದೆ. ಹೊಸ ವರ್ಷವನ್ನು ಹೊತ್ತು ನಿಂದಿದೆ.
ಈ ಸಂದರ್ಭದಲ್ಲಿ ಎಲ್ಲರ ಮನಸಿನ ಕಹಿಯೂ ಅಳಿಸಿ ಸಿಹಿ ತುಂಬಲಿ. ವಿಕೃತಿ ನಾಮ ಸಂವತ್ಸರ ಹೆಸರಿಗೆ ತಕ್ಕ ಹಾಗೆ ಸಾಕಷ್ಟು ಅಲ್ಲೋಲ ಕಲ್ಲೋಲಗಳನ್ನು ಉಂಟುಮಾಡಿದೆ. ಜಪಾನ್ ನಲ್ಲಾದ ಸುನಾಮಿ ಇಡೀ ಪ್ರಪಂಚವನ್ನೇ ನಡುಗಿಸಿದೆ. ಅವರೆಲ್ಲಗಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತ ನಮ್ಮ ಮುಂದಿರುವ ಹೊಸವರ್ಷದ ಕಂಪನ್ನು ಆಸ್ವಾದಿಸೋಣ.
ನಮ್ಮ ದೇಶದಲ್ಲೂ ಸಾಕಷ್ಟು ಪ್ರಕರಣಗಳು,ವ್ಯವಸ್ಥೆಯಲ್ಲಿನ ಲೋಪದೋಷಗಳು ಜನರ ಊಹೆಗೂ ಮೀರಿ ನಿಂತಿವೆ. ಮುಂದಿನ ಸಂವತ್ಸರದಲ್ಲಿ ಎಲ್ಲವೂ ಸುಗಮವಾಗಿ ಸಾಗಲಿ, ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಅರಿತು ನಡೆಯುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಕಳೆದ ವರ್ಷಕ್ಕಿಂತ ಹೆಚ್ಚು ಜವಾಬ್ದಾರಿಯುತವಾಗಿ, ಸೌಹಾರ್ದಯುತವಾಗಿ ವರ್ತಿಸೋಣ.
ಹೊಸ ವರ್ಷ ಎಲ್ಲರಿಗೂ ಬೆಲ್ಲವಾಗಲಿ.......
ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು :)
Rating