ಮತ್ತೆ ಬನ್ನಿ ಅಂಬೇಡ್ಕರ್
ಮತ್ತೆ ಬನ್ನಿ ಅಂಬೇಡ್ಕರ್
ಭೀಮರಾವ ಅಂಬೇಡ್ಕರ್
ನಿಮಗೆ ನಮನವು
ಕ್ಷಮಿಸಿಬಿಡಿರಿ ಬೇಡಿಕೊಳುವೆ
ನಿಮಗೆ ಘಾಸಿ ಮಾಡಿದವರ
ಬಿಟ್ಟು ಬಿಡಿರಿ ದಯಮಾಡಿರಿ
ಮಡಿ ಮೈಲಿಗೆ ಹೆಚ್ಚಿದವರ ||
ತೊರೆಯದಿರಿ ಈ ಭಾರತ
ಮತ್ತೆ ಹುಟ್ಟಿ ಬಂದರಾಗ ||೧||
ಭೀಮರಾವ ಅಂಬೇಡ್ಕರ್
ನಿಮಗೆ ನಮನವು
ಅಂದಿನಂತೆ ಇಲ್ಲವೀಗ
ಅದಲು ಬದಲು ಆಗುತಿಹುದು
ರಾಜಕೀಯ ಭ್ರಷ್ಟವಾಗಿ
ದೇಶ ಕೆಟ್ಟು ಹೋಗುತಿಹುದು ||
ಬಿಡುಗಡೆಗೆ ಧೈರ್ಯ ಸೂರ್ಯ
ಮೂಡುವಾಸೆ ಜೋರು ಇಹುದು ||೨||
ಭೀಮರಾವ ಅಂಬೇಡ್ಕರ್
ನಿಮಗೆ ನಮನವು
ನಿಮ್ಮ ಕೆಚ್ಚು ಹೆಚ್ಚಿ ಎಚ್ಚ
- ರಾಗಬೇಕು ಯುವಕರೆಲ್ಲ
ದಿಟ್ಟ ಹೆಜ್ಜೆ ಇಟ್ಟು ಬೇಗ
ಸಾಗಬೇಕು ಮಿಥ್ಯೆಯಲ್ಲ
ವಿಶ್ವದೆಲ್ಲ ಎಲ್ಲೆ ಮೀರಿ
ಆಗ ನಾವು ಬೆಳೆವೆವಲ್ಲ ||೩||
ಭೀಮರಾವ ಅಂಬೇಡ್ಕರ್
ನಿಮಗೆ ನಮನವು
ಬನ್ನಿ ಮತ್ತೆ ಕೊಳೆಗೇರಿಗ
- ಳಿಲ್ಲದಂತ ದೇಶ ಕಟ್ಟಿ
ತನ್ನಿ ಧೀರ ಸಂದೇಶವ
ದೇಶಭಕ್ತ ವೃಂದ ಹೆಚ್ಚಿ
ಮೋಸ ರೋಗ ರುಜಿನವಿರದ
ಯೋಗಶಾಂತಿ ಕೂಡಿ ಬರಲಿ ||೪||
ಭೀಮರಾವ ಅಂಬೇಡ್ಕರ್
ನಿಮಗೆ ನಮನವು
- ಸದಾನಂದ