ಯುಗಾದಿ ಕಪ್ಪು

ಯುಗಾದಿ ಕಪ್ಪು

            ಯುಗಾದಿ ಕಪ್ಪು

ಅಲ್ಲ ಕಣ್ರಿ,  ನಮ್ಮ ಕ್ರಿಕೆಟಿಗರು ವರ್ಲ್ಡ್ ಕಪ್ ಗೆದ್ದರೆ ಅದಕ್ಕೆ ಯುಗಾದಿ ನಿಲ್ಲಸಕ್ಕೆ ಆಗುತ್ತಾ,
ಅಗೋ ಹಬ್ಬ ಆಗಲೇಬೇಕು,  ಸಡಗರ ನಡೆಯಲೇ ಬೇಕು.  ಇರಲಿ ಇದ್ಯಾಕೆ ಪೀಠಿಕೆ ಅಂದ್ರಾ ಅಲ್ಲೆ ಕಣ್ರಿ ಸಾರಸ್ಯ್ ಇರೋದು,

ನಮ್ಮ ರಾಮಣ್ಣಿ,  ಎಲ್ಲೋ ಅರ್ಧದಲ್ಲಿ ನ್ಯೂಸ್ ನೋಡೋವ್ನೆ,  ಯಡ್ಡಿ ಯಪ್ಪ ಕಪ್ ಗೆದ್ದರೆ ಸ್ಯೆಟ್ ಅಂತ ವದರಿದ್ದನ್ನ ಕೇಳಿಸ್ಕೊಂಡ,  ಅಲ್ಲೇ ಎಡವಟ್ಟಾಗಿದ್ದು!?

"ಅಲ್ಲಾ ಕಣ್ಲಾ  ಎಲೆ ಆಟ ಆಡವಾ ಬಾರಲಾ, ಯಾವತ್ತು ಯುಗಾದಿನಾಗೆ ನೀನೆ ಹೆಚ್ಚೆಗೆ ಬೆಳಗಾನ ಅಡ್ತಾ‌ಇದ್ದೋನು, ಅಂದ್ರೆ ನಾನ್ ಕೇಳಾಕಿಲ್ಲಾ, ನಾನ್ ಬರಕ್ಕಿಲ್ಲ ಆಂತ ಒಂದೆ ರಗೆಳೆ ಮಾಡ್ತಾವ್ನೆ ರಾಮಣ್ಣಿ" ಅಂದ ನಮ್ಮ ಸೀನಪ್ಪ.

"ಹೋಕಳ್ಳಿ ನಿಂದೇನಲ್ಲಾ ಶರಬತ್ತು (ಶರತ್ತು") ಅಂದ ಸುಮ್ಕಿರ್ಲಾದೆ ನಮ್ಮ ರಮೇಶಿ,

"ಅಂಗನ್ನು ಮತ್ತೆ,  ಅಲ್ಲಾ ನಾವೇನು ಬಾಲು ಬಾಟ್ ಆಡ್ತೀವಾ ಇಲ್ಲಿ,  ಸುಮ್ಕೆನಾ ಎಲೆ ಆಡೋದು ಅಂದ್ರೆ  ಇದಕ್ಕೆನಾಲಾ ಕೋಡ್ತಾರೆ ಸರ್ಕಾರ,
ನಮ್ದೆ ಎಲೆ,  ನಮ್ದೆ ಕಾಸು, ನಮ್ಮ ಗ್ರಾಮೀಣ ಆಟಕ್ಕೆ ಬೆಲೆ ಇಲ್ವೇನ್ಲಾ ಅಂಗಾದ್ರೆ" ಅಂತ ತಗಾದೆ ತೆಗೆದೇಬಿಟ್ಟ.

ಊರಿಗೆ ಒಬ್ಬನೇ ಜಾಣ ಶಿವಣ್ಣ ಹಾಕೊಟ್ಟ .
"ಅದೂ ಸರಿ ಅನ್ನು, ಆದ್ರೆ ನಿಂಗೊಂದು ವಿಷ್ಯ ಗೊತ್ತಿರಲ್ಲ ಬಿಡು ಯಾಕೆ ಅಂದ್ರೆ ನೀವೆಲ್ಲ ಸಿಟಿನಲ್ಲಿ ಇರಲ್ಲಾ ನೋಡಿ.
ಈ ಇಸ್ಪೀಟು  ಒಂತಾರಾ ಇಂಟರ್ ನ್ಯಾಷನಲ್ ಗೇಮ್.  ಯಾಕೆ ಅಂತಿರಾ ಎಲ್ಲಾ ಶ್ರೀಮಂತರೂನು ಇದನ್ನಾ ಆಡ್ತಾರೆ. ಎಲ್ಲಾ ದೇಶದಲ್ಲೊ ಅಡ್ತಾರೆ. ಅದೇ ಪಾರ್ಟಿ ಅಂತಾರಲ್ಲಾ ಅಲ್ಲಿ".  

"ಓ ಅದಾ ಗೊತ್ತು,  ಅದೇ ಗುಂಡು ಪಾರ್ಟಿ" ಅಂತಾರಲ್ಲ ಅಂದ ನಮ್ಮ (ಅ)ವಿವೇಕಿ ರವೇಶಿ..

