ವಿಶ್ವಕಪ್

ವಿಶ್ವಕಪ್

ಕವನ

 -----ವಿಶ್ವಕಪ್-----

 
ಗೆಲುವು ಬಂದಿದೆ ಹರುಷತಂದಿದೆ
ಭಾರತೀಯರ ಹೃದಯ ತುಂಬಿದೆ.
ವರುಷ ವರುಷದ ಜನರ ಕನಸು
ಇಂದು ಆಗಿದೆ ಅಮರ ನನಸು.
ತುಡಿತ ಮಿಡಿತಗಳ ನೂರು ಕಾತುರ
ಕೊನೆಯು ಮುಟ್ಟಿದ ದಿನವಿದು ರುಚಿರ.
 
ರಣದಿ ನಿಂತ ಪಟುವೀರಶೂರರು
ಹಾಡಿದರಲ್ಲಿ ಜನಗಣಮನ.
ಬೀಷ್ಮ ರೋಮಾಂಚನವು ಅಪ್ಪಿತು
ಕ್ರಿಕೆಟಿನಾಟದ ಅನುಕ್ಷಣ.
 
ಜಯವು ಮೊಳಗಿತು, ದೇಶ ಗೆದ್ದಿತು,
ನಲ್ಮೆ ಚೆಲ್ಲಿತು ಭಾವಕೋಟಿಯ ದರ್ಪಣ.
ಐತಿಹಾಸಿಕ ಗೆಲುವು ಹರಿಸಿದೆ
ಹರ್ಷೋದ್ಗಾರದಲೆಯ ರಿಂಗಣ.
 
ಕ್ರಿಡಾಂಗಣದ ರೋಚಕ ರಂಗದಲಿ,
ಅಂಗಡಿಯ ಗಾಜಿನ ಕಿಟಕಿಯೆದುರಲಿ,
ಮನೆಮನೆಯ ಟಿವಿ ಸೆರೆಯಲಿ,
ಸಾಗುವ ಗಾಡಿಯ ರೇಡಿಯೋವಿನಲಿ,
ಮೊಬೈಲ್ ಮಾತಿನ ಸರಸದಲಿ,
ಕೆಲಸ ಮಧ್ಯೆ ಇಂಟೆರ್ನೆಟ್ಟಿನಲಿ, 
ಮಾಯದಾಟವು ಮೋಡಿಮಾಡಿದೆ ಎಲ್ಲೆಲ್ಲೂ.
ಜಗವ ಬೆರಗೊಳಿಸುವ ತೆರದಿ
ಮೈಮರೆತು ನಲಿದಿದೆ ಮನಗಳೆಲ್ಲೆಲ್ಲೂ.
 
ವಿಶ್ವಕಪ್ಪನ್ನು ಗೆದ್ದ ಪಡೆಯು
ಹಾರಿಸಿದೆ ದಿಗ್ವಿಜಯ ವೈಜಯಂತಿ.
ಅಬಾಲವೃದ್ದ ಹೃನ್ಮನದ ತೋಟದಿ
ಅರಳಿ ನಗುತಿದೆ ವಿಜಯ ಶಾಂತಿ.
 
- ಚಂದ್ರಹಾಸ ( ಏಪ್ರಿಲ್ - ೬ - ೨೦೧೧)