"ಚೆನ್ನಾಗ್ ಹೇಲ್ದೆ.  ಪರ್ವಾಗಿಲ್ಲ ಕಣಯ್ಯ ಸುಮಾರಾಗೆ ವಿಷಯ ತಿಳ್ಕೊಂಡಿದಿಯಾ,  ಇರಲಿ, ಅಲ್ಲಿ ಎಲ್ಲಾ ದೊಡ್ಡ ಜನ ಆಡ್ತಾರೆ.
 ಅಲ್ಲೂ  ಗೆಲವು ಸೋಲು ಇರುತ್ತೆ" ಅಂದ ಶಿವಣ್ಣ ಸಾಂತ್ವನ ಹೇಳೋ ಹಾಗೆ



"ಅದೆಲ್ಲ ನಂಗೆ ಬ್ಯಾಡ ಅಲ್ಲೂ ಕಪ್ ಕೊಡ್ತಾರಾ,  ಅಲ್ಲೂ ಸ್ಯೆಟ್ ಏನಾದ್ರೊ ಕೊಡ್ತಾರ" ಆಂತ ಧಮಕಿ ಹಾಕಿದ ರಾಮಣ್ಣಿ

"ಕಪ್ ಕೊಡ್ತಾರೆ,  ಕುಡಿಯಕ್ಕೆ  ಅದನ್ನ ಹಿಡ್ಕೋಂಡೆ ಆಡೋದು!  ಅದು ಖಾಲಿ ಆಗ್ತಾ ಇದ್ದಂಗೆ ತುಂಬಿಸ್ತಾರೆ! ಆದ್ರೆ ಸ್ಯೆಟ್ ಯಾರು ಕೊಡಲ್ಲಾ ಕೆಲವರು ಇರೋದನ್ನು ಮಾರಿಕೊಳ್ಳತ್ತಾರೆ" ಆಂದ ಜಾಣ ಶಿವಣ್ಣ.

"ಆದ್ರೆ ಸಿಟಿನಾಗೆ ಪೋಲಿಸ್ನೋರು ಬಂದು ಇನ್ ಫೆಕ್ಷನ್ ಮಾಡಿ ಲಾಕಪ್ ಡೆತ್  ಮಾಡ್ತಾರಂತೆ"  ಅಲ್ವಾ ಗುರುಗಳೆ ಅಂದ ಸೀನಪ್ಪ

"ಊ ಮತ್ತೆ.  ಆಡ್ತಾ ಇರೋರ್ನೆಲ್ಲಾ ರಾಡಿ (ರೈಡ್) ಮಾಡಿ ಏರೋಪ್ಲೆನಾಗೆ ಅತ್ತಿಸ್ತಾರಂತೆ,  ಆಂಗಾರೆ ಇದು ದೊಡ್ಡ ಆಟಾನೆಯಾ" ಅಂದ ಸೀತಾಪತಿ

"ಲೇ ಸುಮ್ಕಿರ್ಲಾ ಪೋಲಿಸ್ನೋರ್ ಆಡ್ದೆರೋ ಆಟ ಎನಲಾ ಅದು.  ಅವರದೇನೇನು ಆಡ್ತಾರೆ" ರಮೇಶಿ ತೋರಿಸಿದ ತನ್ನ ಜಾಣತನ

"ಲೇ ಹೋದ್ ವರ್ಸ  ನಮ್ಮ ರಂಗಮ್ಮನ್ ಗಂಡ ಪುಟ್ನಂಜಪ್ಪ ಫುಲ್ ಟೆಮು ಇದೇ ಅಡ್ಕೋಂಡಿದ್ದಾ. ಹಬ್ಬದಾಗೆ ದುಡ್ಡು ಕಳ್ಕೊಂಡು ನೇಣ್ ಹಾಕೊಂಡ್ ಸತ್ನಲ್ಲಾ ಪುಣ್ಯಾತ್ಮ.  ಸರ್ಕಾರದಿಂದ (ಭ)ಬಡವನ ಸಾವು ಆಂತ ಘೋಷಣೆ ಆಗಿ ರಂಗಮ್ಮ ಒಂದಿಷ್ಟು ದುಡ್ದು  ಈಸ್ಕೊಳಿಲ್ವಾ" ಅಂದ ರಂಗೇಗೌಡ.

"ಅದೇನಾ ನಂಗೊತ್ತಿಲ್ಲಾ ಬೆಳಗಾನ ಆಡಿ ಯುಗಾದಿ ಆಚರಿಸಿರೋದಕ್ಕೆ ನಮಗೆ ಕಪ್ಪು, ಸ್ಯೆಟು ಬೇಕು, ಬೇಕು ಬೇಕು" ಅಂತ ಒದರುತ್ತಿದ್ದಾ ರಾಮಣ್ಣಿ.

ಅವನ ಹೆಂಡತಿ ತೆಂಗಿನ ಚಿಪ್ಪು ಕೊಟ್ಟು ಒಲೆ ಉರಿ ಹಾಕು ಹೋಗು ಮೂದೇವಿ,  ಹಬ್ಬ ಆಗಿ ಏಟ್ ದಿನ ಆತು ಇನ್ನ ಕುಡಿದಿದ್ದು ಇಲಿದಿಲ್ಲ ಮುಂಡೆದಕ್ಕೆ ಅಂತ ಆಟ್ಟಿದಳು. ಮಲಗಿದ್ದವನು ಎದ್ದು ಹೋದ ರಾಮಣ್ಣಿ..

                                                -ಮಧ್ವೇಶ್